<p><strong>ಮೈಸೂರು</strong>: ನಗರದ ಮತ್ಸ್ಯ ಖಾದ್ಯ ಪ್ರಿಯರಿಗೆ ಖುಷಿಯ ಸುದ್ದಿ ಇಲ್ಲಿದೆ. ಕರಾವಳಿ ಶೈಲಿಯ ಮೀನಿನ ಬಗೆಬಗೆಯ ಅಡುಗೆಗಳನ್ನು ಉಣಬಡಿಸುವ ‘ಮತ್ಸ್ಯದರ್ಶಿನಿ’ ಕೇಂದ್ರ ಸದ್ಯದಲ್ಲೇ ತಲೆಎತ್ತಲಿದೆ.</p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್ನಲ್ಲಿ ತವರೂರಿಗೆ ‘ಮತ್ಸ್ಯದರ್ಶಿನಿ’ಯ ಕೊಡುಗೆ ನೀಡಿದ್ದು, ₹50 ಲಕ್ಷ ಅನುದಾನವನ್ನೂ ಘೋಷಿಸಿದ್ದರು. ಯೋಜನೆಗೆ ಒಟ್ಟು ₹80 ಲಕ್ಷ ವೆಚ್ಚ ಅಂದಾಜಿಸಿದ್ದು, ಉಳಿದ ₹30 ಲಕ್ಷವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಭರಿಸಲಿದೆ.</p>.<p>ಹಳೇ ಜಿಲ್ಲಾಧಿಕಾರಿ ಕಚೇರಿಯ ಕ್ಯಾಂಟೀನ್ ಕಟ್ಟಡವು ಸದ್ಯ ನಿರುಪಯುಕ್ತವಾಗಿದ್ದು, ಅಲ್ಲಿಯೇ ರೆಸ್ಟೋರೆಂಟ್ ರೂಪ ಪಡೆಯಲಿದೆ. ಈಗಾಗಲೇ ಜಿಲ್ಲಾಡಳಿತವು ಕಟ್ಟಡವನ್ನು ಮಂಡಳಿಗೆ ಹಸ್ತಾಂತರಿಸಿದೆ. ನವೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದ್ದು, 15 ದಿನದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.</p>.<p><strong>ರೆಸ್ಟೋರೆಂಟ್ ಮಾದರಿ</strong>: ‘ಖಾಸಗಿ ಹೋಟೆಲ್–ರೆಸ್ಟೋರೆಂಟ್ ಮಾದರಿಯಲ್ಲೇ ಕೇಂದ್ರವನ್ನು ರೂಪಿಸಲಾಗುತ್ತಿದ್ದು, ಗ್ರಾಹಕರನ್ನು ಖಂಡಿತ ಆಕರ್ಷಿಸಲಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್.</p>.<p>ಎರಡು ಮಹಡಿಗಳನ್ನು ಕಟ್ಟಡವು ಒಳಗೊಳ್ಳಲಿದ್ದು, ಏಕಕಾಲದಲ್ಲಿ 80ರಿಂದ 100 ಜನ ಕುಳಿತು ಆಹಾರ ಸವಿಯುವಂತೆ ವಿನ್ಯಾಸಗೊಳಿಸಲಾಗಿದೆ. ಆಸನಗಳ ವ್ಯವಸ್ಥೆ, ಒಳಾಂಗಣದಲ್ಲಿ ಹವಾನಿಯಂತ್ರಿತ ಕೊಠಡಿ, ಹಿಂಭಾಗದಲ್ಲಿ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯಗಳು ಇರಲಿವೆ.</p>.<p><strong>ಕೈಗೆಟಕುವ ದರ</strong>: ಮೀನುಗಾರಿಕೆ ಮಂಡಳಿಯ ಉಸ್ತುವಾರಿಯಲ್ಲಿ ಕೇಂದ್ರವು ನಡೆಯಲಿದ್ದು, ಬೆಲೆಯೂ ಗ್ರಾಹಕರ ಕೈಗೆ ಎಟಕುವಂತೆ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ಈ ಕೇಂದ್ರ ಆರಂಭವಾದಲ್ಲಿ ಖಾದ್ಯಪ್ರಿಯರಿಗೆ ಉತ್ತಮ ಬಜೆಟ್ನಲ್ಲಿ ವೈವಿಧ್ಯಮಯ ಆಹಾರ ಸಿಗಲಿದೆ. ಜೊತೆಗೆ ಮೈಸೂರಿಗೆ ಬರುವ ಪ್ರವಾಸಿಗರಿಗೂ ಉತ್ತಮ ಸೌಲಭ್ಯ ಸಿಗಲಿದ್ದು, ಪ್ರವಾಸೋದ್ಯಮಕ್ಕೂ ಪೂರಕವಾಗಿ ಇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಗರದ ಮತ್ಸ್ಯ ಖಾದ್ಯ ಪ್ರಿಯರಿಗೆ ಖುಷಿಯ ಸುದ್ದಿ ಇಲ್ಲಿದೆ. ಕರಾವಳಿ ಶೈಲಿಯ ಮೀನಿನ ಬಗೆಬಗೆಯ ಅಡುಗೆಗಳನ್ನು ಉಣಬಡಿಸುವ ‘ಮತ್ಸ್ಯದರ್ಶಿನಿ’ ಕೇಂದ್ರ ಸದ್ಯದಲ್ಲೇ ತಲೆಎತ್ತಲಿದೆ.</p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್ನಲ್ಲಿ ತವರೂರಿಗೆ ‘ಮತ್ಸ್ಯದರ್ಶಿನಿ’ಯ ಕೊಡುಗೆ ನೀಡಿದ್ದು, ₹50 ಲಕ್ಷ ಅನುದಾನವನ್ನೂ ಘೋಷಿಸಿದ್ದರು. ಯೋಜನೆಗೆ ಒಟ್ಟು ₹80 ಲಕ್ಷ ವೆಚ್ಚ ಅಂದಾಜಿಸಿದ್ದು, ಉಳಿದ ₹30 ಲಕ್ಷವನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಭರಿಸಲಿದೆ.</p>.<p>ಹಳೇ ಜಿಲ್ಲಾಧಿಕಾರಿ ಕಚೇರಿಯ ಕ್ಯಾಂಟೀನ್ ಕಟ್ಟಡವು ಸದ್ಯ ನಿರುಪಯುಕ್ತವಾಗಿದ್ದು, ಅಲ್ಲಿಯೇ ರೆಸ್ಟೋರೆಂಟ್ ರೂಪ ಪಡೆಯಲಿದೆ. ಈಗಾಗಲೇ ಜಿಲ್ಲಾಡಳಿತವು ಕಟ್ಟಡವನ್ನು ಮಂಡಳಿಗೆ ಹಸ್ತಾಂತರಿಸಿದೆ. ನವೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆದಿದ್ದು, 15 ದಿನದಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.</p>.<p><strong>ರೆಸ್ಟೋರೆಂಟ್ ಮಾದರಿ</strong>: ‘ಖಾಸಗಿ ಹೋಟೆಲ್–ರೆಸ್ಟೋರೆಂಟ್ ಮಾದರಿಯಲ್ಲೇ ಕೇಂದ್ರವನ್ನು ರೂಪಿಸಲಾಗುತ್ತಿದ್ದು, ಗ್ರಾಹಕರನ್ನು ಖಂಡಿತ ಆಕರ್ಷಿಸಲಿದೆ’ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್.</p>.<p>ಎರಡು ಮಹಡಿಗಳನ್ನು ಕಟ್ಟಡವು ಒಳಗೊಳ್ಳಲಿದ್ದು, ಏಕಕಾಲದಲ್ಲಿ 80ರಿಂದ 100 ಜನ ಕುಳಿತು ಆಹಾರ ಸವಿಯುವಂತೆ ವಿನ್ಯಾಸಗೊಳಿಸಲಾಗಿದೆ. ಆಸನಗಳ ವ್ಯವಸ್ಥೆ, ಒಳಾಂಗಣದಲ್ಲಿ ಹವಾನಿಯಂತ್ರಿತ ಕೊಠಡಿ, ಹಿಂಭಾಗದಲ್ಲಿ ಪ್ರತ್ಯೇಕ ಅಡುಗೆ ಕೋಣೆ ಸೌಲಭ್ಯಗಳು ಇರಲಿವೆ.</p>.<p><strong>ಕೈಗೆಟಕುವ ದರ</strong>: ಮೀನುಗಾರಿಕೆ ಮಂಡಳಿಯ ಉಸ್ತುವಾರಿಯಲ್ಲಿ ಕೇಂದ್ರವು ನಡೆಯಲಿದ್ದು, ಬೆಲೆಯೂ ಗ್ರಾಹಕರ ಕೈಗೆ ಎಟಕುವಂತೆ ಇರಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<p>ಈ ಕೇಂದ್ರ ಆರಂಭವಾದಲ್ಲಿ ಖಾದ್ಯಪ್ರಿಯರಿಗೆ ಉತ್ತಮ ಬಜೆಟ್ನಲ್ಲಿ ವೈವಿಧ್ಯಮಯ ಆಹಾರ ಸಿಗಲಿದೆ. ಜೊತೆಗೆ ಮೈಸೂರಿಗೆ ಬರುವ ಪ್ರವಾಸಿಗರಿಗೂ ಉತ್ತಮ ಸೌಲಭ್ಯ ಸಿಗಲಿದ್ದು, ಪ್ರವಾಸೋದ್ಯಮಕ್ಕೂ ಪೂರಕವಾಗಿ ಇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>