<p><strong>ಹುಣಸೂರು</strong>: ‘ಮುಸ್ಲೀಮರ ಧಾರ್ಮಿಕ ಶ್ರೇಷ್ಠತೆಯ ಹಬ್ಬ ರಂಜಾನ್ನಲ್ಲಿ ಪ್ರತಿಯೊಬ್ಬರೂ ಕಟ್ಟುನಿಟ್ಟಿನ ಉಪವಾಸ ಮಾಡಿ ದೇವರನ್ನು ಪ್ರಾರ್ಥಿಸಿ ಸಮಾಜಕ್ಕೆ ಒಳಿತು ಬಯಸುವುದು ಶ್ಲಾಘನೀಯ ಕಾರ್ಯ’ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.</p>.<p>ರಂಜಾನ್ ಮಾಸದ ಪ್ರಯುಕ್ತ ನಗರದ ದೊಡ್ಡ ಮಸೀದಿಯ ಮಸ್ಜಿದೇ ಅಲಾ ಸಭಾಂಗಣದಲ್ಲಿ ಭಾನುವಾರ ವಕ್ಫ್ ಮಂಡಳಿ ನೀಡಿದ ರಂಜಾನ್ ಕಿಟ್ ಹಸ್ತಾಂತರಿಸಿ ಹಾಗೂ ವೈಯಕ್ತಿಕ ನಗದು ನೀಡಿ ಅವರು ಮಾತನಾಡಿದರು.</p>.<p>‘ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ಇಂದಿಗೂ ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಕಷ್ಟ–ಸುಖಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದಾರೆ. ರಾಜ್ಯ ವಕ್ಫ್ ಮಂಡಳಿ ಈ ಸಾಲಿನಿಂದ ಧಾರ್ಮಿಕ ಗುರುಗಳಿಗೆ ಉಚಿತವಾಗಿ ರಂಜಾನ್ ಕಿಟ್ ವಿತರಿಸಿದೆ. ಇದಲ್ಲದೆ ಹಲವು ಉತ್ತಮ ಕೆಲಸವನ್ನು ಮಂಡಳಿ ಕಾರ್ಯರೂಪಕ್ಕೆ ತಂದು ಸಮಾಜದ ಅಭಿವೃದ್ಧಿಗೆ ಒತ್ತು ನೀಡಿದೆ’ ಎಂದರು.</p>.<p>ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರ ಮನವೊಲಿಸಿ ಶಬ್ಬೀರ್ ನಗರ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇನೆ. ಇದಲ್ಲದೆ ಬಿಳಿಕೆರೆ ಹೋಬಳಿ ಗೊಮ್ಮಟಗಿರಿ ಜೈನ್ ಸಮುದಾಯದ ಕ್ಷೇತ್ರದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿದ್ದು, ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜಕಾರಣದಲ್ಲಿ ಸೋಲು– ಗೆಲುವು ಸಾಮಾನ್ಯ, ಆದರೆ ಈ ಸಮುದಾಯದವರ ಪ್ರೀತಿ, ವಿಶ್ವಾಸ ಸದಾ ಇರಲಿ’ ಎಂದು ಮನವಿ ಮಾಡಿದರು.</p>.<p>ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಜೀಝುಲ್ಲಾ ಮಾತನಾಡಿ, ‘ವಕ್ಫ್ ಮಂಡಳಿಯಿಂದ ಮುಸ್ಲಿಂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಲಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು’ ಎಂದರು.</p>.<p>‘ಮಸೀದಿಗೆ ಸಂದಾಯವಾಗುವ ದೇಣಿಗೆ ಹಣವನ್ನು ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ ವಿಧವೆಯರಿಗೆ ಸ್ವಂತ ಉದ್ಯೋಗ ಕಲ್ಪಿಸುವ ದಿಕ್ಕಿನಲ್ಲಿ ಹಲವು ಸಾಮಾಜಿಕ ಕೆಲಸ ಹಮ್ಮಿಕೊಳ್ಳಲಾಗಿದೆ’ ಎಂದರು</p>.<p>ಕಾರ್ಯಕ್ರಮದಲ್ಲಿ ಅಯುಬ್ ಖಾನ್, ಮಜಾಜ್ ಅಹಮ್ಮದ್, ಫೈರೋಜ್, ಜಾವಿದ್ ಮುನ್ನಾ, ಮೊಹಮ್ಮದ್ ಸಲಾವುದ್ದಿನ್, ಫಜಲುಲ್ಲಾ ಎಚ್.ಎಂ., ಫೈಸಲ್ ಸೈಯದ್ ರಿಜ್ವಾನ್ ಮುಜೀವ್ ಅಹಮ್ಮದ್, ಫಾಝಿಲ್, ರಾಘು, ರವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ‘ಮುಸ್ಲೀಮರ ಧಾರ್ಮಿಕ ಶ್ರೇಷ್ಠತೆಯ ಹಬ್ಬ ರಂಜಾನ್ನಲ್ಲಿ ಪ್ರತಿಯೊಬ್ಬರೂ ಕಟ್ಟುನಿಟ್ಟಿನ ಉಪವಾಸ ಮಾಡಿ ದೇವರನ್ನು ಪ್ರಾರ್ಥಿಸಿ ಸಮಾಜಕ್ಕೆ ಒಳಿತು ಬಯಸುವುದು ಶ್ಲಾಘನೀಯ ಕಾರ್ಯ’ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.</p>.<p>ರಂಜಾನ್ ಮಾಸದ ಪ್ರಯುಕ್ತ ನಗರದ ದೊಡ್ಡ ಮಸೀದಿಯ ಮಸ್ಜಿದೇ ಅಲಾ ಸಭಾಂಗಣದಲ್ಲಿ ಭಾನುವಾರ ವಕ್ಫ್ ಮಂಡಳಿ ನೀಡಿದ ರಂಜಾನ್ ಕಿಟ್ ಹಸ್ತಾಂತರಿಸಿ ಹಾಗೂ ವೈಯಕ್ತಿಕ ನಗದು ನೀಡಿ ಅವರು ಮಾತನಾಡಿದರು.</p>.<p>‘ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರು ಇಂದಿಗೂ ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಕಷ್ಟ–ಸುಖಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿದ್ದಾರೆ. ರಾಜ್ಯ ವಕ್ಫ್ ಮಂಡಳಿ ಈ ಸಾಲಿನಿಂದ ಧಾರ್ಮಿಕ ಗುರುಗಳಿಗೆ ಉಚಿತವಾಗಿ ರಂಜಾನ್ ಕಿಟ್ ವಿತರಿಸಿದೆ. ಇದಲ್ಲದೆ ಹಲವು ಉತ್ತಮ ಕೆಲಸವನ್ನು ಮಂಡಳಿ ಕಾರ್ಯರೂಪಕ್ಕೆ ತಂದು ಸಮಾಜದ ಅಭಿವೃದ್ಧಿಗೆ ಒತ್ತು ನೀಡಿದೆ’ ಎಂದರು.</p>.<p>ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರ ಮನವೊಲಿಸಿ ಶಬ್ಬೀರ್ ನಗರ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇನೆ. ಇದಲ್ಲದೆ ಬಿಳಿಕೆರೆ ಹೋಬಳಿ ಗೊಮ್ಮಟಗಿರಿ ಜೈನ್ ಸಮುದಾಯದ ಕ್ಷೇತ್ರದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡಿದ್ದು, ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಜಕಾರಣದಲ್ಲಿ ಸೋಲು– ಗೆಲುವು ಸಾಮಾನ್ಯ, ಆದರೆ ಈ ಸಮುದಾಯದವರ ಪ್ರೀತಿ, ವಿಶ್ವಾಸ ಸದಾ ಇರಲಿ’ ಎಂದು ಮನವಿ ಮಾಡಿದರು.</p>.<p>ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅಜೀಝುಲ್ಲಾ ಮಾತನಾಡಿ, ‘ವಕ್ಫ್ ಮಂಡಳಿಯಿಂದ ಮುಸ್ಲಿಂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಲಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು’ ಎಂದರು.</p>.<p>‘ಮಸೀದಿಗೆ ಸಂದಾಯವಾಗುವ ದೇಣಿಗೆ ಹಣವನ್ನು ಸಮುದಾಯದ ಮಕ್ಕಳ ಶಿಕ್ಷಣ, ಆರೋಗ್ಯ ವಿಧವೆಯರಿಗೆ ಸ್ವಂತ ಉದ್ಯೋಗ ಕಲ್ಪಿಸುವ ದಿಕ್ಕಿನಲ್ಲಿ ಹಲವು ಸಾಮಾಜಿಕ ಕೆಲಸ ಹಮ್ಮಿಕೊಳ್ಳಲಾಗಿದೆ’ ಎಂದರು</p>.<p>ಕಾರ್ಯಕ್ರಮದಲ್ಲಿ ಅಯುಬ್ ಖಾನ್, ಮಜಾಜ್ ಅಹಮ್ಮದ್, ಫೈರೋಜ್, ಜಾವಿದ್ ಮುನ್ನಾ, ಮೊಹಮ್ಮದ್ ಸಲಾವುದ್ದಿನ್, ಫಜಲುಲ್ಲಾ ಎಚ್.ಎಂ., ಫೈಸಲ್ ಸೈಯದ್ ರಿಜ್ವಾನ್ ಮುಜೀವ್ ಅಹಮ್ಮದ್, ಫಾಝಿಲ್, ರಾಘು, ರವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>