<p><strong>ಸುತ್ತೂರು (ನಂಜನಗೂಡು ತಾಲ್ಲೂಕು): </strong>ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆಗಾಗಿ ಮಹಾ ದಾಸೋಹ ನಡೆಸಲಾಗುತ್ತಿದೆ.</p>.<p>ಜಾತ್ರೆ ಆರಂಭವಾದ ಜ.17ರಿಂದ ಪ್ರತಿದಿನ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದು, ಸುತ್ತೂರಿನ ವಿವಿಧೆಡೆ ತಾತ್ಕಾಲಿಕ ದಾಸೋಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿದಿನ<br />1.5 ಲಕ್ಷದಿಂದ 2 ಲಕ್ಷ ಮಂದಿ ಪ್ರಸಾದ ಸೇವಿಸುತ್ತಿದ್ದಾರೆ.</p>.<p>ಉಪಾಹಾರಕ್ಕೆ ಕೇಸರಿ ಬಾತ್, ಖಾರಾಬಾತ್, ಸಿಹಿ ಹಾಗೂ ಖಾರ ಪೊಂಗಲ್, ಬಿಸಿ ಬೇಳೆ ಬಾತ್ ಹಾಗೂ ಮೈಸೂರು ಪಾಕ್, ಬಾದೂಶ, ಬೂಂದಿ, ಲಾಡು, ಪಾಯಸ ನೀಡಲಾಗುತ್ತಿದೆ.</p>.<p>ಊಟಕ್ಕಾಗಿ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ 1 ಸಾವಿರ ಕ್ವಿಂಟಾಲ್ ಸಣ್ಣ ಅಕ್ಕಿ, 50 ಸಾವಿರ ತೆಂಗಿನ ಕಾಯಿ, 1,600 ಟಿನ್ ರೀಫೈಂಡ್ ಅಡುಗೆ ಎಣ್ಣೆ, 200 ಕೆ.ಜಿ ಬೇಳೆ, 50 ಕೆ.ಜಿ ಹಲಸಂದೆ, 30 ಟನ್ ಬೆಲ್ಲವನ್ನು ತರಿಸಲಾಗಿದೆ.</p>.<p>ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ 150 ಕ್ವಿಂಟಾಲ್ ಸಕ್ಕರೆಯನ್ನು ದೇಣಿಗೆ ಯಾಗಿ ನೀಡಿದೆ. ಪ್ರತಿದಿನ ಮೈಸೂರು, ಪಾಂಡವಪುರ, ಗುಂಡ್ಲುಪೇಟೆ, ಊಟಿ, ನಂಜನಗೂಡಿನ ಮಾರುಕಟ್ಟೆಗಳಿಂದ ಟನ್ ಗಟ್ಟಲೆ ತರಕಾರಿ ದೇಣಿಗೆಯಾಗಿ ದೊರೆಯುತ್ತಿದೆ. ಶಿವಮೊಗ್ಗದ ಭಕ್ತರು 2 ಟನ್ ತರಕಾರಿ ಕಳುಹಿಸಿದ್ದಾರೆ.</p>.<p>ಆಹಾರ ತಯಾರಿಸಲು 4–5 ಕ್ವಿಂಟಾಲ್ ಆಹಾರ ತಯಾರಿಸ ಬಹುದಾದ 35 ಕೊಪ್ಪರಿಕೆಗಳನ್ನು ಬಳಸಲಾಗುತ್ತಿದೆ.</p>.<p>ಮಹಿಳೆಯರು, ಪುರುಷರು ಹಾಗೂ ಸ್ವಯಂಸೇವಕರಿಗಾಗಿ ಪ್ರತ್ಯೇಕ ಆಹಾರ ಕೌಂಟರ್ಗಳನ್ನು ತೆರೆಯಲಾಗಿದೆ. ಸುತ್ತೂರಿನ ಬಸವೇಶ್ವರ ಹೈಸ್ಕೂಲ್, ವಸ್ತುಪ್ರದರ್ಶನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>‘500 ಮಂದಿ ಬಾಣಸಿಗರು, 300 ಮಂದಿ ಸ್ವಚ್ಛತಾ ನಿರ್ವಾಹಕರು ಹಾಗೂ ಸುತ್ತೂರಿನ ಸುತ್ತಮುತ್ತಲ 33 ಹಳ್ಳಿಗಳ 2 ಸಾವಿರ ಹಾಗೂ ಸಂಸ್ಥೆಯ<br />1 ಸಾವಿರ ಸ್ವಯಂಸೇವಕರು ಭಕ್ತರ ದಾಸೋಹ ಸೇವೆಯಲ್ಲಿ ನಿರತರಾಗಿದ್ದಾರೆ’ ಎಂದು ಜಾತ್ರಾ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>***</p>.<p>ಭಜನಾ ಮೇಳದಲ್ಲಿ ಕಾರ್ಯಕ್ರಮ ನೀಡಲು ಮುಧೋಳದಿಂದ 15 ಮಂದಿ ಬಂದಿದ್ದೇವೆ. ಇಲ್ಲಿ ಊಟ, ತಿಂಡಿ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದೆ.</p>.<p>–ರಂಗವ್ವ, ಮುಧೋಳ</p>.<p>***</p>.<p>ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಸುತ್ತೂರು ಮಠ ಅನ್ನ ದಾಸೋಹಕ್ಕೆ ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಪ್ರಸಾದ ರುಚಿ–ಶುಚಿಯಾಗಿದೆ.</p>.<p>–ಸಿದ್ದಮಲ್ಲಪ್ಪ, ಕೊತ್ತವಾಡಿ, ಚಾಮರಾಜನಗರ ತಾಲ್ಲೂಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುತ್ತೂರು (ನಂಜನಗೂಡು ತಾಲ್ಲೂಕು): </strong>ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಲಕ್ಷಾಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆಗಾಗಿ ಮಹಾ ದಾಸೋಹ ನಡೆಸಲಾಗುತ್ತಿದೆ.</p>.<p>ಜಾತ್ರೆ ಆರಂಭವಾದ ಜ.17ರಿಂದ ಪ್ರತಿದಿನ ಭಕ್ತರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದು, ಸುತ್ತೂರಿನ ವಿವಿಧೆಡೆ ತಾತ್ಕಾಲಿಕ ದಾಸೋಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿದಿನ<br />1.5 ಲಕ್ಷದಿಂದ 2 ಲಕ್ಷ ಮಂದಿ ಪ್ರಸಾದ ಸೇವಿಸುತ್ತಿದ್ದಾರೆ.</p>.<p>ಉಪಾಹಾರಕ್ಕೆ ಕೇಸರಿ ಬಾತ್, ಖಾರಾಬಾತ್, ಸಿಹಿ ಹಾಗೂ ಖಾರ ಪೊಂಗಲ್, ಬಿಸಿ ಬೇಳೆ ಬಾತ್ ಹಾಗೂ ಮೈಸೂರು ಪಾಕ್, ಬಾದೂಶ, ಬೂಂದಿ, ಲಾಡು, ಪಾಯಸ ನೀಡಲಾಗುತ್ತಿದೆ.</p>.<p>ಊಟಕ್ಕಾಗಿ ರಾಯಚೂರು ಜಿಲ್ಲೆಯ ಸಿಂಧನೂರಿನಿಂದ 1 ಸಾವಿರ ಕ್ವಿಂಟಾಲ್ ಸಣ್ಣ ಅಕ್ಕಿ, 50 ಸಾವಿರ ತೆಂಗಿನ ಕಾಯಿ, 1,600 ಟಿನ್ ರೀಫೈಂಡ್ ಅಡುಗೆ ಎಣ್ಣೆ, 200 ಕೆ.ಜಿ ಬೇಳೆ, 50 ಕೆ.ಜಿ ಹಲಸಂದೆ, 30 ಟನ್ ಬೆಲ್ಲವನ್ನು ತರಿಸಲಾಗಿದೆ.</p>.<p>ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ 150 ಕ್ವಿಂಟಾಲ್ ಸಕ್ಕರೆಯನ್ನು ದೇಣಿಗೆ ಯಾಗಿ ನೀಡಿದೆ. ಪ್ರತಿದಿನ ಮೈಸೂರು, ಪಾಂಡವಪುರ, ಗುಂಡ್ಲುಪೇಟೆ, ಊಟಿ, ನಂಜನಗೂಡಿನ ಮಾರುಕಟ್ಟೆಗಳಿಂದ ಟನ್ ಗಟ್ಟಲೆ ತರಕಾರಿ ದೇಣಿಗೆಯಾಗಿ ದೊರೆಯುತ್ತಿದೆ. ಶಿವಮೊಗ್ಗದ ಭಕ್ತರು 2 ಟನ್ ತರಕಾರಿ ಕಳುಹಿಸಿದ್ದಾರೆ.</p>.<p>ಆಹಾರ ತಯಾರಿಸಲು 4–5 ಕ್ವಿಂಟಾಲ್ ಆಹಾರ ತಯಾರಿಸ ಬಹುದಾದ 35 ಕೊಪ್ಪರಿಕೆಗಳನ್ನು ಬಳಸಲಾಗುತ್ತಿದೆ.</p>.<p>ಮಹಿಳೆಯರು, ಪುರುಷರು ಹಾಗೂ ಸ್ವಯಂಸೇವಕರಿಗಾಗಿ ಪ್ರತ್ಯೇಕ ಆಹಾರ ಕೌಂಟರ್ಗಳನ್ನು ತೆರೆಯಲಾಗಿದೆ. ಸುತ್ತೂರಿನ ಬಸವೇಶ್ವರ ಹೈಸ್ಕೂಲ್, ವಸ್ತುಪ್ರದರ್ಶನ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p>‘500 ಮಂದಿ ಬಾಣಸಿಗರು, 300 ಮಂದಿ ಸ್ವಚ್ಛತಾ ನಿರ್ವಾಹಕರು ಹಾಗೂ ಸುತ್ತೂರಿನ ಸುತ್ತಮುತ್ತಲ 33 ಹಳ್ಳಿಗಳ 2 ಸಾವಿರ ಹಾಗೂ ಸಂಸ್ಥೆಯ<br />1 ಸಾವಿರ ಸ್ವಯಂಸೇವಕರು ಭಕ್ತರ ದಾಸೋಹ ಸೇವೆಯಲ್ಲಿ ನಿರತರಾಗಿದ್ದಾರೆ’ ಎಂದು ಜಾತ್ರಾ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>***</p>.<p>ಭಜನಾ ಮೇಳದಲ್ಲಿ ಕಾರ್ಯಕ್ರಮ ನೀಡಲು ಮುಧೋಳದಿಂದ 15 ಮಂದಿ ಬಂದಿದ್ದೇವೆ. ಇಲ್ಲಿ ಊಟ, ತಿಂಡಿ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದೆ.</p>.<p>–ರಂಗವ್ವ, ಮುಧೋಳ</p>.<p>***</p>.<p>ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಸುತ್ತೂರು ಮಠ ಅನ್ನ ದಾಸೋಹಕ್ಕೆ ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಪ್ರಸಾದ ರುಚಿ–ಶುಚಿಯಾಗಿದೆ.</p>.<p>–ಸಿದ್ದಮಲ್ಲಪ್ಪ, ಕೊತ್ತವಾಡಿ, ಚಾಮರಾಜನಗರ ತಾಲ್ಲೂಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>