ರಂಗಾಯಣದಲ್ಲಿ 9 ದಿನಗಳ ಉತ್ಸವ ವಿವಿಧ ಭಾಗದ ತಂಡಗಳಿಗೆ ಅವಕಾಶ ಸಂಜೆ 6.30ರಿಂದ 9ರವರೆಗೆ ಕಾರ್ಯಕ್ರಮ
‘ಪ್ರಾದೇಶಿಕ ಪ್ರಾತಿನಿಧ್ಯ’
‘ಬಹಳ ವರ್ಷಗಳಿಂದಲೂ ಈ ಪ್ರಾಕಾರದಲ್ಲಿ ಸಾಧನೆ ಮಾಡಿರುವ ಖ್ಯಾತ ಪಾರಂಪರಿಕ ಕಲಾತಂಡಗಳನ್ನು ಇಲ್ಲಿಗೆ ಆಹ್ವಾನಿಸಲಾಗುವುದು. ಇವುಗಳಲ್ಲಿ ಕೆಲವು ಪ್ರಾಕಾರಗಳು ಕೆಲವು ಅಳಿವಿನ ಅಂಚಿನಲ್ಲಿವೆ. ಅವುಗಳಿಗೆ ಕಾರ್ಯಕ್ರಮ ನೀಡಿದರೆ ವೇದಿಕೆ ಒದಗಿಸಿದಂತೆಯೂ ಆಗುತ್ತದೆ; ಆ ಕಲಾವಿದರನ್ನು ಪ್ರೋತ್ಸಾಹಿಸಿದಂತೆಯೂ ಆಗುತ್ತದೆ. ಪ್ರಾದೇಶಿಕವಾಗಿ ಪ್ರಾತಿನಿಧ್ಯವನ್ನೂ ಕೊಡುತ್ತಿದ್ದೇವೆ. ಶೀಘ್ರದಲ್ಲೇ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಗುವುದು’ ಎಂದು ಸತೀಶ್ ತಿಪಟೂರು ತಿಳಿಸಿದರು.