<p><strong>ಹುಣಸೂರು:</strong> ‘ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಒಂದು ತಿಂಗಳೊಳಗಾಗಿ ಕನಿಷ್ಠ 50ರಷ್ಟು ಕಾಮಗಾರಿ ಪೂರೈಸಬೇಕು. ಇಲ್ಲವಾದಲ್ಲಿ ಬದಲಾವಣೆಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುತ್ತೇನೆ’ ಎಂದು ಶಾಸಕ ಹರೀಶ್ ಗೌಡ ಗುತ್ತಿಗೆದಾರ ಪ್ರತಿನಿಧಿಗೆ ತರಾಟೆಗೆ ತೆಗೆದುಕೊಂಡರು.</p>.<p>ನಗರಸಭೆಯಲ್ಲಿ ಸೋಮವಾರ ನಗರಸಭೆ ಸದಸ್ಯರೊಳಗೊಂಡಂತೆ ಗುತ್ತಿಗೆದಾರನ ಸಮ್ಮುಖದಲ್ಲಿ ಸಭೆ ನಡೆಸಿ ನಗರೋತ್ಥಾನ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಪ್ರಜಾವಾಣಿ’ ಪತ್ರಿಕೆಯಲ್ಲಿ ಜೂನ್ 14ರ ಸಂಚಿಕೆಯಲ್ಲಿ ನಗರೋತ್ಥಾನ ಕಾಮಗಾರಿ ಕುರಿತಂತೆ ಸಾರ್ವಜನಿಕರ ಆಕ್ರೋಶ ವರದಿಯಾಗಿದ್ದು, ಒಂದೂವರೆ ವರ್ಷದಿಂದ 350 ಕಾಮಗಾರಿಯಲ್ಲಿ ಶೇ 20ರಷ್ಟು ಪೂರೈಸಿಲ್ಲ’ ಎಂದು ಗುಡುಗಿದರು.</p>.<p>‘ನಗರಸಭೆ ವ್ಯಾಪ್ತಿಯ 31 ವಾರ್ಡ್ನಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ ಪಡೆದು ಸೂಕ್ತ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನಿಯೋಜಿಸದೆ ವಿಳಂಬವಾಗುತ್ತಿದೆ’ ಎಂದರು.</p>.<p>ಗುತ್ತಿಗೆದಾರ ಪ್ರತಿನಿಧಿ ತೇಜಸ್ ಮಾತನಾಡಿ, ‘ಕಾಮಗಾರಿ ಪರಿಪೂರ್ಣವಾಗಿ ನಡೆಸಲು ನಗರಸಭೆ ಸಹಕಾರ ಅಗತ್ಯ. ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಬೇಕಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಸಮಜಾಯಿಸಿ ನೀಡಿದರು.</p>.<p>ಆಯುಕ್ತೆ ಮಾನಸ ಪ್ರತಿಕ್ರಿಯಿಸಿ, ‘ಗುತ್ತಿಗೆದಾರರು ಈವರೆಗೆ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿ ಕಾಮಗಾರಿ ಕುರಿತು ಮಾಹಿತಿ ನೀಡಿಲ್ಲ. ಸಭೆಯಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಕಿಡಿಕಾರಿದರು.</p>.<p>ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ ಮಾತನಾಡಿ, ‘ವಾರ್ಡ್ನಲ್ಲಿ ಅರ್ಧಕ್ಕೆ ರಸ್ತೆ ಕಾಮಗಾರಿ ನಿಂತು ಸಾರ್ವಜನಿಕರು ಓಡಾಡದಂತಹ ಸ್ಥಿತಿ ಎದುರಾಗಿದೆ. ಇಂದಿನ ಸಭೆಗೆ ಗುತ್ತಿಗೆದಾರರನ್ನು ಆಹ್ವಾನಿಸಿತ್ತು. ಈ ಸಭೆಗೂ ಗೈರಾಗಿದ್ದು, ಶಾಸಕರು ಆತನ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು’ ಎಂದರು.</p>.<p>ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೃಷ್ಣರಾಜ ಗುಪ್ತ, ನಗರೋತ್ಥಾನ ಯೋಜನೆ ಆರಂಭವಾದಾಗಿನಿಂದ ಸದಸ್ಯರು ವಾರ್ಡ್ಗೆ ಹೋಗಲಾಗುತ್ತಿಲ್ಲ. ನಿವಾಸಿಗರಿಂದ ಬೈಗುಳು ಎದುರಿಸಬೇಕಾಗಿದೆ’ ಎಂದು ತಿಳಿಸಿದರು.</p>.<p>2 ತಿಂಗಳಲ್ಲಿ ಪೂರ್ಣ: ಗುತ್ತಿದಾರರ ಪರವಾಗಿ ಸಭೆಯಲ್ಲಿ ಹಾಜರಿದ್ದ ತೇಜಸ್ 2 ತಿಂಗಳ ಗಡುವು ನೀಡುವಂತೆ ಮನವಿ ಮಾಡಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸುತ್ತೇವೆ’ ಎಂದರು.</p>.<p>ಶಾಸಕರು ಉತ್ತರಿಸಿ, ‘ಜುಲೈ 17ರೊಳಗಾಗಿ ಶೇ 75ರಷ್ಟು ಗುಣಮಟ್ಟದ ಕಾಮಗಾರಿ ಪೂರೈಸಿರಬೇಕು. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಿಮಗೆ ಕಾಮಗಾರಿ ಬಿಲ್ ಪಾವತಿಸಲಾಗುವುದು’ ಎಂದು ತಾಕೀತು ಮಾಡಿದರು.</p>.<p>ಅಮೃತ್ ಯೋಜನೆ: ನಗರದ ನಿವಾಸಿಗಳಿಗೆ ನೀರಿನ ಸವಲತ್ತು ಕಲ್ಪಿಸಲು ₹ 20 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆ ಅನುಷ್ಠಾನವಾಗಲಿದೆ. ಆರಂಭದಲ್ಲಿ 500 ಮನೆಗಳಿಗೆ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಿ ಪರಿಶೀಲಿಸಿದ ಬಳಿಕ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ’ ಎಂದು ನಗರಸಭೆ ಎಇಇ ಶರ್ಮಿಳಾ ತಿಳಿಸಿದರು.</p>.<p>ನಗರಸಭೆ ಸದಸ್ಯರಾದ ವಿವೇಕ್, ದೇವರಾಜ್, ಹರೀಶ್, ನಗರೋತ್ಥಾನ ಯೋಜನೆ ಅಧಿಕಾರಿ ಚೇತನ್, ಪರಿಸರ ಎಂಜಿನಿಯರ್ ರೂಪಾ ಭಾಗವಹಿಸಿದ್ದರು.</p>.<div><blockquote>ನಗರೋತ್ಥಾನ ಯೋಜನೆಗೆ ನಿಯೋಜಿಸಿದ್ದ ನಗರಸಭೆ ಎಂಜಿನಿಯರ್ ಲೋಕೇಶ್ ಅವರನ್ನು ತೆರವುಗೊಳಿಸಿ ಆ ಸ್ಥಳಕ್ಕೆ ಶಮಂತ್ ನಿಯೋಜಿಸಿ ಕಾಮಗಾರಿ ತ್ವರಿತಗತಿ ನಡೆಸಲು ಕ್ರಮವಹಿಸಿ</blockquote><span class="attribution">- ಹರೀಶ್ ಗೌಡ ಶಾಸಕ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ‘ನಗರೋತ್ಥಾನ ಯೋಜನೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ಒಂದು ತಿಂಗಳೊಳಗಾಗಿ ಕನಿಷ್ಠ 50ರಷ್ಟು ಕಾಮಗಾರಿ ಪೂರೈಸಬೇಕು. ಇಲ್ಲವಾದಲ್ಲಿ ಬದಲಾವಣೆಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡುತ್ತೇನೆ’ ಎಂದು ಶಾಸಕ ಹರೀಶ್ ಗೌಡ ಗುತ್ತಿಗೆದಾರ ಪ್ರತಿನಿಧಿಗೆ ತರಾಟೆಗೆ ತೆಗೆದುಕೊಂಡರು.</p>.<p>ನಗರಸಭೆಯಲ್ಲಿ ಸೋಮವಾರ ನಗರಸಭೆ ಸದಸ್ಯರೊಳಗೊಂಡಂತೆ ಗುತ್ತಿಗೆದಾರನ ಸಮ್ಮುಖದಲ್ಲಿ ಸಭೆ ನಡೆಸಿ ನಗರೋತ್ಥಾನ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.</p>.<p>‘ಪ್ರಜಾವಾಣಿ’ ಪತ್ರಿಕೆಯಲ್ಲಿ ಜೂನ್ 14ರ ಸಂಚಿಕೆಯಲ್ಲಿ ನಗರೋತ್ಥಾನ ಕಾಮಗಾರಿ ಕುರಿತಂತೆ ಸಾರ್ವಜನಿಕರ ಆಕ್ರೋಶ ವರದಿಯಾಗಿದ್ದು, ಒಂದೂವರೆ ವರ್ಷದಿಂದ 350 ಕಾಮಗಾರಿಯಲ್ಲಿ ಶೇ 20ರಷ್ಟು ಪೂರೈಸಿಲ್ಲ’ ಎಂದು ಗುಡುಗಿದರು.</p>.<p>‘ನಗರಸಭೆ ವ್ಯಾಪ್ತಿಯ 31 ವಾರ್ಡ್ನಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ ಪಡೆದು ಸೂಕ್ತ ಸಿಬ್ಬಂದಿ ಮತ್ತು ಕಾರ್ಮಿಕರನ್ನು ನಿಯೋಜಿಸದೆ ವಿಳಂಬವಾಗುತ್ತಿದೆ’ ಎಂದರು.</p>.<p>ಗುತ್ತಿಗೆದಾರ ಪ್ರತಿನಿಧಿ ತೇಜಸ್ ಮಾತನಾಡಿ, ‘ಕಾಮಗಾರಿ ಪರಿಪೂರ್ಣವಾಗಿ ನಡೆಸಲು ನಗರಸಭೆ ಸಹಕಾರ ಅಗತ್ಯ. ನಗರದ ಬಹುತೇಕ ವಾರ್ಡ್ಗಳಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿಲ್ಲ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಬೇಕಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ’ ಎಂದು ಸಮಜಾಯಿಸಿ ನೀಡಿದರು.</p>.<p>ಆಯುಕ್ತೆ ಮಾನಸ ಪ್ರತಿಕ್ರಿಯಿಸಿ, ‘ಗುತ್ತಿಗೆದಾರರು ಈವರೆಗೆ ಒಮ್ಮೆಯೂ ತಮ್ಮನ್ನು ಭೇಟಿ ಮಾಡಿ ಕಾಮಗಾರಿ ಕುರಿತು ಮಾಹಿತಿ ನೀಡಿಲ್ಲ. ಸಭೆಯಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಕಿಡಿಕಾರಿದರು.</p>.<p>ನಗರಸಭೆ ಸದಸ್ಯ ಗಣೇಶ್ ಕುಮಾರಸ್ವಾಮಿ ಮಾತನಾಡಿ, ‘ವಾರ್ಡ್ನಲ್ಲಿ ಅರ್ಧಕ್ಕೆ ರಸ್ತೆ ಕಾಮಗಾರಿ ನಿಂತು ಸಾರ್ವಜನಿಕರು ಓಡಾಡದಂತಹ ಸ್ಥಿತಿ ಎದುರಾಗಿದೆ. ಇಂದಿನ ಸಭೆಗೆ ಗುತ್ತಿಗೆದಾರರನ್ನು ಆಹ್ವಾನಿಸಿತ್ತು. ಈ ಸಭೆಗೂ ಗೈರಾಗಿದ್ದು, ಶಾಸಕರು ಆತನ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು’ ಎಂದರು.</p>.<p>ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಕೃಷ್ಣರಾಜ ಗುಪ್ತ, ನಗರೋತ್ಥಾನ ಯೋಜನೆ ಆರಂಭವಾದಾಗಿನಿಂದ ಸದಸ್ಯರು ವಾರ್ಡ್ಗೆ ಹೋಗಲಾಗುತ್ತಿಲ್ಲ. ನಿವಾಸಿಗರಿಂದ ಬೈಗುಳು ಎದುರಿಸಬೇಕಾಗಿದೆ’ ಎಂದು ತಿಳಿಸಿದರು.</p>.<p>2 ತಿಂಗಳಲ್ಲಿ ಪೂರ್ಣ: ಗುತ್ತಿದಾರರ ಪರವಾಗಿ ಸಭೆಯಲ್ಲಿ ಹಾಜರಿದ್ದ ತೇಜಸ್ 2 ತಿಂಗಳ ಗಡುವು ನೀಡುವಂತೆ ಮನವಿ ಮಾಡಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಈ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ನಗರಸಭೆಗೆ ಹಸ್ತಾಂತರಿಸುತ್ತೇವೆ’ ಎಂದರು.</p>.<p>ಶಾಸಕರು ಉತ್ತರಿಸಿ, ‘ಜುಲೈ 17ರೊಳಗಾಗಿ ಶೇ 75ರಷ್ಟು ಗುಣಮಟ್ಟದ ಕಾಮಗಾರಿ ಪೂರೈಸಿರಬೇಕು. ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಿಮಗೆ ಕಾಮಗಾರಿ ಬಿಲ್ ಪಾವತಿಸಲಾಗುವುದು’ ಎಂದು ತಾಕೀತು ಮಾಡಿದರು.</p>.<p>ಅಮೃತ್ ಯೋಜನೆ: ನಗರದ ನಿವಾಸಿಗಳಿಗೆ ನೀರಿನ ಸವಲತ್ತು ಕಲ್ಪಿಸಲು ₹ 20 ಕೋಟಿ ವೆಚ್ಚದಲ್ಲಿ ಅಮೃತ್ ಯೋಜನೆ ಅನುಷ್ಠಾನವಾಗಲಿದೆ. ಆರಂಭದಲ್ಲಿ 500 ಮನೆಗಳಿಗೆ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಿ ಪರಿಶೀಲಿಸಿದ ಬಳಿಕ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ’ ಎಂದು ನಗರಸಭೆ ಎಇಇ ಶರ್ಮಿಳಾ ತಿಳಿಸಿದರು.</p>.<p>ನಗರಸಭೆ ಸದಸ್ಯರಾದ ವಿವೇಕ್, ದೇವರಾಜ್, ಹರೀಶ್, ನಗರೋತ್ಥಾನ ಯೋಜನೆ ಅಧಿಕಾರಿ ಚೇತನ್, ಪರಿಸರ ಎಂಜಿನಿಯರ್ ರೂಪಾ ಭಾಗವಹಿಸಿದ್ದರು.</p>.<div><blockquote>ನಗರೋತ್ಥಾನ ಯೋಜನೆಗೆ ನಿಯೋಜಿಸಿದ್ದ ನಗರಸಭೆ ಎಂಜಿನಿಯರ್ ಲೋಕೇಶ್ ಅವರನ್ನು ತೆರವುಗೊಳಿಸಿ ಆ ಸ್ಥಳಕ್ಕೆ ಶಮಂತ್ ನಿಯೋಜಿಸಿ ಕಾಮಗಾರಿ ತ್ವರಿತಗತಿ ನಡೆಸಲು ಕ್ರಮವಹಿಸಿ</blockquote><span class="attribution">- ಹರೀಶ್ ಗೌಡ ಶಾಸಕ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>