<p><strong>ಮೈಸೂರು</strong>: ‘ಕಾಡಿನ ಪರಿಸರ ಹಾಗೂ ಪ್ರಾಣಿಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕು. ಅವು ಉಳಿದರೆ ನಾವು ಉಳಿಯುತ್ತೇವೆ’ ಎಂದು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಜಿ ಪ್ರಾಂತ್ಯ 7ರ ಅಧ್ಯಕ್ಷ ಎಚ್.ಸಿ.ಕಾಂತರಾಜು ಹೇಳಿದರು.</p>.<p>ನಗರದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಸಂಸ್ಥೆಯಿಂದ ‘ಬದುಕಿ, ಬದುಕಲು ಬಿಡಿ’ ಘೋಷವಾಕ್ಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಪ್ರಪಂಚದಲ್ಲಿ 13 ದೇಶಗಳಲ್ಲಿ ಮಾತ್ರ ಹುಲಿಗಳಿದ್ದು, ಅದರಲ್ಲಿ ಶೇ 60ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ. ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ’ ಎಂದರು.</p>.<p>ಗ್ರಾಮೀಣ ಭಾಗದ ಯುವಕರು, ಮಹಿಳೆಯರಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರ ಆರಂಭಿಸಲು ಲಯನ್ಸ್ ಸಂಸ್ಥೆಯ ಹೆಸರಿಗೆ ಪಿರಿಯಾಪಟ್ಟಣದ ಬೇಗೂರು ಗ್ರಾಮದಲ್ಲಿ ಎರಡು ಎಕರೆ ಜಮೀನನ್ನು ಎಂ.ಶಿವಕುಮಾರ್ ಅವರು ದಾನವಾಗಿ ನೀಡಿದರು.</p>.<p>ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಮಾತನಾಡಿದರು.</p>.<p>ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗನಾಥ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಆತಿಥೇಯ ಸಮಿತಿಯ ಸಲಹೆಗಾರ ಎನ್.ಕೃಷ್ಣೇಗೌಡ, ಮೆಂಟರ್ಗಳಾದ ಕೆ.ಡಿ.ಕಾರ್ಯಪ್ಪ, ಆರ್.ಡಿ.ಕುಮಾರ್, ಸಹ ಅಧ್ಯಕ್ಷರಾದ ಆರ್.ಎಚ್.ನಾಗರಾಜು, ಜಿ.ವಿ.ಬಾಲು, ಸಂಯೋಜಕರಾದ ಎಲ್.ಶಿವಕುಮಾರ್, ಡಿ.ನಾಗರಾಜ ಆಚಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕಾಡಿನ ಪರಿಸರ ಹಾಗೂ ಪ್ರಾಣಿಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಬೇಕು. ಅವು ಉಳಿದರೆ ನಾವು ಉಳಿಯುತ್ತೇವೆ’ ಎಂದು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಜಿ ಪ್ರಾಂತ್ಯ 7ರ ಅಧ್ಯಕ್ಷ ಎಚ್.ಸಿ.ಕಾಂತರಾಜು ಹೇಳಿದರು.</p>.<p>ನಗರದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಸಂಸ್ಥೆಯಿಂದ ‘ಬದುಕಿ, ಬದುಕಲು ಬಿಡಿ’ ಘೋಷವಾಕ್ಯದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದರು.</p>.<p>‘ಪ್ರಪಂಚದಲ್ಲಿ 13 ದೇಶಗಳಲ್ಲಿ ಮಾತ್ರ ಹುಲಿಗಳಿದ್ದು, ಅದರಲ್ಲಿ ಶೇ 60ರಷ್ಟು ಹುಲಿಗಳು ಭಾರತದಲ್ಲಿಯೇ ಇವೆ. ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ’ ಎಂದರು.</p>.<p>ಗ್ರಾಮೀಣ ಭಾಗದ ಯುವಕರು, ಮಹಿಳೆಯರಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರ ಆರಂಭಿಸಲು ಲಯನ್ಸ್ ಸಂಸ್ಥೆಯ ಹೆಸರಿಗೆ ಪಿರಿಯಾಪಟ್ಟಣದ ಬೇಗೂರು ಗ್ರಾಮದಲ್ಲಿ ಎರಡು ಎಕರೆ ಜಮೀನನ್ನು ಎಂ.ಶಿವಕುಮಾರ್ ಅವರು ದಾನವಾಗಿ ನೀಡಿದರು.</p>.<p>ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಮಾತನಾಡಿದರು.</p>.<p>ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗನಾಥ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಆತಿಥೇಯ ಸಮಿತಿಯ ಸಲಹೆಗಾರ ಎನ್.ಕೃಷ್ಣೇಗೌಡ, ಮೆಂಟರ್ಗಳಾದ ಕೆ.ಡಿ.ಕಾರ್ಯಪ್ಪ, ಆರ್.ಡಿ.ಕುಮಾರ್, ಸಹ ಅಧ್ಯಕ್ಷರಾದ ಆರ್.ಎಚ್.ನಾಗರಾಜು, ಜಿ.ವಿ.ಬಾಲು, ಸಂಯೋಜಕರಾದ ಎಲ್.ಶಿವಕುಮಾರ್, ಡಿ.ನಾಗರಾಜ ಆಚಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>