<p><strong>ತಿ.ನರಸೀಪುರ:</strong> ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಕಾರ್ಮಿಕರು, ಪರಿಸರಪ್ರೇಮಿಗಳು ನಡೆಸುತ್ತಿರುವ ಕಾರ್ಖಾನೆ ಉಳಿಸಿ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಭಾನುವಾರ ಭಾಗವಹಿಸಿ ಬೆಂಬಲ ಸೂಚಿಸಿದರು.</p>.<p>ಸಂಘದ ರಾಜ್ಯ ಸಂಘಟನಾ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ‘ಕಾರ್ಖಾನೆ, ಪರಿಸರ ಹಾಗೂ ರೈತರು, ಕಾರ್ಮಿಕರ ಉಳಿವಿಗಾಗಿ ನಿಮ್ಮ ಜತೆ ನಾವಿದ್ದು, ಹೋರಾಟವನ್ನು ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು’ ಎಂದು ಸರ್ಕಾರವನ್ನು ಒತ್ತಾಯಿಸಿದರು.</p>.<p>‘ಕಾರ್ಮಿಕರ ಹೋರಾಟ, ನಮ್ಮ ಮನವಿಯನ್ನು ಪರಿಗಣಿಸದಿದ್ದಲ್ಲಿ ಹೋರಾಟ ಮುಂದುವರಿಸಲಿದ್ದು, ತಿ. ನರಸೀಪುರ ಬಂದ್ಗೂ ಚಿಂತನೆ ಮಾಡಬೇಕಾಗುತ್ತದೆ. ಈ ಬಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ರೈತ ಸಂಘದ ಹೋರಾಟದ ವೇಳೆ ನಮ್ಮ ರಾಜ್ಯ ರೈತ ನಾಯಕರು ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ’ ಎಂದು ತಿಳಿಸಿದರು</p>.<p>ಜಿಲ್ಲಾ ಘಟಕದ ಹೊಸಕೋಟೆ ರಘು ಶ್ರೀಕಂಠ, ಬಸಪ್ಪ, ಚಂದ್ರು, ಮಹೇಶ, ಮಾದೇವ ನಾಯಕ, ತಾಲ್ಲೂಕು ಅಧ್ಯಕ್ಷ ಕರೋಹಟ್ಟಿ<br /> ಕುಮಾರಸ್ವಾಮಿ, ಬೂದಹಳ್ಳಿ ಶಂಕರ್, ಇ. ರಾಜು, ಹಲವಾರ ಮಹದೇವಸ್ವಾಮಿ, ಬೇವಿನಹಳ್ಳಿ ರವಿ, ಪರಿಸರ ಬಳಗದ ಪರಶುರಾಮ್ ಗೌಡ, ಕೊತ್ತೇಗಾಲ ಶಾಂತಮೂರ್ತಿ, ಸುಜ್ಜಲೂರು ಚಂದ್ರು, ಕಳ್ಳಿಪುರ ನಾರಾಯಣಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ಕೆಎಸ್ಐಸಿ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ವಿರೋಧಿಸಿ ಕಾರ್ಮಿಕರು, ಪರಿಸರಪ್ರೇಮಿಗಳು ನಡೆಸುತ್ತಿರುವ ಕಾರ್ಖಾನೆ ಉಳಿಸಿ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಭಾನುವಾರ ಭಾಗವಹಿಸಿ ಬೆಂಬಲ ಸೂಚಿಸಿದರು.</p>.<p>ಸಂಘದ ರಾಜ್ಯ ಸಂಘಟನಾ ವಿಭಾಗೀಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ‘ಕಾರ್ಖಾನೆ, ಪರಿಸರ ಹಾಗೂ ರೈತರು, ಕಾರ್ಮಿಕರ ಉಳಿವಿಗಾಗಿ ನಿಮ್ಮ ಜತೆ ನಾವಿದ್ದು, ಹೋರಾಟವನ್ನು ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು’ ಎಂದು ಸರ್ಕಾರವನ್ನು ಒತ್ತಾಯಿಸಿದರು.</p>.<p>‘ಕಾರ್ಮಿಕರ ಹೋರಾಟ, ನಮ್ಮ ಮನವಿಯನ್ನು ಪರಿಗಣಿಸದಿದ್ದಲ್ಲಿ ಹೋರಾಟ ಮುಂದುವರಿಸಲಿದ್ದು, ತಿ. ನರಸೀಪುರ ಬಂದ್ಗೂ ಚಿಂತನೆ ಮಾಡಬೇಕಾಗುತ್ತದೆ. ಈ ಬಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ರೈತ ಸಂಘದ ಹೋರಾಟದ ವೇಳೆ ನಮ್ಮ ರಾಜ್ಯ ರೈತ ನಾಯಕರು ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಾರೆ’ ಎಂದು ತಿಳಿಸಿದರು</p>.<p>ಜಿಲ್ಲಾ ಘಟಕದ ಹೊಸಕೋಟೆ ರಘು ಶ್ರೀಕಂಠ, ಬಸಪ್ಪ, ಚಂದ್ರು, ಮಹೇಶ, ಮಾದೇವ ನಾಯಕ, ತಾಲ್ಲೂಕು ಅಧ್ಯಕ್ಷ ಕರೋಹಟ್ಟಿ<br /> ಕುಮಾರಸ್ವಾಮಿ, ಬೂದಹಳ್ಳಿ ಶಂಕರ್, ಇ. ರಾಜು, ಹಲವಾರ ಮಹದೇವಸ್ವಾಮಿ, ಬೇವಿನಹಳ್ಳಿ ರವಿ, ಪರಿಸರ ಬಳಗದ ಪರಶುರಾಮ್ ಗೌಡ, ಕೊತ್ತೇಗಾಲ ಶಾಂತಮೂರ್ತಿ, ಸುಜ್ಜಲೂರು ಚಂದ್ರು, ಕಳ್ಳಿಪುರ ನಾರಾಯಣಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>