<p><strong>ಮೈಸೂರು:</strong> ಜಿಲ್ಲೆಯ ಜಿಮ್ನಾಸ್ಟಿಕ್ಸ್ ಕ್ರೀಡಾಪಟುಗಳು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪದಕ ಜಯಿಸಿದ್ದಾರೆ.</p>.<p>ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಈ ವಿಭಾಗದಲ್ಲಿ (ಅಕ್ರೋಬೆಟಿಕ್ಸ್, ಟ್ರಾಂಪೋಲಿನ್ ಮತ್ತು ಟ್ರಂಬ್ಲಿಂಗ್) ಸ್ಪರ್ಧಿಗಳು ಪಾಲ್ಗೊಂಡರು. 12 ವರ್ಷದ ಒಳಗಿನವರ ವಿಭಾಗದಲ್ಲಿ ಅನ್ವಿ ಹರಿತಸ ಚಿನ್ನ ಹಾಗೂ 14 ವರ್ಷದ ಒಳಗಿನವರ ವಿಭಾಗದಲ್ಲಿ ಅರ್ಪಿತ್ ಕಲಗುಡಿ ಮತ್ತು 17 ವರ್ಷದ ಒಳಗಿನವರ ಟ್ರಂಬ್ಲಿಂಗ್ ವಿಭಾಗದಲ್ಲಿ ಕವನ್ ಕಂಚು ಗೆದ್ದರು.</p>.<p>13ರಿಂದ 19 ವರ್ಷದೊಳಗಿನ ಸ್ಪೋಟ್ಸರ್ ಅಕ್ರೋಬೆಟಿಕ್ಸ್ ಗುಂಪು ವಿಭಾಗದಲ್ಲಿ ಆರ್.ರಾಜೇಶ್, ಶಾನ್ ಗೌಡ, ಬಿ.ಎಂ.ಕವನ್ ಮತ್ತು ಆರ್.ತನ್ಮಯ್ ಅವರನ್ನು ಒಳಗೊಂಡ ತಂಡವು ಕಂಚು ಜಯಿಸಿತು. ಈ ಕ್ರೀಡಾಪಟುಗಳು ಸೆಪ್ಟೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿರುವ ಅಕ್ರೋಬೆಟಿಕ್ಸ್ ಜಿಮ್ನಾಸ್ಟಿಕ್ಸ್ ಭಾರತ ತಂಡದ ತರಬೇತಿ ಶಿಬಿರದಲ್ಲಿ ಭಾಗಿ ಆಗಲಿದ್ದಾರೆ.</p>.<p>ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಜಿಲ್ಲಾ ಕ್ರೀಡಾಶಾಲೆಯ ಜಿಮ್ನಾಸ್ಟಿಕ್ಸ್ ತರಬೇತುದಾರ ಬಿ.ಲೋಕೇಶ್, ಜಿಮ್ನಾಸ್ಟಿಕ್ಸ್ ತರಬೇತುದಾರ ಎಸ್. ವಿದ್ವತ್ ಕ್ರೀಡಾಪಟುಗಳನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜಿಲ್ಲೆಯ ಜಿಮ್ನಾಸ್ಟಿಕ್ಸ್ ಕ್ರೀಡಾಪಟುಗಳು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಪದಕ ಜಯಿಸಿದ್ದಾರೆ.</p>.<p>ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಈ ವಿಭಾಗದಲ್ಲಿ (ಅಕ್ರೋಬೆಟಿಕ್ಸ್, ಟ್ರಾಂಪೋಲಿನ್ ಮತ್ತು ಟ್ರಂಬ್ಲಿಂಗ್) ಸ್ಪರ್ಧಿಗಳು ಪಾಲ್ಗೊಂಡರು. 12 ವರ್ಷದ ಒಳಗಿನವರ ವಿಭಾಗದಲ್ಲಿ ಅನ್ವಿ ಹರಿತಸ ಚಿನ್ನ ಹಾಗೂ 14 ವರ್ಷದ ಒಳಗಿನವರ ವಿಭಾಗದಲ್ಲಿ ಅರ್ಪಿತ್ ಕಲಗುಡಿ ಮತ್ತು 17 ವರ್ಷದ ಒಳಗಿನವರ ಟ್ರಂಬ್ಲಿಂಗ್ ವಿಭಾಗದಲ್ಲಿ ಕವನ್ ಕಂಚು ಗೆದ್ದರು.</p>.<p>13ರಿಂದ 19 ವರ್ಷದೊಳಗಿನ ಸ್ಪೋಟ್ಸರ್ ಅಕ್ರೋಬೆಟಿಕ್ಸ್ ಗುಂಪು ವಿಭಾಗದಲ್ಲಿ ಆರ್.ರಾಜೇಶ್, ಶಾನ್ ಗೌಡ, ಬಿ.ಎಂ.ಕವನ್ ಮತ್ತು ಆರ್.ತನ್ಮಯ್ ಅವರನ್ನು ಒಳಗೊಂಡ ತಂಡವು ಕಂಚು ಜಯಿಸಿತು. ಈ ಕ್ರೀಡಾಪಟುಗಳು ಸೆಪ್ಟೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿರುವ ಅಕ್ರೋಬೆಟಿಕ್ಸ್ ಜಿಮ್ನಾಸ್ಟಿಕ್ಸ್ ಭಾರತ ತಂಡದ ತರಬೇತಿ ಶಿಬಿರದಲ್ಲಿ ಭಾಗಿ ಆಗಲಿದ್ದಾರೆ.</p>.<p>ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಜಿಲ್ಲಾ ಕ್ರೀಡಾಶಾಲೆಯ ಜಿಮ್ನಾಸ್ಟಿಕ್ಸ್ ತರಬೇತುದಾರ ಬಿ.ಲೋಕೇಶ್, ಜಿಮ್ನಾಸ್ಟಿಕ್ಸ್ ತರಬೇತುದಾರ ಎಸ್. ವಿದ್ವತ್ ಕ್ರೀಡಾಪಟುಗಳನ್ನು ಅಭಿನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>