<p><strong>ಮೈಸೂರು: </strong>ನಗರದಲ್ಲಿ ಬೆಲೆ ಏರಿಕೆಯು ಚಳಿಗಾಲದಲ್ಲೂ ಗ್ರಾಹಕರಿಗೆ ಚುರುಕು ಮುಟ್ಟಿಸಿದೆ. ಅಗ್ಗವಾದ ವಸ್ತುಗಳೇ ಇಲ್ಲ ಎನ್ನುವಂತಾಗಿದ್ದು, ಸರಿಸುಮಾರು ಬಹುತೇಕ ಎಲ್ಲ ತರಕಾರಿಗಳು, ದವಸಧಾನ್ಯಗಳ ಬೆಲೆಗಳು ಏರುಗತಿಯಲ್ಲೇ ಸಾಗಿವೆ.</p>.<p>ಶುಭ ಸಮಾರಂಭಗಳನ್ನು ಮಾಡುವವರಿಗಂತೂ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಿದೆ. ಊಟೋಪಚಾರಗಳಿಗೆ ಹೆಚ್ಚಿನ ಹಣ ವ್ಯಯಿಸುವಂತಾಗಿದೆ. ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗದವರ ಪಾಡು ಹೇಳತೀರದಾಗಿದೆ.</p>.<p>‘ಈರುಳ್ಳಿ ಕೆ.ಜಿಗೆ ₹ 120ನ್ನು ದಾಟಿದೆ. ಇದನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ಅಡುಗೆಗೆ ಹಾಕದಿದ್ದರೆ ರುಚಿಸುವುದಿಲ್ಲ. ನಾವು ಕೇಳಿದಷ್ಟು ಪ್ರಮಾಣದಲ್ಲಿ ಈರುಳ್ಳಿ ತಂದುಕೊಡುತ್ತಿಲ್ಲ. ಕೊನೆಗೆ, ಊಟ ಚೆನ್ನಾಗಿಲ್ಲ ಎಂಬ ಆರೋಪ ನಮ್ಮನ್ನು ಸುತ್ತಿಕೊಳ್ಳುತ್ತಿದೆ’ ಎಂದು ಅಡುಗೆ ಕಂಟ್ರಾಕ್ಟರ್ ಮಹದೇವಸ್ವಾಮಿ ಹೇಳುತ್ತಾರೆ.</p>.<p>‘ಚಳಿಗಾಲದಲ್ಲಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಪರಿಯ ಬೆಲೆ ಏರಿಕೆಯನ್ನು ಹಿಂದೆ ಕಂಡಿರಲಿಲ್ಲ’ ಎಂದು ವ್ಯಾಪಾರಿ ನಂಜುಂಡ ಪ್ರತಿಕ್ರಿಯಿಸುತ್ತಾರೆ.</p>.<p>ಒಂದು ಕಡೆ ಇಬ್ಬನಿ ಮತ್ತೊಂದು ಕಡೆ ಜಿಟಿಜಿಟಿ ಮಳೆ. ಇವುಗಳಿಂದ ತರಕಾರಿಗಳ ಇಳುವರಿ ತೀರಾ ಕಡಿಮೆಯಾಗಿದೆ. ಬೆಲೆ ಏರಿಕೆಯಾಗಿದೆ ಎಂದು ಅನ್ನಿಸಿದರೂ ಅದು ಬೆಳೆಗಾರರನಿಗೆ ಲಾಭ ತರಿಸುತ್ತಿಲ್ಲ.</p>.<p>ಒಂದು ಕಡೆ ಸಗಟು ಬೆಲೆ ಮಂದಗತಿಯಲ್ಲಿ ಏರಿಕೆ ಕಾಣುತ್ತಿದ್ದರೆ ಮತ್ತೊಂದೆಡೆ ಚಿಲ್ಲರೆ ಬೆಲೆಗಳು ಶರವೇಗದಲ್ಲಿ ಹೆಚ್ಚುತ್ತಿವೆ. ಇದರಲ್ಲಿ ದಲ್ಲಾಳಿಗಳು ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.</p>.<p>ಬೀನ್ಸ್ ಧಾರಣೆ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ರೈತರಿಗೆ ಕೆ.ಜಿಗೆ ₹ 10ರಿಂದ ₹ 18ರವರೆಗೆ ಸಿಗುತ್ತಿದೆ. ಆದರೆ, ಇದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 30ರಿಂದ ₹ 40ರವರೆಗೂ ಇದೆ. ಎರಡರಿಂದ ಮೂರುಪಟ್ಟು ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.</p>.<p>ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಒಂದು ಮೊಟ್ಟೆಗೆ ₹ 4.67 ಇದೆ. ಚಳಿಗಾಲ ಆಗಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಧಾನ್ಯಗಳ ಪೈಕಿ ತೊಗರಿಬೇಳೆ ಸಗಟು ಬೆಲೆ ₹ 96, ಉದ್ದಿನಬೇಳೆ ₹ 120, ಹೆಸರುಬೇಳೆ ₹ 92, ಹೆಸರುಕಾಳು ₹ 86 ಇದೆ.</p>.<p><strong>ಬಾಳೆಹಣ್ಣಿಗೆ ಹೆಚ್ಚಿನ ಬೆಲೆ ಇಲ್ಲ</strong></p>.<p>ಯಾವಾಗಲೂ ಏಲಕ್ಕಿ ಬಾಳೆಹಣ್ಣು ನಗರದ ಮಾರುಕಟ್ಟೆಯಲ್ಲಿ ಕನಿಷ್ಠ ಎಂದರೂ ಕೆ.ಜಿಗೆ ₹ 50ರಿಂದ ₹ 60 ಆದರೂ ಇರುತ್ತಿತ್ತು. ಆದರೆ, ಈ ಬಾರಿ ದರ ₹ 40ರ ಆಸುಪಾಸಿನಲ್ಲೇ ಇದೆ. ಬೆಳೆದ ರೈತರಿಗಂತೂ ಸಿಗುತ್ತಿರುವ ದರ ಏನೇನೂ ಸಾಲದಾಗಿದೆ.</p>.<p>‘ಒಂದು ಕೆ.ಜಿಗೆ ಬಾಳೆಹಣ್ಣಿಗೆ ₹ 28 ಸಿಕ್ಕರೆ ಒಂದಿಷ್ಟು ಲಾಭ ಎನ್ನಬಹುದು. ಆದರೆ, ಈಗ ಒಮ್ಮೊಮ್ಮೆ ₹ 20ಕ್ಕಿಂತಲೂ ಕಡಿಮೆ ದರ ಸಿಗುತ್ತಿದೆ. ಇದರಿಂದ ನಷ್ಟವಾಗುತ್ತಿದೆ’ ಎಂದು ನಂಜನಗೂಡಿನ ರೈತರ ಭೋಗನಂಜಪ್ಪ ಹೇಳುತ್ತಾರೆ.</p>.<p><strong>ಮೈಸೂರು ಎಪಿಎಂಸಿ ಧಾರಣೆ ವಿವರ</strong></p>.<p>ಟೊಮೆಟೊ 16,ಬೀನ್ಸ್18,ಕ್ಯಾರೆಟ್42,ಎಲೆಕೋಸು16,ದಪ್ಪಮೆಣಸಿನಕಾಯಿ 30,ಬದನೆ32, ನುಗ್ಗೆಕಾಯಿ 24,ಹಸಿಮೆಣಸಿನಕಾಯಿ 20, ಈರುಳ್ಳಿ 85.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರದಲ್ಲಿ ಬೆಲೆ ಏರಿಕೆಯು ಚಳಿಗಾಲದಲ್ಲೂ ಗ್ರಾಹಕರಿಗೆ ಚುರುಕು ಮುಟ್ಟಿಸಿದೆ. ಅಗ್ಗವಾದ ವಸ್ತುಗಳೇ ಇಲ್ಲ ಎನ್ನುವಂತಾಗಿದ್ದು, ಸರಿಸುಮಾರು ಬಹುತೇಕ ಎಲ್ಲ ತರಕಾರಿಗಳು, ದವಸಧಾನ್ಯಗಳ ಬೆಲೆಗಳು ಏರುಗತಿಯಲ್ಲೇ ಸಾಗಿವೆ.</p>.<p>ಶುಭ ಸಮಾರಂಭಗಳನ್ನು ಮಾಡುವವರಿಗಂತೂ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಿದೆ. ಊಟೋಪಚಾರಗಳಿಗೆ ಹೆಚ್ಚಿನ ಹಣ ವ್ಯಯಿಸುವಂತಾಗಿದೆ. ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗದವರ ಪಾಡು ಹೇಳತೀರದಾಗಿದೆ.</p>.<p>‘ಈರುಳ್ಳಿ ಕೆ.ಜಿಗೆ ₹ 120ನ್ನು ದಾಟಿದೆ. ಇದನ್ನು ಸಾಕಾಗುವಷ್ಟು ಪ್ರಮಾಣದಲ್ಲಿ ಅಡುಗೆಗೆ ಹಾಕದಿದ್ದರೆ ರುಚಿಸುವುದಿಲ್ಲ. ನಾವು ಕೇಳಿದಷ್ಟು ಪ್ರಮಾಣದಲ್ಲಿ ಈರುಳ್ಳಿ ತಂದುಕೊಡುತ್ತಿಲ್ಲ. ಕೊನೆಗೆ, ಊಟ ಚೆನ್ನಾಗಿಲ್ಲ ಎಂಬ ಆರೋಪ ನಮ್ಮನ್ನು ಸುತ್ತಿಕೊಳ್ಳುತ್ತಿದೆ’ ಎಂದು ಅಡುಗೆ ಕಂಟ್ರಾಕ್ಟರ್ ಮಹದೇವಸ್ವಾಮಿ ಹೇಳುತ್ತಾರೆ.</p>.<p>‘ಚಳಿಗಾಲದಲ್ಲಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಪರಿಯ ಬೆಲೆ ಏರಿಕೆಯನ್ನು ಹಿಂದೆ ಕಂಡಿರಲಿಲ್ಲ’ ಎಂದು ವ್ಯಾಪಾರಿ ನಂಜುಂಡ ಪ್ರತಿಕ್ರಿಯಿಸುತ್ತಾರೆ.</p>.<p>ಒಂದು ಕಡೆ ಇಬ್ಬನಿ ಮತ್ತೊಂದು ಕಡೆ ಜಿಟಿಜಿಟಿ ಮಳೆ. ಇವುಗಳಿಂದ ತರಕಾರಿಗಳ ಇಳುವರಿ ತೀರಾ ಕಡಿಮೆಯಾಗಿದೆ. ಬೆಲೆ ಏರಿಕೆಯಾಗಿದೆ ಎಂದು ಅನ್ನಿಸಿದರೂ ಅದು ಬೆಳೆಗಾರರನಿಗೆ ಲಾಭ ತರಿಸುತ್ತಿಲ್ಲ.</p>.<p>ಒಂದು ಕಡೆ ಸಗಟು ಬೆಲೆ ಮಂದಗತಿಯಲ್ಲಿ ಏರಿಕೆ ಕಾಣುತ್ತಿದ್ದರೆ ಮತ್ತೊಂದೆಡೆ ಚಿಲ್ಲರೆ ಬೆಲೆಗಳು ಶರವೇಗದಲ್ಲಿ ಹೆಚ್ಚುತ್ತಿವೆ. ಇದರಲ್ಲಿ ದಲ್ಲಾಳಿಗಳು ಅಧಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.</p>.<p>ಬೀನ್ಸ್ ಧಾರಣೆ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ರೈತರಿಗೆ ಕೆ.ಜಿಗೆ ₹ 10ರಿಂದ ₹ 18ರವರೆಗೆ ಸಿಗುತ್ತಿದೆ. ಆದರೆ, ಇದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 30ರಿಂದ ₹ 40ರವರೆಗೂ ಇದೆ. ಎರಡರಿಂದ ಮೂರುಪಟ್ಟು ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ.</p>.<p>ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಒಂದು ಮೊಟ್ಟೆಗೆ ₹ 4.67 ಇದೆ. ಚಳಿಗಾಲ ಆಗಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಧಾನ್ಯಗಳ ಪೈಕಿ ತೊಗರಿಬೇಳೆ ಸಗಟು ಬೆಲೆ ₹ 96, ಉದ್ದಿನಬೇಳೆ ₹ 120, ಹೆಸರುಬೇಳೆ ₹ 92, ಹೆಸರುಕಾಳು ₹ 86 ಇದೆ.</p>.<p><strong>ಬಾಳೆಹಣ್ಣಿಗೆ ಹೆಚ್ಚಿನ ಬೆಲೆ ಇಲ್ಲ</strong></p>.<p>ಯಾವಾಗಲೂ ಏಲಕ್ಕಿ ಬಾಳೆಹಣ್ಣು ನಗರದ ಮಾರುಕಟ್ಟೆಯಲ್ಲಿ ಕನಿಷ್ಠ ಎಂದರೂ ಕೆ.ಜಿಗೆ ₹ 50ರಿಂದ ₹ 60 ಆದರೂ ಇರುತ್ತಿತ್ತು. ಆದರೆ, ಈ ಬಾರಿ ದರ ₹ 40ರ ಆಸುಪಾಸಿನಲ್ಲೇ ಇದೆ. ಬೆಳೆದ ರೈತರಿಗಂತೂ ಸಿಗುತ್ತಿರುವ ದರ ಏನೇನೂ ಸಾಲದಾಗಿದೆ.</p>.<p>‘ಒಂದು ಕೆ.ಜಿಗೆ ಬಾಳೆಹಣ್ಣಿಗೆ ₹ 28 ಸಿಕ್ಕರೆ ಒಂದಿಷ್ಟು ಲಾಭ ಎನ್ನಬಹುದು. ಆದರೆ, ಈಗ ಒಮ್ಮೊಮ್ಮೆ ₹ 20ಕ್ಕಿಂತಲೂ ಕಡಿಮೆ ದರ ಸಿಗುತ್ತಿದೆ. ಇದರಿಂದ ನಷ್ಟವಾಗುತ್ತಿದೆ’ ಎಂದು ನಂಜನಗೂಡಿನ ರೈತರ ಭೋಗನಂಜಪ್ಪ ಹೇಳುತ್ತಾರೆ.</p>.<p><strong>ಮೈಸೂರು ಎಪಿಎಂಸಿ ಧಾರಣೆ ವಿವರ</strong></p>.<p>ಟೊಮೆಟೊ 16,ಬೀನ್ಸ್18,ಕ್ಯಾರೆಟ್42,ಎಲೆಕೋಸು16,ದಪ್ಪಮೆಣಸಿನಕಾಯಿ 30,ಬದನೆ32, ನುಗ್ಗೆಕಾಯಿ 24,ಹಸಿಮೆಣಸಿನಕಾಯಿ 20, ಈರುಳ್ಳಿ 85.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>