<p><strong>ಹುಣಸೂರು</strong>: ಅನಧಿಕೃತ ತಂಬಾಕು ಬೆಳೆಗಾರರು ಮತ್ತು ಕಾರ್ಡ್ ಹೊಂದಿರುವ ಬೆಳೆಗಾರಿಗೆ ಮಾರುಕಟ್ಟೆಯಲ್ಲಿ ದಂಡವಿಲ್ಲದಂತೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ತಂಬಾಕು ಹಿತರಕ್ಷಣಾ ಸಮಿತಿ ಸದಸ್ಯರು ಸಂಸದರನ್ನು ಒತ್ತಾಯಿಸಿದರು.</p>.<p>ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಗೆ ಮನವಿ ಮಾಡಿ ಮಾತನಾಡಿದ ಕಲ್ಕುಣಿಕೆ ಬಸವರಾಜ್, ‘ಅನಧಿಕೃತ ಮತ್ತು ಕಾರ್ಡ್ದಾರರು ಅಧಿಕೃತ ಬೆಳೆಗಾರರಂತೆ ಕಷ್ಟಪಟ್ಟು ತಂಬಾಕು ಬೆಳೆಯುತ್ತಿದ್ದು, ಈ ರೈತರಿಗೂ ಅಧಿಕೃತ ಬೆಳೆಗಾರರ ಮಾದರಿಯಲ್ಲೇ ಮಾರುಕಟ್ಟೆಯಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದರು.</p>.<p>ಅನಧಿಕೃತ ಬೆಳೆಗಾರರಿಗೆ ಮಂಡಳಿ ವತಿಯಿಂದ ಯಾವುದೇ ಸವಲತ್ತು ಇಲ್ಲದಿದ್ದರೂ ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಬೆಳೆಗಾರರ ಮೇಲೆ ಬರೆ ಹಾಕದಂತೆ ಮಧ್ಯ ಪ್ರವೇಶಿಸಿ ದಂಡ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಲು ತಂಬಾಕು ಮಂಡಳಿ ಅಧ್ಯಕ್ಷರನ್ನು ಮನವೊಲಿಸಬೇಕು ಎಂದರು.</p>.<p>ಮನವಿ ಸ್ವೀಕರಿಸಿದ ಸಂಸದರು, ಅನಧಿಕೃತ ಬೆಳೆಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಕಳೆದ ಸಾಲಿನಲ್ಲಿ ಈ ಸಮಸ್ಯೆ ಕುರಿತು ಮಂಡಳಿಯೊಂದಿಗೆ ಮಾತನಾಡಿ ದಂಡ ವಿಧಿಸದಂತೆ ಕ್ರಮವಹಿಸಲಾಗಿತ್ತು. ಈ ಸಾಲಿನಲ್ಲೂ ಪ್ರಯತ್ನಿಸುತ್ತೇನೆ ಎಂದರು.</p>.<p>‘ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣವಾಗುತ್ತಿದ್ದು, ಈ ರಸ್ತೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಅವಕಾಶವಿಲ್ಲದೆ ಸ್ಥಳಿಯ ಗ್ರಾಮದ ರೈತರು ಹೊಲ ಗದ್ದೆಗೆ ಹೋಗಲು ಸಮಸ್ಯೆ ಎದುರಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್ ವಿಭಾಗದ ಗಮನ ಸೆಳೆಯಬೇಕು ಎಂಬ ಮನವಿಗೆ, ಅದು ಸಾಧ್ಯವಿಲ್ಲ, ರಾಷ್ಟ್ರೀಯ ಹೆದ್ದಾರಿ ನಿಯಮಾನುಸಾರ ನಿರ್ಮಾಣವಾಗುತ್ತಿದ್ದು, ಸರ್ವಿಸ್ ರಸ್ತೆ ಎಲ್ಲಾ ಗ್ರಾಮಗಳಿಗೂ ನೀಡಲು ಬರುವುದಿಲ್ಲ. ಬದಲಿಗೆ ಅಂಡರ್ ಪಾಸ್ ರಸ್ತೆ ನಿರ್ಮಿಸಲಿದ್ದಾರೆ’ ಎಂದರು.</p>.<p>ಬನ್ನಿಕುಪ್ಪೆ ಗ್ರಾಮದ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗಾಗಲೇ ಎನ್.ಎಚ್.275 ನಿರ್ವಹಣೆಗೆ ಅನುದಾನ ರಾಜ್ಯ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈ ಸಂಬಂಧ ಕ್ರಮವಹಿಸಬೇಕು. ಸ್ಥಳಿ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಹೇಳಿದರು.</p>.<p>ಸಂಸದರ ಭೇಟಿ ಸಮಯದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೋವಿಂದಯ್ಯ, ಉದ್ದೂರು ನಟರಾಜ್, ಚಂದ್ರಪ್ಪ, ಕೃಷ್ಣೇಗೌಡ,ಶಿವಶೇಖರ್, ಮೋದೂರು ಬಸವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಅನಧಿಕೃತ ತಂಬಾಕು ಬೆಳೆಗಾರರು ಮತ್ತು ಕಾರ್ಡ್ ಹೊಂದಿರುವ ಬೆಳೆಗಾರಿಗೆ ಮಾರುಕಟ್ಟೆಯಲ್ಲಿ ದಂಡವಿಲ್ಲದಂತೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕು ಎಂದು ತಂಬಾಕು ಹಿತರಕ್ಷಣಾ ಸಮಿತಿ ಸದಸ್ಯರು ಸಂಸದರನ್ನು ಒತ್ತಾಯಿಸಿದರು.</p>.<p>ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರಿಗೆ ಮನವಿ ಮಾಡಿ ಮಾತನಾಡಿದ ಕಲ್ಕುಣಿಕೆ ಬಸವರಾಜ್, ‘ಅನಧಿಕೃತ ಮತ್ತು ಕಾರ್ಡ್ದಾರರು ಅಧಿಕೃತ ಬೆಳೆಗಾರರಂತೆ ಕಷ್ಟಪಟ್ಟು ತಂಬಾಕು ಬೆಳೆಯುತ್ತಿದ್ದು, ಈ ರೈತರಿಗೂ ಅಧಿಕೃತ ಬೆಳೆಗಾರರ ಮಾದರಿಯಲ್ಲೇ ಮಾರುಕಟ್ಟೆಯಲ್ಲಿ ಬಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದರು.</p>.<p>ಅನಧಿಕೃತ ಬೆಳೆಗಾರರಿಗೆ ಮಂಡಳಿ ವತಿಯಿಂದ ಯಾವುದೇ ಸವಲತ್ತು ಇಲ್ಲದಿದ್ದರೂ ಬೇಸಾಯ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದು, ಈ ಬೆಳೆಗಾರರ ಮೇಲೆ ಬರೆ ಹಾಕದಂತೆ ಮಧ್ಯ ಪ್ರವೇಶಿಸಿ ದಂಡ ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಲು ತಂಬಾಕು ಮಂಡಳಿ ಅಧ್ಯಕ್ಷರನ್ನು ಮನವೊಲಿಸಬೇಕು ಎಂದರು.</p>.<p>ಮನವಿ ಸ್ವೀಕರಿಸಿದ ಸಂಸದರು, ಅನಧಿಕೃತ ಬೆಳೆಗಾರರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಕಳೆದ ಸಾಲಿನಲ್ಲಿ ಈ ಸಮಸ್ಯೆ ಕುರಿತು ಮಂಡಳಿಯೊಂದಿಗೆ ಮಾತನಾಡಿ ದಂಡ ವಿಧಿಸದಂತೆ ಕ್ರಮವಹಿಸಲಾಗಿತ್ತು. ಈ ಸಾಲಿನಲ್ಲೂ ಪ್ರಯತ್ನಿಸುತ್ತೇನೆ ಎಂದರು.</p>.<p>‘ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣವಾಗುತ್ತಿದ್ದು, ಈ ರಸ್ತೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಅವಕಾಶವಿಲ್ಲದೆ ಸ್ಥಳಿಯ ಗ್ರಾಮದ ರೈತರು ಹೊಲ ಗದ್ದೆಗೆ ಹೋಗಲು ಸಮಸ್ಯೆ ಎದುರಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರಿಂಗ್ ವಿಭಾಗದ ಗಮನ ಸೆಳೆಯಬೇಕು ಎಂಬ ಮನವಿಗೆ, ಅದು ಸಾಧ್ಯವಿಲ್ಲ, ರಾಷ್ಟ್ರೀಯ ಹೆದ್ದಾರಿ ನಿಯಮಾನುಸಾರ ನಿರ್ಮಾಣವಾಗುತ್ತಿದ್ದು, ಸರ್ವಿಸ್ ರಸ್ತೆ ಎಲ್ಲಾ ಗ್ರಾಮಗಳಿಗೂ ನೀಡಲು ಬರುವುದಿಲ್ಲ. ಬದಲಿಗೆ ಅಂಡರ್ ಪಾಸ್ ರಸ್ತೆ ನಿರ್ಮಿಸಲಿದ್ದಾರೆ’ ಎಂದರು.</p>.<p>ಬನ್ನಿಕುಪ್ಪೆ ಗ್ರಾಮದ ಫ್ಲೈಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ಈಗಾಗಲೇ ಎನ್.ಎಚ್.275 ನಿರ್ವಹಣೆಗೆ ಅನುದಾನ ರಾಜ್ಯ ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಈ ಸಂಬಂಧ ಕ್ರಮವಹಿಸಬೇಕು. ಸ್ಥಳಿ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಹೇಳಿದರು.</p>.<p>ಸಂಸದರ ಭೇಟಿ ಸಮಯದಲ್ಲಿ ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ, ಗೋವಿಂದಯ್ಯ, ಉದ್ದೂರು ನಟರಾಜ್, ಚಂದ್ರಪ್ಪ, ಕೃಷ್ಣೇಗೌಡ,ಶಿವಶೇಖರ್, ಮೋದೂರು ಬಸವರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>