ಹಸ್ತಾಂತರವಾಗದ ಹಾಸ್ಟೆಲ್ ಕಟ್ಟಡ!
ಮೈಸೂರು ಸಂಸ್ಕೃತ ಪಾಠಶಾಲೆಗೆ 2023–24ನೇ ಸಾಲಿನಲ್ಲಿ ಮೊದಲನೇ ವರ್ಷಕ್ಕೆ 200 ಮಂದಿ ಪ್ರವೇಶ ಪಡೆದಿದ್ದಾರೆ. ಕೋವಿಡ್ ಕಾರಣದಿಂದ ಮುಚ್ಚಿದ್ದ ಹಾಸ್ಟೆಲ್ ಅನ್ನು ಈ ಬಾರಿ ತೆರೆಯಲಾಗಿದ್ದು ಈಗಾಗಲೇ 100 ಮಂದಿಗೆ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ‘ಅಕ್ಷಯಪಾತ್ರೆ ಯೋಜನೆಗೆ ದಾನಿಗಳ ನೆರವಿನಿಂದ ತಿಂಗಳಿಗೆ ₹80 ಸಾವಿರ ಕಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದೇನೆ. ಸರ್ಕಾರದಿಂದ ಹೊಸದಾಗಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗಿದೆ. ಆದರೆ 3–4 ತಿಂಗಳಾದರೂ ಹಸ್ತಾಂತರಿಸಿಲ್ಲ. ಅದರಲ್ಲಿ ಗಿಡಗಳು ಬೆಳೆದುಕೊಂಡಿವೆ. ಅನೈತಿಕ ಚಟುವಟಿಕೆಯೂ ನಡೆಯುತ್ತಿದೆ’ ಎಂದು ಪ್ರಾಂಶುಪಾಲರು ತಿಳಿಸಿದರು. ಸ್ವಂತ ಹಣದಲ್ಲಿ ನಿರ್ವಹಣೆ!: ‘155 ವರ್ಷದ ಇತಿಹಾಸವಿರುವ ಪಾಠಶಾಲೆ ಇದು. ವಿದ್ಯುತ್ ನೀರು ಹಾಗೂ ಫೋನ್ ಬಿಲ್ ಅನ್ನು ಮೂರೂವರೆ ವರ್ಷದಿಂದ ಸರ್ಕಾರದವರು ನೀಡಿಲ್ಲ. ಹಲವು ಬಾರಿ ಪತ್ರ ವ್ಯವಹಾರ ಮಾಡಿದರೂ ಪ್ರಯೋಜನವಾಗಿಲ್ಲ. ಸ್ವಂತ ಹಣದಿಂದ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಇಲ್ಲೇ ಕಲಿತಿದ್ದೇನೆ; ಅನ್ನದ ಋಣ ತೀರಿಸಲೆಂದು ಸ್ವಂತ ಹಣ ಬಳಸುತ್ತಿದ್ದೇನೆ. ಉನ್ನತ ಶಿಕ್ಷಣ ಇಲಾಖೆಯು ಇತ್ತ ಗಮನಹರಿಸಬೇಕು’ ಎಂದು ಕೋರುತ್ತಾರೆ ಅವರು.