‘ಮೈಸೂರಿನ ಪ್ರಜ್ಞಾವಂತ ನಾಗರಿಕರು ಕೂಡಲೇ ಎಚ್ಚೆತ್ತುಕೊಂಡು ಚಾಮುಂಡಿಬೆಟ್ಟ ಉಳಿಸುವ ಸಂಕಲ್ಪ ಮಾಡದಿದ್ದಲ್ಲಿ, ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಮೈಸೂರನ್ನು ಹಾಳುಗೆಡವುದರಲ್ಲಿ ಸಂಶಯವಿಲ್ಲ. ಸಂಘ–ಸಂಸ್ಥೆಗಳು ಹೋರಾಟಕ್ಕೆ ಇಳಿಯುವುದು ಒಂದೆಡೆಯಾದರೆ, ನ್ಯಾಯಾಲಯದ ಮೂಲಕವೇ ಈ ರಾಜಕೀಯ ಹಿತಾಸಕ್ತಿಯನ್ನು ಕಟ್ಟಿ ಹಾಕುವ ಕೆಲಸ ಮಾಡಬೇಕು’ ಎಂದು ತಿಳಿಸಿದ್ದಾರೆ.