ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಪ.ಜಾತಿ ವರ್ಗೀಕರಣ | ಜಾತಿ ಜನಗಣತಿ ಅಗತ್ಯ: ರವಿವರ್ಮ ಕುಮಾರ್‌

ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರವಿವರ್ಮ ಕುಮಾರ್‌ ಪ್ರತಿಪಾದನೆ
Published : 24 ಆಗಸ್ಟ್ 2024, 16:15 IST
Last Updated : 24 ಆಗಸ್ಟ್ 2024, 16:15 IST
ಫಾಲೋ ಮಾಡಿ
Comments
ಅಸ್ಪೃಶ್ಯತೆ ಇಂದಿಗೂ ‌ಹೋಗಿಲ್ಲ; ಕೀಳರಿಮೆಯೂ‌ ನಿವಾರಣೆಯಾಗಿಲ್ಲ. ಸುಶಿಕ್ಷಿತರ ನಡುವೆಯೂ ಅಸಮಾನತೆ ಇದೆ. ಶೋಷಿತ ಸಮಾಜದ ನ್ಯಾಯಾಧೀಶರನ್ನು ಅಭಿನಂದಿಸುವುದಕ್ಕೂ ಹಿಂಜರಿಯುವುದು ಕಂಡುಬರುತ್ತಿದೆ
ರವಿವರ್ಮ ಕುಮಾರ್ ಮಾಜಿ ಅಧ್ಯಕ್ಷ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ
ಮೀಸಲಾತಿ ಏಕೆ ಬೇಕು?
‘ಮೀಸಲಾತಿ ಕೊಡಬೇಕೇಕೆ? ಇವರಿಗೆ ಇದುವರೆಗೂ ಅಧಿಕಾರದಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ ಹಾಗೂ ವಿಶೇಷವಾಗಿ ಸರ್ಕಾರಿ ಸೇವೆಯಲ್ಲಿ ದೊರೆತಿಲ್ಲ ಎಂಬ ಕಾರಣಕ್ಕೆ ಕೊಡಬೇಕು’ ಎಂದು ರವಿವರ್ಮ ಕುಮಾರ್‌ ಹೇಳಿದರು. ‘1872ರ ಮೊದಲ ಜನಗಣತಿ ನಡೆದಾಗ ಆ ಪ್ರಕಾರ ಬ್ರಾಹ್ಮಣರು ಶೇ 3ರಷ್ಟು ಮಾತ್ರವೇ ಇದ್ದಾರೆ ಎಂಬುದು ತಿಳಿದುಬಂದಿತು. ಅಲ್ಲಿವರೆಗೂ ಎಲ್ಲ ರಂಗದಲ್ಲೂ ಅವರೇ ಮುಂದೆ ಇದ್ದಿದ್ದರಿಂದ ಅವರ ಜನಸಂಖ್ಯೆ ಜಾಸ್ತಿ ಇರಬಹುದೆಂದು ಎಲ್ಲರೂ ಭಾವಿಸಿದ್ದರು. ಇದಾಗಿ ಎರಡು ವರ್ಷಗಳ ತರುವಾಯ ಅಂದರೆ 1874ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿಯನ್ನು ಪರಿಚಯಿಸಲಾಯಿತು. ಮೊದಲಿಗೆ ಪೊಲೀಸ್ ಅಧಿಕಾರಿಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಲಾಗಿತ್ತು. ಈಗಲೂ ವರ್ಗೀಕರಣ ವಿಷಯದಲ್ಲಿ ಕರ್ನಾಟಕವೇ ಮುಂದಡಿ ಇಡಬೇಕು’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT