ಯರಗನಹಳ್ಳಿಯ ಆಟೊ ಚಾಲಕ ಅರುಣ್ (28) ಅವರಿಗೆ ಹೆಬ್ಬಾಳದ 2ನೇ ಹಂತದ ನಿವಾಸಿ ಕೆ.ಆರ್.ರಾಕೇಶ್ಪ್ರಸಾದ್ ಅವರ ಪರ್ಸ್ ಸಿಕ್ಕಿತ್ತು. ಇದನ್ನು ಅವರು ಲಷ್ಕರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ಅವರಿಗೆ ನೀಡಿದ್ದರು. ಪರ್ಸ್ನಲ್ಲಿ ₹ 2 ಸಾವಿರ ನಗದು ಹಾಗೂ ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್ಗಳಿದ್ದವು. ಆದರೆ, ವಿಳಾಸ ಮಾತ್ರ ಹೆಬ್ಬಾಳ ಎಂದಷ್ಟೇ ಇತ್ತು. ವಿಳಾಸ ಹುಡುಕಿ ತಲುಪಿಸುವಂತೆ ಹೆಡ್ಕಾನ್ಸ್ಟೆಬಲ್ ಪರಶಿವಮೂರ್ತಿ ಅವರಿಗೆ ನೀಡಿದರು.