ಹಿಮಾಲಯ ಎನ್ನುವುದು ಶ್ರಮಿಕರು, ಬಡವರಿಗೆ ಕೈಗೆಟುಕದ ಪರ್ವತ. ಪೌರಕಾರ್ಮಿಕರ ಮಕ್ಕಳು, ಮಾವುತ–ಕಾವಾಡಿಗಳು ಹಾಗೂ ಅರಣ್ಯ ಗಸ್ತು ವೀಕ್ಷಕರ ಚಾರಣದ ಕನಸು ನನಸಾಗಲು 165ಕ್ಕೂ ಹೆಚ್ಚು ಪರ್ವಾತಾರೋಹಿಗಳು ಕೈ ಜೋಡಿಸಿದರು. ಹಿಮಾಲಯ ಎಂಬುದು ಈಗ ಅವರಿಗೆ ಹೃದ್ಯವಾಗಿದೆ. ‘ಜೂನೂನ್– 2025’ ಹಿಮಾಲಯ ಸಾಹಸ ಯಾತ್ರೆಯನ್ನು ಇದೇ ಏಪ್ರಿಲ್–ಮೇನಲ್ಲಿ ಕೈಗೊಳ್ಳಲಾಗಿತ್ತು.