<p><strong>ಮೈಸೂರು:</strong> ‘ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಜನ ಸಮುದಾಯದ ಸಂವೇದನೆಯು ಹೊಸಗನ್ನಡ ಸಾಹಿತ್ಯದಲ್ಲಿ ಜೀವಂತವಾಗಿದೆ’ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಹೇಳಿದರು. </p>.<p>ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ರಾಜ್ಯ ಜಾನಪದ ಸಂಶೋಧಕರ ಒಕ್ಕೂಟವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಂಬಯ್ಯ ಹೊನ್ನಲಗೆರೆ ಮತ್ತು ಶ್ರೀನಾಥ ಬಿ.ಕಾಂಬಳೆ ಅವರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ: ಪಂಥಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. </p>.<p>‘ಹೊಸಗನ್ನಡ ಸಾಹಿತ್ಯ ಪರಂಪರೆಯ ಹೂರಣವೆ ವಸ್ತು ವೈವಿಧ್ಯತೆಯಾಗಿದೆ. ದನಿ ಇಲ್ಲದ ಹಾಗೂ ಎಲ್ಲ ಸ್ತರದ ಜನರನ್ನು ಅದು ಮುಖಾಮುಖಿಯಾಗಿಸಿದೆ. ನಾಡು ನುಡಿಯ ಅಭಿಮಾನ, ಚಳವಳಿ, ಪ್ರತಿಭಟನೆ, ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕೃತಿಯಲ್ಲೂ ನೋಡಬಹುದು’ ಎಂದರು. </p>.<p>‘ಹಳಗನ್ನಡದ ವಸ್ತು ಮತ್ತು ಆಶಯ ರಾಜಪ್ರಭುತ್ವದ ಮಹತ್ವ ಸಾರಿದರೆ, ಹೊಸಗನ್ನಡದ್ದು ಜನಪ್ರಭುತ್ವವಾದಿಯಾಗಿದೆ’ ಎಂದು ತಿಳಿಸಿದರು. </p>.<p>ಲೇಖಕರಾದ ಶ್ರೀನಾಥ್ ಬಿ.ಕಾಂಬಳೆ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾದ ಅಂಶಗಳು ಕೃತಿಯಲ್ಲಿವೆ’ ಎಂದರೆ, ‘ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಹಾಗೂ ಮಹಿಳಾ ಸಾಹಿತ್ಯದ ಪ್ರೇರಣೆ ಧೋರಣೆ ಪುಸ್ತಕದಲ್ಲಿದೆ’ ಎಂದು ಹೊಂಬಯ್ಯ ಹೊನ್ನಲಗೆರೆ ಹೇಳಿದರು. </p>.<p>ಪತ್ರಕರ್ತ ವಿನೋದ್ ಮಹದೇವಪುರ, ಎಚ್.ಪಿ. ಮಂಜು, ಪ್ರಸಾರಾಂಗದ ಸೂಪರಿಂಟೆಂಡೆಂಟ್ ಚನ್ನಬಸಪ್ಪ, ಸಹಾಯ ನಿರ್ದೇಶಕ ಅನಿಲ್ ಕುಮಾರ್, ಮುದ್ರಣಾಲಯದ ನಿರ್ದೇಶಕ ಸತೀಶ್, ಶಿವಲಿಂಗೇಗೌಡ, ತಲಕಾಡು ನಾಗರಾಜ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಜನ ಸಮುದಾಯದ ಸಂವೇದನೆಯು ಹೊಸಗನ್ನಡ ಸಾಹಿತ್ಯದಲ್ಲಿ ಜೀವಂತವಾಗಿದೆ’ ಎಂದು ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು ಹೇಳಿದರು. </p>.<p>ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ರಾಜ್ಯ ಜಾನಪದ ಸಂಶೋಧಕರ ಒಕ್ಕೂಟವು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಂಬಯ್ಯ ಹೊನ್ನಲಗೆರೆ ಮತ್ತು ಶ್ರೀನಾಥ ಬಿ.ಕಾಂಬಳೆ ಅವರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ: ಪಂಥಗಳು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು. </p>.<p>‘ಹೊಸಗನ್ನಡ ಸಾಹಿತ್ಯ ಪರಂಪರೆಯ ಹೂರಣವೆ ವಸ್ತು ವೈವಿಧ್ಯತೆಯಾಗಿದೆ. ದನಿ ಇಲ್ಲದ ಹಾಗೂ ಎಲ್ಲ ಸ್ತರದ ಜನರನ್ನು ಅದು ಮುಖಾಮುಖಿಯಾಗಿಸಿದೆ. ನಾಡು ನುಡಿಯ ಅಭಿಮಾನ, ಚಳವಳಿ, ಪ್ರತಿಭಟನೆ, ವೈಜ್ಞಾನಿಕ, ರಾಜಕೀಯ ಮತ್ತು ಸಾಮಾಜಿಕ ಕೊಡುಗೆಗಳನ್ನು ಈ ಕೃತಿಯಲ್ಲೂ ನೋಡಬಹುದು’ ಎಂದರು. </p>.<p>‘ಹಳಗನ್ನಡದ ವಸ್ತು ಮತ್ತು ಆಶಯ ರಾಜಪ್ರಭುತ್ವದ ಮಹತ್ವ ಸಾರಿದರೆ, ಹೊಸಗನ್ನಡದ್ದು ಜನಪ್ರಭುತ್ವವಾದಿಯಾಗಿದೆ’ ಎಂದು ತಿಳಿಸಿದರು. </p>.<p>ಲೇಖಕರಾದ ಶ್ರೀನಾಥ್ ಬಿ.ಕಾಂಬಳೆ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಪೂರಕವಾದ ಅಂಶಗಳು ಕೃತಿಯಲ್ಲಿವೆ’ ಎಂದರೆ, ‘ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಹಾಗೂ ಮಹಿಳಾ ಸಾಹಿತ್ಯದ ಪ್ರೇರಣೆ ಧೋರಣೆ ಪುಸ್ತಕದಲ್ಲಿದೆ’ ಎಂದು ಹೊಂಬಯ್ಯ ಹೊನ್ನಲಗೆರೆ ಹೇಳಿದರು. </p>.<p>ಪತ್ರಕರ್ತ ವಿನೋದ್ ಮಹದೇವಪುರ, ಎಚ್.ಪಿ. ಮಂಜು, ಪ್ರಸಾರಾಂಗದ ಸೂಪರಿಂಟೆಂಡೆಂಟ್ ಚನ್ನಬಸಪ್ಪ, ಸಹಾಯ ನಿರ್ದೇಶಕ ಅನಿಲ್ ಕುಮಾರ್, ಮುದ್ರಣಾಲಯದ ನಿರ್ದೇಶಕ ಸತೀಶ್, ಶಿವಲಿಂಗೇಗೌಡ, ತಲಕಾಡು ನಾಗರಾಜ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>