<p><strong>ಮೈಸೂರು:</strong> ನಗರದ ಹಳೆ ಕೆಸರೆಯಲ್ಲಿನ ಘನ ತ್ಯಾಜ್ಯ ಸಂಸ್ಕರಣೆ ವಿಲೇವಾರಿ ಘಟಕಕ್ಕೆ ಸೋಮವಾರ ಬೆಂಕಿ ಬಿದ್ದು, 50 ಟನ್ ತ್ಯಾಜ್ಯ ಭಸ್ಮವಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. </p>.<p>ಪಾಲಿಕೆಯ ಈ ಘಟಕದಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯು ದಟ್ಟವಾಗಿ ವ್ಯಾಪಿಸಿತ್ತು. ನಾಗರಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರಿಂದ, ತಕ್ಷಣದಲ್ಲೇ ಬಂದ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದರು. </p>.<p>ಭಾರಿ ಅನಾಹುತ ತಪ್ಪಿದ್ದು, ₹ 40 ಲಕ್ಷ ಮೌಲ್ಯದ ತ್ಯಾಜ್ಯ ವಿಂಗಡಿಸುವ ಯಂತ್ರೋಪಕರಣ ಬೆಂಕಿಗೆ ಆಹುತಿಯಾಗಿದೆ. </p>.<p><strong>ದಟ್ಟ ಹೊಗೆ:</strong></p>.<p>ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ವಸ್ತುಗಳು ಸುಟ್ಟಿದ್ದರಿಂದ ಸುತ್ತಮುತ್ತ ಹೊಗೆ ದಟ್ಟವಾಗಿ ಆವರಿಸಿತ್ತು. ಪ್ಲಾಸ್ಟಿಕ್ ಸುಟ್ಟ ವಾಸನೆ ಹಬ್ಬಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. </p>.<p><strong>ಸ್ಥಳಾಂತರಕ್ಕೆ ಪ್ರತಿಭಟನೆ:</strong></p>.<p>‘ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿ ‘ಜನಸ್ಪಂದನಾ ಹಿತರಕ್ಷಣ ವೇದಿಕೆ’ ನೇತೃತ್ವದಲ್ಲಿ ಸ್ಥಳೀಯರು, ಪಾಲಿಕೆ ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.</p>.<p>ವೇದಿಕೆಯ ಪ್ರಶಾಂತ್ ಮಾತನಾಡಿ, ‘ಘಟಕದಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಅಂತರ್ಜಲವೂ ಕೆಟ್ಟಿದೆ. ಕೊಳಚೆ ನೀರನ್ನು ವರುಣ ಕಾಲುವೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಉಪ ಲೋಕಾಯುಕ್ತ ಫಣೀಂದ್ರ ಅವರ ಗಮನಕ್ಕೂ ತರಲಾಗಿತ್ತು. ಯಾವುದೇ ಪ್ರಯೋಜವಾಗಿಲ್ಲ’ ಎಂದು ದೂರಿದರು. </p>.<p>ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರೊಂದಿಗೆ ಪ್ರತಿಭಟನಕಾರರು ಮಾತಿನ ಚಕಮಕಿ ನಡೆಸಿದರು.</p>.<p>ಪೊಲೀಸರು ಬಂದು ಪ್ರತಿಭಟನಕಾರರ ಮನವೊಲಿಸಿದರು. ಮುಖಂಡರಾದ ಮಾದೇಶ, ರೇವಣ್ಣ, ಶಿವಮಲ್ಲು, ವೆಂಕಟರಾಜು, ಅಲಸಿಂಗನ್, ಜಯಶಂಕರ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ಹಳೆ ಕೆಸರೆಯಲ್ಲಿನ ಘನ ತ್ಯಾಜ್ಯ ಸಂಸ್ಕರಣೆ ವಿಲೇವಾರಿ ಘಟಕಕ್ಕೆ ಸೋಮವಾರ ಬೆಂಕಿ ಬಿದ್ದು, 50 ಟನ್ ತ್ಯಾಜ್ಯ ಭಸ್ಮವಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. </p>.<p>ಪಾಲಿಕೆಯ ಈ ಘಟಕದಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆಯು ದಟ್ಟವಾಗಿ ವ್ಯಾಪಿಸಿತ್ತು. ನಾಗರಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರಿಂದ, ತಕ್ಷಣದಲ್ಲೇ ಬಂದ ಸಿಬ್ಬಂದಿ ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದರು. </p>.<p>ಭಾರಿ ಅನಾಹುತ ತಪ್ಪಿದ್ದು, ₹ 40 ಲಕ್ಷ ಮೌಲ್ಯದ ತ್ಯಾಜ್ಯ ವಿಂಗಡಿಸುವ ಯಂತ್ರೋಪಕರಣ ಬೆಂಕಿಗೆ ಆಹುತಿಯಾಗಿದೆ. </p>.<p><strong>ದಟ್ಟ ಹೊಗೆ:</strong></p>.<p>ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ವಸ್ತುಗಳು ಸುಟ್ಟಿದ್ದರಿಂದ ಸುತ್ತಮುತ್ತ ಹೊಗೆ ದಟ್ಟವಾಗಿ ಆವರಿಸಿತ್ತು. ಪ್ಲಾಸ್ಟಿಕ್ ಸುಟ್ಟ ವಾಸನೆ ಹಬ್ಬಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. </p>.<p><strong>ಸ್ಥಳಾಂತರಕ್ಕೆ ಪ್ರತಿಭಟನೆ:</strong></p>.<p>‘ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿ ‘ಜನಸ್ಪಂದನಾ ಹಿತರಕ್ಷಣ ವೇದಿಕೆ’ ನೇತೃತ್ವದಲ್ಲಿ ಸ್ಥಳೀಯರು, ಪಾಲಿಕೆ ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.</p>.<p>ವೇದಿಕೆಯ ಪ್ರಶಾಂತ್ ಮಾತನಾಡಿ, ‘ಘಟಕದಿಂದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಅಂತರ್ಜಲವೂ ಕೆಟ್ಟಿದೆ. ಕೊಳಚೆ ನೀರನ್ನು ವರುಣ ಕಾಲುವೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಉಪ ಲೋಕಾಯುಕ್ತ ಫಣೀಂದ್ರ ಅವರ ಗಮನಕ್ಕೂ ತರಲಾಗಿತ್ತು. ಯಾವುದೇ ಪ್ರಯೋಜವಾಗಿಲ್ಲ’ ಎಂದು ದೂರಿದರು. </p>.<p>ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರೊಂದಿಗೆ ಪ್ರತಿಭಟನಕಾರರು ಮಾತಿನ ಚಕಮಕಿ ನಡೆಸಿದರು.</p>.<p>ಪೊಲೀಸರು ಬಂದು ಪ್ರತಿಭಟನಕಾರರ ಮನವೊಲಿಸಿದರು. ಮುಖಂಡರಾದ ಮಾದೇಶ, ರೇವಣ್ಣ, ಶಿವಮಲ್ಲು, ವೆಂಕಟರಾಜು, ಅಲಸಿಂಗನ್, ಜಯಶಂಕರ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>