ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣವಿದ್ದ ಪರ್ಸ್‌ ಮರಳಿಸಿದ ಆಟೊ ಚಾಲಕ; ಸತತ ಒಂದು ವಾರ ಮನೆ ಹುಡುಕಿದ ಕಾನ್‌ಸ್ಟೆಬಲ್

Last Updated 14 ಏಪ್ರಿಲ್ 2019, 17:04 IST
ಅಕ್ಷರ ಗಾತ್ರ

ಮೈಸೂರು: ಆಟೊ ಚಾಲಕರೊಬ್ಬರು ನೀಡಿದ ಹಣ ಮತ್ತು ಎಟಿಎಂ ಕಾರ್ಡ್‌ಗಳಿದ್ದ ಪರ್ಸ್‌ನ್ನು ಸತತ ಒಂದು ವಾರಗಳ ಕಾಲ ಮನೆ ಹುಡುಕಿದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಪರ್ಸ್ ಕಳೆದುಕೊಂಡವರಿಗೆ ತಲುಪಿಸಿದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಯರಗನಹಳ್ಳಿಯ ಆಟೊ ಚಾಲಕ ಅರುಣ್ (28) ಅವರಿಗೆ ಹೆಬ್ಬಾಳದ 2ನೇ ಹಂತದ ನಿವಾಸಿ ಕೆ.ಆರ್.ರಾಕೇಶ್‌ಪ್ರಸಾದ್ ಅವರ ಪರ್ಸ್ ಸಿಕ್ಕಿತ್ತು. ಇದನ್ನು ಅವರು ಲಷ್ಕರ್ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಮುನಿಯಪ್ಪ ಅವರಿಗೆ ನೀಡಿದ್ದರು. ಪರ್ಸ್‌ನಲ್ಲಿ ₹ 2 ಸಾವಿರ ನಗದು ಹಾಗೂ ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್‌ಗಳಿದ್ದವು. ಆದರೆ, ವಿಳಾಸ ಮಾತ್ರ ಹೆಬ್ಬಾಳ ಎಂದಷ್ಟೇ ಇತ್ತು. ವಿಳಾಸ ಹುಡುಕಿ ತಲುಪಿಸುವಂತೆ ಹೆಡ್‌ಕಾನ್‌ಸ್ಟೆಬಲ್ ಪರಶಿವಮೂರ್ತಿ ಅವರಿಗೆ ನೀಡಿದರು.

‌ಚುನಾವಣಾ ಕಾರ್ಯದ ಒತ್ತಡ ನಡುವೆಯೂ ಪರಶಿವಮೂರ್ತಿ ಅವರು ಹೆಬ್ಬಾಳದಲ್ಲಿ ಸತತ ಒಂದು ವಾರ ಕಾಲ ಮನೆ ಹುಡುಕಿದ ನಂತರ ರಾಕೇಶ್‌ಪ್ರಸಾದ್ ಅವರಿಗೆ ಪರ್ಸ್‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT