ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ದೇವಾಲಯ ಅರ್ಚಕರ ಹುದ್ದೆಗೆ ನಡೆಯದ ಪರೀಕ್ಷೆ: ಸಂಸ್ಕೃತ ವಿದ್ಯಾರ್ಥಿಗಳಿಗೆ ತೊಂದರೆ

ಏಪ್ರಿಲ್‌– ಮೇ ತಿಂಗಳಿನಲ್ಲೇ ಮುಗಿಯಬೇಕಿತ್ತು, ಪತ್ರ ಬರೆದರೂ ಬಾರದ ಸ್ಪಂದನೆ
Published : 11 ಆಗಸ್ಟ್ 2023, 7:55 IST
Last Updated : 11 ಆಗಸ್ಟ್ 2023, 7:55 IST
ಫಾಲೋ ಮಾಡಿ
Comments
1,500 ವಿದ್ಯಾರ್ಥಿಗಳಿಗೆ ತೊಂದರೆ ಅರ್ಚಕರಾಗಲು ಈ ಪರೀಕ್ಷೆ ಪಾಸಾಗಬೇಕು ಇಲಾಖೆಯಿಂದ ಕ್ರಮ ಕೈಗೊಂಡಿಲ್ಲ: ದೂರು
ಪರೀಕ್ಷೆ ಜರುಗದೇ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ಬೇರೆ ವಿದ್ಯೆಗೆ ಹೋಗುತ್ತಿದ್ದಾರೆ. ಅರ್ಚಕ ವೃತ್ತಿಯಿಂದಲೇ ದೂರವಾಗುವ ಸ್ಥಿತಿ ಎದುರಾಗಿದೆ
ಪಿ.ಸತ್ಯನಾರಾಯಣ ಪ್ರಾಂಶುಪಾಲ ಮಹಾರಾಜ ಸಂಸ್ಕೃತ ಪಾಠಶಾಲೆ
ಪ್ರಮಾಣಪತ್ರ ವಿತರಣೆ ಸ್ಥಗಿತ!
ವಿದ್ಯಾರ್ಥಿಗಳಿಗೆ 2009ರಿಂದ ಘಟಿಕೋತ್ಸವ ಪ್ರಮಾಣಪತ್ರ (ಆಗಮ ಪ್ರವರ ಆಗಮ ಪ್ರವೀಣಕ್ಕೆ ಸಂಬಂಧಿಸಿದ್ದು) ಕೊಡುತ್ತಿಲ್ಲ. ಅಂಕಪಟ್ಟಿಯನ್ನು ಮಾತ್ರವೇ ಕೊಡಲಾಗುತ್ತಿದೆ. ಹಿಂದೆ ಮೈಸೂರು ಮಹಾರಾಜರು ಕೊಡುತ್ತಿದ್ದ ಅರ್ಹತಾ ಪತ್ರವದು (ಅನ್ನದ ಚೀಟಿ ಎಂದೂ ಕರೆಯಲಾಗುತ್ತಿತ್ತು). ಅದನ್ನು ಮುಂದುವರಿಸಲಾಗಿತ್ತು. ಇಲಾಖೆಯು ಕ್ರಮೇಣ ನಿಲ್ಲಿಸಿದೆ. ಯಾರೂ ಅಂಕಪಟ್ಟಿಯನ್ನು ಫ್ರೇಮ್‌ ಹಾಕಿಸಿ ಇಟ್ಟುಕೊಳ್ಳುವುದಿಲ್ಲ. ಪ್ರಮಾಣಪತ್ರ ನೀಡಿದರೆ ಅದನ್ನು ಸಂರಕ್ಷಿಸಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಮನವಿ ವಿದ್ಯಾರ್ಥಿಗಳದಾಗಿದೆ.
ಹಸ್ತಾಂತರವಾಗದ ಹಾಸ್ಟೆಲ್‌ ಕಟ್ಟಡ!
ಮೈಸೂರು ಸಂಸ್ಕೃತ ಪಾಠಶಾಲೆಗೆ 2023–24ನೇ ಸಾಲಿನಲ್ಲಿ ಮೊದಲನೇ ವರ್ಷಕ್ಕೆ 200 ಮಂದಿ ಪ್ರವೇಶ ಪಡೆದಿದ್ದಾರೆ. ಕೋವಿಡ್‌ ಕಾರಣದಿಂದ ಮುಚ್ಚಿದ್ದ ಹಾಸ್ಟೆಲ್‌ ಅನ್ನು ಈ ಬಾರಿ ತೆರೆಯಲಾಗಿದ್ದು ಈಗಾಗಲೇ 100 ಮಂದಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ‘ಅಕ್ಷಯಪಾತ್ರೆ ಯೋಜನೆಗೆ ದಾನಿಗಳ ನೆರವಿನಿಂದ ತಿಂಗಳಿಗೆ ₹80 ಸಾವಿರ ಕಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದೇನೆ. ಸರ್ಕಾರದಿಂದ ಹೊಸದಾಗಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗಿದೆ. ಆದರೆ 3–4 ತಿಂಗಳಾದರೂ ಹಸ್ತಾಂತರಿಸಿಲ್ಲ. ಅದರಲ್ಲಿ ಗಿಡಗಳು ಬೆಳೆದುಕೊಂಡಿವೆ. ಅನೈತಿಕ ಚಟುವಟಿಕೆಯೂ ನಡೆಯುತ್ತಿದೆ’ ಎಂದು ಪ್ರಾಂಶುಪಾಲರು ತಿಳಿಸಿದರು. ಸ್ವಂತ ಹಣದಲ್ಲಿ ನಿರ್ವಹಣೆ!: ‘155 ವರ್ಷದ ಇತಿಹಾಸವಿರುವ ಪಾಠಶಾಲೆ ಇದು. ವಿದ್ಯುತ್‌ ನೀರು ಹಾಗೂ ಫೋನ್‌ ಬಿಲ್‌ ಅನ್ನು ಮೂರೂವರೆ ವರ್ಷದಿಂದ ಸರ್ಕಾರದವರು ನೀಡಿಲ್ಲ. ಹಲವು ಬಾರಿ ಪತ್ರ ವ್ಯವಹಾರ ಮಾಡಿದರೂ ಪ್ರಯೋಜನವಾಗಿಲ್ಲ. ಸ್ವಂತ ಹಣದಿಂದ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಇಲ್ಲೇ ಕಲಿತಿದ್ದೇನೆ; ಅನ್ನದ ಋಣ ತೀರಿಸಲೆಂದು ಸ್ವಂತ ಹಣ ಬಳಸುತ್ತಿದ್ದೇನೆ. ಉನ್ನತ ಶಿಕ್ಷಣ ಇಲಾಖೆಯು ಇತ್ತ ಗಮನಹರಿಸಬೇಕು’ ಎಂದು ಕೋರುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT