<p><strong>ಮೈಸೂರು:</strong> ಮರಿಮಲ್ಲಪ್ಪ ಪಿ.ಯು ಕಾಲೇಜು ತಂಡವು ಗುರುವಾರ ಸಂತ ಫಿಲೋಮಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಿ.ಯು ಕಾಲೇಜುಗಳ ತಾಲ್ಲೂಕು ಮಟ್ಟದ ಬಾಲಕರ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿಯಿತು. ಬಾಲಕಿಯರ ಥ್ರೋಬಾಲ್ನಲ್ಲಿ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜು ತಂಡವು ಅಗ್ರ ಪ್ರಶಸ್ತಿ ಪಡೆಯಿತು.</p>.<p>ವಾಲಿಬಾಲ್ ಟೂರ್ನಿಯ ಫೈನಲ್ನಲ್ಲಿ ಮರಿಮಲ್ಲಪ್ಪ ಕಾಲೇಜು 21–17, 16–21, 15–12 ರಿಂದ ದಕ್ಷ ಪಿ.ಯು. ಕಾಲೇಜು ತಂಡವನ್ನು ಮಣಿಸಿತು. ಲಕ್ಷ್ಮಿ ಹಯಗ್ರೀವ ಕಾಲೇಜು ತೃತೀಯ ಸ್ಥಾನ ಪಡೆಯಿತು.</p>.<p>ಬಾಲಕಿಯರ ಥ್ರೋಬಾಲ್ ಫೈನಲ್ನಲ್ಲಿ ಜೆಎಸ್ಎಸ್ ಕಾಲೇಜು ತಂಡವು 21–14 ಅಂತರದಲ್ಲಿ ಮರಿಮಲ್ಲಪ್ಪ ತಂಡವನ್ನು ಮಣಿಸಿತು. ಟೆರೇಷಿಯನ್ ಕಾಲೇಜು ತೃತೀಯ ಸ್ಥಾನ ಪಡೆಯಿತು.</p>.<p>ವಿಜೇತರಿಗೆ ಸಂತ ಫಿಲೋಮಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಫಾ. ಲೂರ್ದ್ ಪ್ರಸಾದ್ ಜೋಸೆಫ್ ಬಹುಮಾನ ವಿತರಿಸಿದರು.</p>.<p>ಪಿ.ಯು ವಿಭಾಗದ ಪ್ರಾಚಾರ್ಯ ಸುನೀಲ್ ಡಿಸೋಜ, ಪದವಿ ವಿಭಾಗದ ಪ್ರಾಚಾರ್ಯ ರವಿ ಸಲ್ಡಾನ್ಹ, ದೈಹಿಕ ಶಿಕ್ಷಣ ನಿರ್ದೇಶಕ ಮುರಳೀಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮರಿಮಲ್ಲಪ್ಪ ಪಿ.ಯು ಕಾಲೇಜು ತಂಡವು ಗುರುವಾರ ಸಂತ ಫಿಲೋಮಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಿ.ಯು ಕಾಲೇಜುಗಳ ತಾಲ್ಲೂಕು ಮಟ್ಟದ ಬಾಲಕರ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿಯಿತು. ಬಾಲಕಿಯರ ಥ್ರೋಬಾಲ್ನಲ್ಲಿ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜು ತಂಡವು ಅಗ್ರ ಪ್ರಶಸ್ತಿ ಪಡೆಯಿತು.</p>.<p>ವಾಲಿಬಾಲ್ ಟೂರ್ನಿಯ ಫೈನಲ್ನಲ್ಲಿ ಮರಿಮಲ್ಲಪ್ಪ ಕಾಲೇಜು 21–17, 16–21, 15–12 ರಿಂದ ದಕ್ಷ ಪಿ.ಯು. ಕಾಲೇಜು ತಂಡವನ್ನು ಮಣಿಸಿತು. ಲಕ್ಷ್ಮಿ ಹಯಗ್ರೀವ ಕಾಲೇಜು ತೃತೀಯ ಸ್ಥಾನ ಪಡೆಯಿತು.</p>.<p>ಬಾಲಕಿಯರ ಥ್ರೋಬಾಲ್ ಫೈನಲ್ನಲ್ಲಿ ಜೆಎಸ್ಎಸ್ ಕಾಲೇಜು ತಂಡವು 21–14 ಅಂತರದಲ್ಲಿ ಮರಿಮಲ್ಲಪ್ಪ ತಂಡವನ್ನು ಮಣಿಸಿತು. ಟೆರೇಷಿಯನ್ ಕಾಲೇಜು ತೃತೀಯ ಸ್ಥಾನ ಪಡೆಯಿತು.</p>.<p>ವಿಜೇತರಿಗೆ ಸಂತ ಫಿಲೋಮಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಫಾ. ಲೂರ್ದ್ ಪ್ರಸಾದ್ ಜೋಸೆಫ್ ಬಹುಮಾನ ವಿತರಿಸಿದರು.</p>.<p>ಪಿ.ಯು ವಿಭಾಗದ ಪ್ರಾಚಾರ್ಯ ಸುನೀಲ್ ಡಿಸೋಜ, ಪದವಿ ವಿಭಾಗದ ಪ್ರಾಚಾರ್ಯ ರವಿ ಸಲ್ಡಾನ್ಹ, ದೈಹಿಕ ಶಿಕ್ಷಣ ನಿರ್ದೇಶಕ ಮುರಳೀಧರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>