<p><strong>ಮೈಸೂರು:</strong> ‘ರಂಗಭೂಮಿ ಒಂದು ಜೀವಂತ ಕಲಾ ಪ್ರಕಾರವಾಗಿದ್ದು, ಬಹಳ ಪ್ರಭಾವಶಾಲಿ ಮಾಧ್ಯಮ’ ಎಂದು ರಂಗಕರ್ಮಿ ಜನಾರ್ಧನ್ ಹೇಳಿದರು.</p>.<p>ನಗರದ ಕಿರುರಂಗಮಂದಿರದಲ್ಲಿ ಭಾನುವಾರ ಜಿಪಿಐಇಆರ್ ರಂಗತಂಡದ 31ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಶ್ರಾವಣ ರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಮನರಂಜನೆ ಜೊತೆಗೆ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸಲು ರಂಗಭೂಮಿ ಒಂದು ಶಕ್ತಿಯುತ ಸಾಧನವಾಗಿದೆ. ಹೊಸ ವಿಷಯಗಳನ್ನು ಕಲಿಸುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ’ ಎಂದರು.</p>.<p>‘ರಂಗಭೂಮಿ ಎಲ್ಲವನ್ನೂ ಒಳಗೊಳ್ಳುತ್ತದೆ. ಇಲ್ಲಿ ಯಾವುದೇ ಜಾತಿ, ಮತವಿಲ್ಲ. ಎಲ್ಲವೂ ಶುದ್ಧವಾಗಿದೆ. ಕುವೆಂಪು ಹೇಳಿದಂತೆ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದು ರಂಗಭೂಮಿಯ ಮೂಲ ಪಠ್ಯವಾಗಿದೆ. ಸಮಾಜಕ್ಕೆ ಒಳ್ಳೆಯ ಸಂಗತಿಗಳನ್ನು ಕೊಡುಗೆ ನೀಡುವುದು ರಂಗಭೂಮಿಯ ಮೂಲ ಉದ್ದೇಶವಾಗಿದೆ’ ಎಂದು ತಿಳಿಸಿದರು.</p>.<p>‘ರಂಗಕ್ರಿಯೆ ನಿರಂತರವಾಗಿ ಬೆಳೆಯಬೇಕು. ರಂಗಭೂಮಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ರಂಗಭೂಮಿ ಅಭಿಮಾನಿಗಳು ದೈವತ್ವದ ಸಂಕೇತವಾಗಿದ್ದು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕಿದೆ’ ಎಂದರು.</p>.<p>ರಂಗಕರ್ಮಿ ಬಿ.ಎಂ.ರಾಮಚಂದ್ರ ಮಾತನಾಡಿ, ‘ರಂಗಭೂಮಿ ಎಂದರೆ ಒಂದು ಶಿಸ್ತು. ಇದು ಕೇವಲ ಕಲೆಯಲ್ಲದೆ, ನಿರ್ದಿಷ್ಟ ನಿಯಮಗಳು ಮತ್ತು ತತ್ವಗಳನ್ನು ಅನುಸರಿಸುವುದನ್ನು ತಿಳಿಸುತ್ತದೆ’ ಎಂದರು.</p>.<p>ಲೇಖಕಿ ಸುಜಾತಾ ಅಕ್ಕಿ ಮಾತನಾಡಿ, ‘ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜಾನಪದದ ಸಾಂಸ್ಕೃತಿಕ ಧಾರೆ ಎರೆಯುವ ಕೆಲಸ ಮಾಡಲಾಗುತ್ತಿರುವುದು ಶ್ಲಾಘನೀಯ’ ಎಂದರು.</p>.<p>ರಂಗ ನಿರ್ದೇಶಕ ಮೋಹನ್ಚಂದ್ರ ಉರ್ವ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಂಗಳೂರಿನ ಆಯನ ನಾಟಕದ ಮನೆ ತಂಡ ‘ಅಶ್ವತ್ಥಾಮ ನಾಟ್ ಔಟ್’ ನಾಟಕ ಪ್ರಸ್ತುತಪಡಿಸಿತು.</p>.<p>ರಂಗಕರ್ಮಿಗಳಾದ ಸಿದ್ದೇಗೌಡ ಜಿಬಿಎಸ್, ರಾಜೇಶ್ ಎಚ್.ತಕಲಕಾಡು, ಶ್ರಾವಣ ರಂಗೋತ್ಸವದ ಸಂಚಾಲಕ ಎಂ.ಪಿ.ಹರಿದತ್ತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ರಂಗಭೂಮಿ ಒಂದು ಜೀವಂತ ಕಲಾ ಪ್ರಕಾರವಾಗಿದ್ದು, ಬಹಳ ಪ್ರಭಾವಶಾಲಿ ಮಾಧ್ಯಮ’ ಎಂದು ರಂಗಕರ್ಮಿ ಜನಾರ್ಧನ್ ಹೇಳಿದರು.</p>.<p>ನಗರದ ಕಿರುರಂಗಮಂದಿರದಲ್ಲಿ ಭಾನುವಾರ ಜಿಪಿಐಇಆರ್ ರಂಗತಂಡದ 31ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಶ್ರಾವಣ ರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಮನರಂಜನೆ ಜೊತೆಗೆ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸಲು ರಂಗಭೂಮಿ ಒಂದು ಶಕ್ತಿಯುತ ಸಾಧನವಾಗಿದೆ. ಹೊಸ ವಿಷಯಗಳನ್ನು ಕಲಿಸುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ’ ಎಂದರು.</p>.<p>‘ರಂಗಭೂಮಿ ಎಲ್ಲವನ್ನೂ ಒಳಗೊಳ್ಳುತ್ತದೆ. ಇಲ್ಲಿ ಯಾವುದೇ ಜಾತಿ, ಮತವಿಲ್ಲ. ಎಲ್ಲವೂ ಶುದ್ಧವಾಗಿದೆ. ಕುವೆಂಪು ಹೇಳಿದಂತೆ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದು ರಂಗಭೂಮಿಯ ಮೂಲ ಪಠ್ಯವಾಗಿದೆ. ಸಮಾಜಕ್ಕೆ ಒಳ್ಳೆಯ ಸಂಗತಿಗಳನ್ನು ಕೊಡುಗೆ ನೀಡುವುದು ರಂಗಭೂಮಿಯ ಮೂಲ ಉದ್ದೇಶವಾಗಿದೆ’ ಎಂದು ತಿಳಿಸಿದರು.</p>.<p>‘ರಂಗಕ್ರಿಯೆ ನಿರಂತರವಾಗಿ ಬೆಳೆಯಬೇಕು. ರಂಗಭೂಮಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ರಂಗಭೂಮಿ ಅಭಿಮಾನಿಗಳು ದೈವತ್ವದ ಸಂಕೇತವಾಗಿದ್ದು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕಿದೆ’ ಎಂದರು.</p>.<p>ರಂಗಕರ್ಮಿ ಬಿ.ಎಂ.ರಾಮಚಂದ್ರ ಮಾತನಾಡಿ, ‘ರಂಗಭೂಮಿ ಎಂದರೆ ಒಂದು ಶಿಸ್ತು. ಇದು ಕೇವಲ ಕಲೆಯಲ್ಲದೆ, ನಿರ್ದಿಷ್ಟ ನಿಯಮಗಳು ಮತ್ತು ತತ್ವಗಳನ್ನು ಅನುಸರಿಸುವುದನ್ನು ತಿಳಿಸುತ್ತದೆ’ ಎಂದರು.</p>.<p>ಲೇಖಕಿ ಸುಜಾತಾ ಅಕ್ಕಿ ಮಾತನಾಡಿ, ‘ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜಾನಪದದ ಸಾಂಸ್ಕೃತಿಕ ಧಾರೆ ಎರೆಯುವ ಕೆಲಸ ಮಾಡಲಾಗುತ್ತಿರುವುದು ಶ್ಲಾಘನೀಯ’ ಎಂದರು.</p>.<p>ರಂಗ ನಿರ್ದೇಶಕ ಮೋಹನ್ಚಂದ್ರ ಉರ್ವ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಂಗಳೂರಿನ ಆಯನ ನಾಟಕದ ಮನೆ ತಂಡ ‘ಅಶ್ವತ್ಥಾಮ ನಾಟ್ ಔಟ್’ ನಾಟಕ ಪ್ರಸ್ತುತಪಡಿಸಿತು.</p>.<p>ರಂಗಕರ್ಮಿಗಳಾದ ಸಿದ್ದೇಗೌಡ ಜಿಬಿಎಸ್, ರಾಜೇಶ್ ಎಚ್.ತಕಲಕಾಡು, ಶ್ರಾವಣ ರಂಗೋತ್ಸವದ ಸಂಚಾಲಕ ಎಂ.ಪಿ.ಹರಿದತ್ತ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>