<p><strong>ಎಚ್.ಡಿ. ಕೋಟೆ/ಹಂಪಾಪುರ:</strong> ‘ಕೇರಳೀಯರು (ಕೇರಳ ಭಾಗದವರು) ಅಲ್ಲಿಯ ನಾಡ ಹಬ್ಬ ಓಣಂ ಅನ್ನು 10 ದಿನ ಆಚರಿಸುತ್ತೇವೆ. ಪ್ರತಿ ದಿನ ವೈಶಿಷ್ಟ್ಯಗಳೊಂದಿಗೆ ಆಚರಣೆಯನ್ನು ಮಾಡಲಾಗುತ್ತಿದೆ’ ಎಂದು ಇಲ್ಲಿಯ ಕೇರಳ ಸಮಾಜದ ಅಧ್ಯಕ್ಷ ಮನೋಜ್ ತಿಳಿಸಿದರು.</p>.<p>ಪಟ್ಟಣದ ಕೇರಳ ನಿವಾಸಿಗಳು ವಾಸಿಸುವ ಬೀದಿಯಲ್ಲಿ ಓಣಂ ಅಚರಣೆ ಸಂದರ್ಭ ಅವರು ಮಾತನಾಡಿದರು. ನಮ್ಮ ಹಬ್ಬದಲ್ಲಿ ವಿಶೇಷವಾಗಿ ಹೂವುಗಳಿಂದ ರಂಗೋಲಿ ಬಿಡಿಸುವ ಸಂಪ್ರದಾಯವಿದ್ದು, ಕೇರಳಿಗರು ವಾಸಿಸುವ ಮನೆಗಳ ಮುಂದೆ ವಿವಿಧ ಹೂವುಗಳ ರಂಗೋಲಿಯನ್ನು ಅಂದವಾಗಿ ಬಿಡಿಸಲಾಗಿದೆ ಎಂದರು.</p>.<p>‘25 ಕ್ಕಿಂತ ಹೆಚ್ಚು ಬಗೆಯ ಸಸ್ಯಹಾರಿ ಖಾದ್ಯಗಳನ್ನು ಒಳಗೊಂಡಿರುವ ದೊಡ್ಡ ಔತಣ ಏರ್ಪಡಿಸಲಾಗಿದ್ದು , ನೆರೆಹೊರೆಯವರನ್ನು ಕರೆದು ಬಾಳೆ ಎಲೆಯ ಮೇಲೆ ಊಟ ಬಡಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ’ ಎಂದರು.</p>.<p>ಹಂಪಾಪುರ ಹೊರವಲಯದ ಪಡುಕೋಟೆ ಗ್ರಾಮದ ಸಜೀವನ್ ಮಾತನಾಡಿ, ಕುಟುಂಬ ಸದಸ್ಯರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತೇವೆ. ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ಒಂದು ಸುಂದರ ಹಬ್ಬವಾಗಿದ್ದು , ನೆರೆಹೊರೆಯವರೊಂದಿಗೆ ಆಚರಿಸುತ್ತೇವೆ’ ಎಂದರು. ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಓಣಂ ಆಚರಣೆಗೆ ಸ್ಥಳೀಯರು ಪ್ರೋತ್ಸಾಹವನ್ನು ನೀಡುತ್ತಾರೆ, ಎಲ್ಲರೂ ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ. ಕೋಟೆ/ಹಂಪಾಪುರ:</strong> ‘ಕೇರಳೀಯರು (ಕೇರಳ ಭಾಗದವರು) ಅಲ್ಲಿಯ ನಾಡ ಹಬ್ಬ ಓಣಂ ಅನ್ನು 10 ದಿನ ಆಚರಿಸುತ್ತೇವೆ. ಪ್ರತಿ ದಿನ ವೈಶಿಷ್ಟ್ಯಗಳೊಂದಿಗೆ ಆಚರಣೆಯನ್ನು ಮಾಡಲಾಗುತ್ತಿದೆ’ ಎಂದು ಇಲ್ಲಿಯ ಕೇರಳ ಸಮಾಜದ ಅಧ್ಯಕ್ಷ ಮನೋಜ್ ತಿಳಿಸಿದರು.</p>.<p>ಪಟ್ಟಣದ ಕೇರಳ ನಿವಾಸಿಗಳು ವಾಸಿಸುವ ಬೀದಿಯಲ್ಲಿ ಓಣಂ ಅಚರಣೆ ಸಂದರ್ಭ ಅವರು ಮಾತನಾಡಿದರು. ನಮ್ಮ ಹಬ್ಬದಲ್ಲಿ ವಿಶೇಷವಾಗಿ ಹೂವುಗಳಿಂದ ರಂಗೋಲಿ ಬಿಡಿಸುವ ಸಂಪ್ರದಾಯವಿದ್ದು, ಕೇರಳಿಗರು ವಾಸಿಸುವ ಮನೆಗಳ ಮುಂದೆ ವಿವಿಧ ಹೂವುಗಳ ರಂಗೋಲಿಯನ್ನು ಅಂದವಾಗಿ ಬಿಡಿಸಲಾಗಿದೆ ಎಂದರು.</p>.<p>‘25 ಕ್ಕಿಂತ ಹೆಚ್ಚು ಬಗೆಯ ಸಸ್ಯಹಾರಿ ಖಾದ್ಯಗಳನ್ನು ಒಳಗೊಂಡಿರುವ ದೊಡ್ಡ ಔತಣ ಏರ್ಪಡಿಸಲಾಗಿದ್ದು , ನೆರೆಹೊರೆಯವರನ್ನು ಕರೆದು ಬಾಳೆ ಎಲೆಯ ಮೇಲೆ ಊಟ ಬಡಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ’ ಎಂದರು.</p>.<p>ಹಂಪಾಪುರ ಹೊರವಲಯದ ಪಡುಕೋಟೆ ಗ್ರಾಮದ ಸಜೀವನ್ ಮಾತನಾಡಿ, ಕುಟುಂಬ ಸದಸ್ಯರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತೇವೆ. ಕೇರಳದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಂಬಿಸುವ ಒಂದು ಸುಂದರ ಹಬ್ಬವಾಗಿದ್ದು , ನೆರೆಹೊರೆಯವರೊಂದಿಗೆ ಆಚರಿಸುತ್ತೇವೆ’ ಎಂದರು. ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಓಣಂ ಆಚರಣೆಗೆ ಸ್ಥಳೀಯರು ಪ್ರೋತ್ಸಾಹವನ್ನು ನೀಡುತ್ತಾರೆ, ಎಲ್ಲರೂ ಸೇರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>