‘ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಗುರುವಾರ ಸಂಜೆ 7ಕ್ಕೆ ವ್ಯಾಮ್ಸಿ ಮೆರ್ಲಾ, ಮೋಟಾರ್ ರೇಸರ್ ಚೇತನ್ ಶಿವರಾಮ್, ವಿಜಯ್ ರಾವ್, ಲೋಕೇಶ್ ಗೌಡ ಸೇರಿದಂತೆ ಮಹಿಳೆಯೊಬ್ಬರು ಅರಣ್ಯ ಪ್ರವೇಶಿಸಿದ್ದರು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಎಲ್ಲಿಯವರು ಎನ್ನುವುದು ತಿಳಿದುಬಂದಿದೆ.