<p><strong>ಮೈಸೂರು:</strong> ಕಡೆಯ ಎಸೆತದವರೆಗೂ ತೂಗುಯ್ಯಾಲೆಯಾಗಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 2 ವಿಕೆಟ್ ಅಂತರದಿಂದ ರೋಚಕ ಗೆಲುವು ದಾಖಲಿಸಿತು.</p>.<p>ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದಿರುವ ‘ಶ್ರೀರಾಮ್ ಗ್ರೂಪ್ ಮಹಾರಾಜ ಟ್ರೋಫಿ’ ಟ್ವೆಂಟಿ20 ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 226 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಹುಬ್ಬಳ್ಳಿಯ ಎಸ್. ರಕ್ಷಿತ್ ಕಡೆಯ 3 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 16 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಮೈದಾನಕ್ಕೆ ನುಗ್ಗಿದ ಹುಬ್ಬಳ್ಳಿ ಆಟಗಾರರು ಸಂಭ್ರಮಾಚರಣೆ ನಡೆಸಿದರು.</p>.<p>ಪ್ರತೀಕ್ ಜೈನ್ ಎಸೆದ ಕಡೆಯ ಓವರ್ನಲ್ಲಿ ಹುಬ್ಬಳ್ಳಿ ಗೆಲುವಿಗೆ 17 ರನ್ ಬೇಕಿದ್ದು, ಮೊದಲ ಎಸೆತದಲ್ಲೇ ಸಮರ್ಥ್ ನಾಗರಾಜ್ ಗಾಯಗೊಂಡು ನಿವೃತ್ತರಾದರು. ಮೂರನೇ ಎಸೆತದಲ್ಲಿ ರಿತೇಶ್ ಭಟ್ಕಳ್ ರನೌಟ್ ಆದರು. ಕಡೆಗೆ ರಕ್ಷಿತ್ ಪಂದ್ಯದ ಗತಿ ಬದಲಿಸಿದರು.</p>.<p><strong>ತಾಹಾ ಮತ್ತೊಂದು ಶತಕ:</strong> </p><p>ಮಂಗಳವಾರವಷ್ಟೇ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಾಹಾ ಬುಧವಾರ ಮತ್ತೊಂದು ಶತಕದ (101) ಮೂಲಕ ಹುಬ್ಬಳ್ಳಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 53 ಎಸೆತದಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಶತಕ ಬಾರಿಸಿದ ಅವರು, 17ನೇ ಓವರ್ನಲ್ಲಿ ಪ್ರತೀಕ್ ಎಸೆತದಲ್ಲಿ ಡೀಪ್ ಪಾಯಿಂಟ್ನಲ್ಲಿ ವಿದ್ಯಾಧರ ಪಾಟೀಲಗೆ ಕ್ಯಾಚಿತ್ತರು. ಅಭಿನವ್ ಮನೋಹರ್ (33) ಹಾಗೂ ಮನ್ವಂತ್ ಕುಮಾರ್ (18) ಉಪಯುಕ್ತ ಕಾಣಿಕೆ ನೀಡಿದರು.</p>.<p><strong>ರೋಹನ್ ಅರ್ಧಶತಕ:</strong> </p><p>ಟಾಸ್ ಸೋತು ಬ್ಯಾಟ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕ ರೋಹನ್ ಪಾಟೀಲ (80) ಉಪಯುಕ್ತ ಕಾಣಿಕೆ ನೀಡಿದರು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅವರು ಕೇವಲ 43 ಎಸೆತದಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಹೊಡೆದರು. ಮಯಾಂಕ್ ಅಗರವಾಲ್ (9) ಹಾಗೂ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶುಭಾಂಗ್ ಹೆಗ್ಡೆ (9) ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿದರು. 7ನೇ ವಿಕೆಟ್ಗೆ ರೋಹನ್ ನವೀನ್ ಹಾಗೂ ಎಂ.ಜಿ. ನವೀನ್ ನಡುವೆ ಕೇವಲ 17 ಎಸೆತಗಳಲ್ಲಿ 54 ರನ್ ಜೊತೆಯಾಟವು ತಂಡದ ಸ್ಕೋರ್ ಹೆಚ್ಚಿಸಿತು.</p>.<p><strong>ಸಂಕ್ಷಿಪ್ತ ಸ್ಕೋರ್:</strong> </p><p>ಬೆಂಗಳೂರು ಬ್ಲಾಸ್ಟರ್ಸ್: 20 ಓವರ್ಗಳಲ್ಲಿ 6 ವಿಕೆಟ್ಗೆ 225 ( ರೋಹನ್ ಪಾಟೀಲ 80, ಸೂರಜ್ ಅಹುಜಾ 27, ಎಂ.ಜಿ. ನವೀನ್ 27. ಯಶ್ರಾಜ್ ಪೂಂಜ 43ಕ್ಕೆ 3, ಕೆ.ಸಿ. ಕಾರ್ಯಪ್ಪ 25ಕ್ಕೆ 2)<br></p><p>ಹುಬ್ಬಳ್ಳಿ ಟೈಗರ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 228 ( ಮೊಹಮ್ಮದ್ ತಾಹಾ 101, ಅಭಿನವ್ ಮನೋಹರ್ 33, ಎಸ್. ರಕ್ಷಿತ್ ಔಟಾಗದೆ 18. ಮೊಹಸೀನ್ ಖಾನ್ 24ಕ್ಕೆ 2, ಎಂ.ಜಿ. ನವೀನ್ 40ಕ್ಕೆ 1)</p>.<p><strong>ಪಂದ್ಯದ ಆಟಗಾರ: ಮೊಹಮ್ಮದ್ ತಾಹಾ</strong></p>.<p><strong>ಇಂದಿನ ಪಂದ್ಯ</strong><br></p><p>*ಮೈಸೂರು ವಾರಿಯರ್ಸ್ v/s ಮಂಗಳೂರು ಡ್ರ್ಯಾಗನ್ಸ್– ಮಧ್ಯಾಹ್ನ 3.15<br>*ಗುಲ್ಬರ್ಗ ಮಿಸ್ಟಿಕ್ಸ್ v/s ಬೆಂಗಳೂರು ಬ್ಲಾಸ್ಟರ್ಸ್ – ಸಂಜೆ 7.15</p>.<p><strong>ಮಹಾರಾಜ ಟ್ರೋಫಿ;ಅಂಕ ಪಟ್ಟಿ</strong> (ತಂಡ;ಪಂದ್ಯ;ಗೆಲುವು;ಸೋಲು;ಅಂಕ;ರನ್ರೇಟ್) </p><p>ಹುಬ್ಬಳ್ಳಿ ಟೈಗರ್ಸ್;2;2;0;4;+0.800 </p><p>ಮಂಗಳೂರು ಡ್ರ್ಯಾಗನ್ಸ್;1;1;0;2;+1.650 </p><p>ಮೈಸೂರು ವಾರಿಯರ್ಸ್;2;1;1;2;+0.468 </p><p>ಗುಲ್ಬರ್ಗ ಮಿಸ್ಟಿಕ್ಸ್;2;1;1;2;-0.311 </p><p>ಶಿವಮೊಗ್ಗ ಲಯನ್ಸ್;1;0;1;0;-1.450 </p><p>ಬೆಂಗಳೂರು ಬ್ಲಾಸ್ಟರ್ಸ್;2;0;2;0;-1.050 </p><p>(ಬುಧವಾರದ ಮೊದಲ ಪಂದ್ಯದ ಅಂತ್ಯಕ್ಕೆ) </p>.<h2>ಮಂಗಳೂರು ಡ್ರ್ಯಾಗನ್ಸ್ಗೆ ಗೆಲುವು</h2><p>ಮೈಸೂರು: ಕ್ರಾಂತಿಕುಮಾರ್ ಅಮೋಘ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಅನ್ನು 29 ರನ್ ಅಂತರದಿಂದ ಮಣಿಸಿತು.</p><p>ಮಂಗಳೂರು ನೀಡಿದ 180 ರನ್ಗಳ ಗುರಿ ಬೆನ್ನತ್ತಿದ್ದ ಶಿವಮೊಗ್ಗ ಪರ ಕೆ. ರೋಹಿತ್ (62) ಏಕಾಂಗಿ ಹೋರಾಟ ನಡೆಸಿದರು. ಕ್ರಾಂತಿಕುಮಾರ್ 36 ರನ್ಗೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು.</p><p>ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಪರ ವಿಕೆಟ್ ಕೀಪರ್ ಬಿ.ಆರ್. ಶರತ್ 31 ಎಸೆತದಲ್ಲಿ 70 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಶಿವಮೊಗ್ಗ ಪರ ವೇಗಿ ವಿ. ಕೌಶಿಕ್ 3 ವಿಕೆಟ್ ಉರುಳಿಸಿದರು.</p><p>ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 179 (ಬಿ.ಆರ್. ಶರತ್ 70, ಕೆ.ವಿ. ಅನೀಶ್, ವಿ. ಕೌಶಿಕ್ 23ಕ್ಕೆ 3, ಹಾರ್ದಿಕ್ ರಾಜ್ 28ಕ್ಕೆ 2)ಶಿವಮೊಗ್ಗ ಲಯನ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 150 (ಕೆ. ರೋಹಿತ್ 62, ಕ್ರಾಂತಿಕುಮಾರ್ 36ಕ್ಕೆ 5, ಸಂತೋಷ್ ಸಿಂಗ್ 35ಕ್ಕೆ 2)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕಡೆಯ ಎಸೆತದವರೆಗೂ ತೂಗುಯ್ಯಾಲೆಯಾಗಿದ್ದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 2 ವಿಕೆಟ್ ಅಂತರದಿಂದ ರೋಚಕ ಗೆಲುವು ದಾಖಲಿಸಿತು.</p>.<p>ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದಿರುವ ‘ಶ್ರೀರಾಮ್ ಗ್ರೂಪ್ ಮಹಾರಾಜ ಟ್ರೋಫಿ’ ಟ್ವೆಂಟಿ20 ಟೂರ್ನಿಯ ಬುಧವಾರದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ನೀಡಿದ 226 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಹುಬ್ಬಳ್ಳಿಯ ಎಸ್. ರಕ್ಷಿತ್ ಕಡೆಯ 3 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 16 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಮೈದಾನಕ್ಕೆ ನುಗ್ಗಿದ ಹುಬ್ಬಳ್ಳಿ ಆಟಗಾರರು ಸಂಭ್ರಮಾಚರಣೆ ನಡೆಸಿದರು.</p>.<p>ಪ್ರತೀಕ್ ಜೈನ್ ಎಸೆದ ಕಡೆಯ ಓವರ್ನಲ್ಲಿ ಹುಬ್ಬಳ್ಳಿ ಗೆಲುವಿಗೆ 17 ರನ್ ಬೇಕಿದ್ದು, ಮೊದಲ ಎಸೆತದಲ್ಲೇ ಸಮರ್ಥ್ ನಾಗರಾಜ್ ಗಾಯಗೊಂಡು ನಿವೃತ್ತರಾದರು. ಮೂರನೇ ಎಸೆತದಲ್ಲಿ ರಿತೇಶ್ ಭಟ್ಕಳ್ ರನೌಟ್ ಆದರು. ಕಡೆಗೆ ರಕ್ಷಿತ್ ಪಂದ್ಯದ ಗತಿ ಬದಲಿಸಿದರು.</p>.<p><strong>ತಾಹಾ ಮತ್ತೊಂದು ಶತಕ:</strong> </p><p>ಮಂಗಳವಾರವಷ್ಟೇ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಾಹಾ ಬುಧವಾರ ಮತ್ತೊಂದು ಶತಕದ (101) ಮೂಲಕ ಹುಬ್ಬಳ್ಳಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 53 ಎಸೆತದಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಶತಕ ಬಾರಿಸಿದ ಅವರು, 17ನೇ ಓವರ್ನಲ್ಲಿ ಪ್ರತೀಕ್ ಎಸೆತದಲ್ಲಿ ಡೀಪ್ ಪಾಯಿಂಟ್ನಲ್ಲಿ ವಿದ್ಯಾಧರ ಪಾಟೀಲಗೆ ಕ್ಯಾಚಿತ್ತರು. ಅಭಿನವ್ ಮನೋಹರ್ (33) ಹಾಗೂ ಮನ್ವಂತ್ ಕುಮಾರ್ (18) ಉಪಯುಕ್ತ ಕಾಣಿಕೆ ನೀಡಿದರು.</p>.<p><strong>ರೋಹನ್ ಅರ್ಧಶತಕ:</strong> </p><p>ಟಾಸ್ ಸೋತು ಬ್ಯಾಟ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಆರಂಭಿಕ ರೋಹನ್ ಪಾಟೀಲ (80) ಉಪಯುಕ್ತ ಕಾಣಿಕೆ ನೀಡಿದರು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅವರು ಕೇವಲ 43 ಎಸೆತದಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಹೊಡೆದರು. ಮಯಾಂಕ್ ಅಗರವಾಲ್ (9) ಹಾಗೂ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಶುಭಾಂಗ್ ಹೆಗ್ಡೆ (9) ಬ್ಯಾಟಿಂಗ್ನಲ್ಲಿ ನಿರಾಸೆ ಮೂಡಿಸಿದರು. 7ನೇ ವಿಕೆಟ್ಗೆ ರೋಹನ್ ನವೀನ್ ಹಾಗೂ ಎಂ.ಜಿ. ನವೀನ್ ನಡುವೆ ಕೇವಲ 17 ಎಸೆತಗಳಲ್ಲಿ 54 ರನ್ ಜೊತೆಯಾಟವು ತಂಡದ ಸ್ಕೋರ್ ಹೆಚ್ಚಿಸಿತು.</p>.<p><strong>ಸಂಕ್ಷಿಪ್ತ ಸ್ಕೋರ್:</strong> </p><p>ಬೆಂಗಳೂರು ಬ್ಲಾಸ್ಟರ್ಸ್: 20 ಓವರ್ಗಳಲ್ಲಿ 6 ವಿಕೆಟ್ಗೆ 225 ( ರೋಹನ್ ಪಾಟೀಲ 80, ಸೂರಜ್ ಅಹುಜಾ 27, ಎಂ.ಜಿ. ನವೀನ್ 27. ಯಶ್ರಾಜ್ ಪೂಂಜ 43ಕ್ಕೆ 3, ಕೆ.ಸಿ. ಕಾರ್ಯಪ್ಪ 25ಕ್ಕೆ 2)<br></p><p>ಹುಬ್ಬಳ್ಳಿ ಟೈಗರ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 228 ( ಮೊಹಮ್ಮದ್ ತಾಹಾ 101, ಅಭಿನವ್ ಮನೋಹರ್ 33, ಎಸ್. ರಕ್ಷಿತ್ ಔಟಾಗದೆ 18. ಮೊಹಸೀನ್ ಖಾನ್ 24ಕ್ಕೆ 2, ಎಂ.ಜಿ. ನವೀನ್ 40ಕ್ಕೆ 1)</p>.<p><strong>ಪಂದ್ಯದ ಆಟಗಾರ: ಮೊಹಮ್ಮದ್ ತಾಹಾ</strong></p>.<p><strong>ಇಂದಿನ ಪಂದ್ಯ</strong><br></p><p>*ಮೈಸೂರು ವಾರಿಯರ್ಸ್ v/s ಮಂಗಳೂರು ಡ್ರ್ಯಾಗನ್ಸ್– ಮಧ್ಯಾಹ್ನ 3.15<br>*ಗುಲ್ಬರ್ಗ ಮಿಸ್ಟಿಕ್ಸ್ v/s ಬೆಂಗಳೂರು ಬ್ಲಾಸ್ಟರ್ಸ್ – ಸಂಜೆ 7.15</p>.<p><strong>ಮಹಾರಾಜ ಟ್ರೋಫಿ;ಅಂಕ ಪಟ್ಟಿ</strong> (ತಂಡ;ಪಂದ್ಯ;ಗೆಲುವು;ಸೋಲು;ಅಂಕ;ರನ್ರೇಟ್) </p><p>ಹುಬ್ಬಳ್ಳಿ ಟೈಗರ್ಸ್;2;2;0;4;+0.800 </p><p>ಮಂಗಳೂರು ಡ್ರ್ಯಾಗನ್ಸ್;1;1;0;2;+1.650 </p><p>ಮೈಸೂರು ವಾರಿಯರ್ಸ್;2;1;1;2;+0.468 </p><p>ಗುಲ್ಬರ್ಗ ಮಿಸ್ಟಿಕ್ಸ್;2;1;1;2;-0.311 </p><p>ಶಿವಮೊಗ್ಗ ಲಯನ್ಸ್;1;0;1;0;-1.450 </p><p>ಬೆಂಗಳೂರು ಬ್ಲಾಸ್ಟರ್ಸ್;2;0;2;0;-1.050 </p><p>(ಬುಧವಾರದ ಮೊದಲ ಪಂದ್ಯದ ಅಂತ್ಯಕ್ಕೆ) </p>.<h2>ಮಂಗಳೂರು ಡ್ರ್ಯಾಗನ್ಸ್ಗೆ ಗೆಲುವು</h2><p>ಮೈಸೂರು: ಕ್ರಾಂತಿಕುಮಾರ್ ಅಮೋಘ ಬೌಲಿಂಗ್ ನೆರವಿನಿಂದ ಮಂಗಳೂರು ಡ್ರ್ಯಾಗನ್ಸ್ ತಂಡವು ಬುಧವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಅನ್ನು 29 ರನ್ ಅಂತರದಿಂದ ಮಣಿಸಿತು.</p><p>ಮಂಗಳೂರು ನೀಡಿದ 180 ರನ್ಗಳ ಗುರಿ ಬೆನ್ನತ್ತಿದ್ದ ಶಿವಮೊಗ್ಗ ಪರ ಕೆ. ರೋಹಿತ್ (62) ಏಕಾಂಗಿ ಹೋರಾಟ ನಡೆಸಿದರು. ಕ್ರಾಂತಿಕುಮಾರ್ 36 ರನ್ಗೆ 5 ವಿಕೆಟ್ ಉರುಳಿಸಿ ಗಮನ ಸೆಳೆದರು.</p><p>ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಪರ ವಿಕೆಟ್ ಕೀಪರ್ ಬಿ.ಆರ್. ಶರತ್ 31 ಎಸೆತದಲ್ಲಿ 70 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಶಿವಮೊಗ್ಗ ಪರ ವೇಗಿ ವಿ. ಕೌಶಿಕ್ 3 ವಿಕೆಟ್ ಉರುಳಿಸಿದರು.</p><p>ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 179 (ಬಿ.ಆರ್. ಶರತ್ 70, ಕೆ.ವಿ. ಅನೀಶ್, ವಿ. ಕೌಶಿಕ್ 23ಕ್ಕೆ 3, ಹಾರ್ದಿಕ್ ರಾಜ್ 28ಕ್ಕೆ 2)ಶಿವಮೊಗ್ಗ ಲಯನ್ಸ್: 20 ಓವರ್ಗಳಲ್ಲಿ 8 ವಿಕೆಟ್ಗೆ 150 (ಕೆ. ರೋಹಿತ್ 62, ಕ್ರಾಂತಿಕುಮಾರ್ 36ಕ್ಕೆ 5, ಸಂತೋಷ್ ಸಿಂಗ್ 35ಕ್ಕೆ 2)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>