<p><strong>ಹುಣಸೂರು: </strong>ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಹಾಗೂ ತೂಗು ಸೌರಬೇಲಿ ಅಳವಡಿಸಲಾಗುತ್ತಿದೆ.</p>.<p>848 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನಲ್ಲಿ 150 ಗ್ರಾಮಗಳಿವೆ. ನಿತ್ಯ ವನ್ಯಜೀವಿಗಳ ಉಪಟಳ, ಬೆಳೆ ನಾಶ ಹಾಗೂ ಜೀವಹಾನಿಯಿಂದ ನಲುಗಿದ್ದು, ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.</p>.<p class="Subhead"><strong>ರೈಲ್ವೆ ಹಳಿ ತಡೆಗೋಡೆ: </strong>’ವನ್ಯಜೀವಿಗಳು ಗ್ರಾಮಗಳಿಗೆ ಬರದಂತೆ ತಡೆಯಲು ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು 2015–16ರಲ್ಲಿ ಯೋಜನೆ ರೂಪಿಸಲಾಗಿತ್ತು. ಅರಣ್ಯದಂಚಿನ 152 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಕಿ.ಮೀ.ಗೆ ₹1.20 ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈವರೆಗೆ 54 ಕಿ.ಮೀ ರೈಲ್ವೆ ಹಳಿ ತಡೆಗೋಡೆ ನಿರ್ಮಾಣಗೊಂಡಿದ್ದು, 3 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 7 ಕಿ.ಮೀ ತಡೆಗೋಡೆ ಕಾಮಗಾರಿ ಟೆಂಡರ್ ಹಂತದಲ್ಲಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ತೂಗು ಸೌರಬೇಲಿ:</strong> ‘ಕೆಲ ಪುಂಡಾನೆಗಳು, ಪ್ರಾಣಿಗಳು ರೈಲ್ವೆ ಹಳಿ ತಡೆಗೋಡೆಗಳನ್ನೂ ದಾಟಿ ಬರುತ್ತಿದ್ದವು. ಅದಕ್ಕೆ ಕಡಿವಾಣ ಹಾಕಲು ಈ ತಡೆಗೋಡೆಗಳ ನಡುವೆ ಸೌರಬೇಲಿಗಳನ್ನು ಅಳವಡಿಸಲಾಗಿದೆ. ಜೊತೆಗೆ, ‘ಡಬಲ್ ಟೆಂಟಿಕಲ್ ಸೋಲಾರ್ ಲೈನ್’ (ತೂಗು ಸೌರಬೇಲಿ) ನಿರ್ಮಾಣವೂ ನಡೆದಿದೆ. ಈವರೆಗೆ 24 ಕಿ.ಮೀ ತೂಗು ಸೌರಬೇಲಿ ಹಾಕಲಾಗಿದೆ. 22 ಕಿ.ಮೀ ತೂಗು ಸೌರಬೇಲಿ ಅಳವಡಿಸಲು ಟೆಂಡರ್ ಕರೆಯಬೇಕಿದೆ’ ಎಂದರು.</p>.<p class="Subhead">ಪರಿಹಾರ: ಕಾಡಾನೆ ಹಾವಳಿಗೆ 2020–21ನೇ ಸಾಲಿನಲ್ಲಿ 1,011 ರೈತರು ಫಸಲು ಕಳೆದುಕೊಂಡಿದ್ದರು. ಪ್ರಸಕ್ತ ಸಾಲಿನಲ್ಲಿ 594 ಪ್ರಕರಣಗಳು ದಾಖಲಾಗಿವೆ. ಕಾಡುಪ್ರಾಣಿಗಳ ದಾಳಿಗೆ 57 ಸಾಕುಪ್ರಾಣಿಗಳು ಮೃತಪಟ್ಟಿವೆ. ಮಾನವ– ಪ್ರಾಣಿ ಸಂಘರ್ಷದ 10 ಪ್ರಕರಣಗಳಲ್ಲಿ 6 ಮಂದಿ ಜೀವ ಕಳೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. 31 ಪ್ರಕರಣಗಳಲ್ಲಿ ಆಸ್ತಿ ನಷ್ಟವಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯು ಪರಿಹಾರದ ರೂಪದಲ್ಲಿ ಒಟ್ಟು ₹71.54 ಲಕ್ಷ ಪಾವತಿಸಿದೆ.</p>.<p>***</p>.<p>ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಅಳವಡಿಕೆ ಒಳ್ಳೆಯ ಪ್ರಯತ್ನ. ಆದರೆ ಈ ಹಿಂದೆ ಅಳವಡಿಸಿದ್ದ ಸೌರಬೇಲಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.</p>.<p><strong>–ಹೊಸೂರು ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು: </strong>ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಹಾಗೂ ತೂಗು ಸೌರಬೇಲಿ ಅಳವಡಿಸಲಾಗುತ್ತಿದೆ.</p>.<p>848 ಚದರ ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡಂಚಿನಲ್ಲಿ 150 ಗ್ರಾಮಗಳಿವೆ. ನಿತ್ಯ ವನ್ಯಜೀವಿಗಳ ಉಪಟಳ, ಬೆಳೆ ನಾಶ ಹಾಗೂ ಜೀವಹಾನಿಯಿಂದ ನಲುಗಿದ್ದು, ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.</p>.<p class="Subhead"><strong>ರೈಲ್ವೆ ಹಳಿ ತಡೆಗೋಡೆ: </strong>’ವನ್ಯಜೀವಿಗಳು ಗ್ರಾಮಗಳಿಗೆ ಬರದಂತೆ ತಡೆಯಲು ರೈಲ್ವೆ ಹಳಿ ತಡೆಗೋಡೆ ನಿರ್ಮಿಸಲು 2015–16ರಲ್ಲಿ ಯೋಜನೆ ರೂಪಿಸಲಾಗಿತ್ತು. ಅರಣ್ಯದಂಚಿನ 152 ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ಕಿ.ಮೀ.ಗೆ ₹1.20 ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈವರೆಗೆ 54 ಕಿ.ಮೀ ರೈಲ್ವೆ ಹಳಿ ತಡೆಗೋಡೆ ನಿರ್ಮಾಣಗೊಂಡಿದ್ದು, 3 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. 7 ಕಿ.ಮೀ ತಡೆಗೋಡೆ ಕಾಮಗಾರಿ ಟೆಂಡರ್ ಹಂತದಲ್ಲಿದೆ’ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead"><strong>ತೂಗು ಸೌರಬೇಲಿ:</strong> ‘ಕೆಲ ಪುಂಡಾನೆಗಳು, ಪ್ರಾಣಿಗಳು ರೈಲ್ವೆ ಹಳಿ ತಡೆಗೋಡೆಗಳನ್ನೂ ದಾಟಿ ಬರುತ್ತಿದ್ದವು. ಅದಕ್ಕೆ ಕಡಿವಾಣ ಹಾಕಲು ಈ ತಡೆಗೋಡೆಗಳ ನಡುವೆ ಸೌರಬೇಲಿಗಳನ್ನು ಅಳವಡಿಸಲಾಗಿದೆ. ಜೊತೆಗೆ, ‘ಡಬಲ್ ಟೆಂಟಿಕಲ್ ಸೋಲಾರ್ ಲೈನ್’ (ತೂಗು ಸೌರಬೇಲಿ) ನಿರ್ಮಾಣವೂ ನಡೆದಿದೆ. ಈವರೆಗೆ 24 ಕಿ.ಮೀ ತೂಗು ಸೌರಬೇಲಿ ಹಾಕಲಾಗಿದೆ. 22 ಕಿ.ಮೀ ತೂಗು ಸೌರಬೇಲಿ ಅಳವಡಿಸಲು ಟೆಂಡರ್ ಕರೆಯಬೇಕಿದೆ’ ಎಂದರು.</p>.<p class="Subhead">ಪರಿಹಾರ: ಕಾಡಾನೆ ಹಾವಳಿಗೆ 2020–21ನೇ ಸಾಲಿನಲ್ಲಿ 1,011 ರೈತರು ಫಸಲು ಕಳೆದುಕೊಂಡಿದ್ದರು. ಪ್ರಸಕ್ತ ಸಾಲಿನಲ್ಲಿ 594 ಪ್ರಕರಣಗಳು ದಾಖಲಾಗಿವೆ. ಕಾಡುಪ್ರಾಣಿಗಳ ದಾಳಿಗೆ 57 ಸಾಕುಪ್ರಾಣಿಗಳು ಮೃತಪಟ್ಟಿವೆ. ಮಾನವ– ಪ್ರಾಣಿ ಸಂಘರ್ಷದ 10 ಪ್ರಕರಣಗಳಲ್ಲಿ 6 ಮಂದಿ ಜೀವ ಕಳೆದುಕೊಂಡಿದ್ದು, ನಾಲ್ವರು ಗಾಯಗೊಂಡಿದ್ದಾರೆ. 31 ಪ್ರಕರಣಗಳಲ್ಲಿ ಆಸ್ತಿ ನಷ್ಟವಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಅರಣ್ಯ ಇಲಾಖೆಯು ಪರಿಹಾರದ ರೂಪದಲ್ಲಿ ಒಟ್ಟು ₹71.54 ಲಕ್ಷ ಪಾವತಿಸಿದೆ.</p>.<p>***</p>.<p>ರೈಲ್ವೆ ಹಳಿ ತಡೆಗೋಡೆ ಜೊತೆಗೆ ಸೌರಬೇಲಿ ಅಳವಡಿಕೆ ಒಳ್ಳೆಯ ಪ್ರಯತ್ನ. ಆದರೆ ಈ ಹಿಂದೆ ಅಳವಡಿಸಿದ್ದ ಸೌರಬೇಲಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.</p>.<p><strong>–ಹೊಸೂರು ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>