<p>ಮಾನಸಿಕ ಅಸ್ವಸ್ಥತೆ, ನರದೌರ್ಬಲ್ಯ ಎರಡೂ ಇರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕಷ್ಟ. ಇಂತಹ ಮಕ್ಕಳು ಶೌಚ, ದೈಹಿಕ ಸ್ವಚ್ಛತೆ, ಆಹಾರ ಸೇವನೆ ಮುಂತಾದ ನಿತ್ಯದ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುವಷ್ಟು ಸದೃಢರಾದರೆ ಪೋಷಕರ ಹೊರೆ ಎಷ್ಟೋ ಕಡಿಮೆಯಾಗುತ್ತದೆ.</p>.<p>ಬಹುವಿಧ ನ್ಯೂನತೆ (ಆಟಿಸಂ), ನಿಧಾನ ಕಲಿಕೆ ಸಮಸ್ಯೆಗೆ ತಾಳ್ಮೆ, ಸಂಯಮಕ್ಕಿಂತ ದೊಡ್ಡ ಔಷಧಿ ಇಲ್ಲ. ಈ ಮಕ್ಕಳ ನಿರ್ವಹಣೆ ಪೋಷಕರು, ಶಿಕ್ಷಕರ ಪಾಲಿಗೆ ಸವಾಲೇ ಸರಿ. ಆದರೆ, ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೆಲವು ಚಟುವಟಿಕೆಗಳನ್ನು ಮಾಡಿಸುವ ಮೂಲಕ ನರದೌರ್ಬಲ್ಯವನ್ನು ಮೀರಿಯೂ ಅವರಲ್ಲಿ ಶಕ್ತಿ ತುಂಬಲು ಸಾಧ್ಯ. ನಿಧಾನ ಕಲಿಕೆಯ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವುದು ಸಾಧ್ಯ ಎಂಬುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ. </p>.<p>ಬೆಂಗಳೂರಿನ ಲಿಂಗರಾಜಪುರದಲ್ಲಿರುವ ಡಾ. ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ ಮಾತು ಬಾರದ, ಕಿವಿ ಕೇಳಿಸದ ಮಕ್ಕಳಿಗೆ ಚಿಕಿತ್ಸೆ, ವಿಶೇಷ ಶಿಕ್ಷಣ ನೀಡುವುದರಲ್ಲಿ ಹೆಸರುವಾಸಿ. ಆದರೆ, ಇಲ್ಲಿನ ಮನಶಾಸ್ತ್ರ ವಿಭಾಗ ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ವಿಶೇಷ ಶಾಲೆಯನ್ನೂ ನಡೆಸುತ್ತಿದೆ. 5ರಿಂದ 20 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ವಿಶೇಷ ಶಿಕ್ಷಣ ನೀಡಲಾಗುತ್ತಿದೆ. ಮನಶಾಸ್ತ್ರ ಪದವೀಧರರು ಈ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. </p>.<p>2009ರಲ್ಲಿ ‘ಎಎಸ್ಡಿ’ (ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್) ವಿಭಾಗ ತೆರೆಯಲಾಗಿದೆ. ಆಗ 11 ಬಾಲಕರಿದ್ದರು. ಮಕ್ಕಳ ವಯಸ್ಸು ಮತ್ತು ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ 1–2 ಎಂದು ವಿಭಾಗ ಮಾಡಲಾಗಿದೆ. ಅವರಿಗೆ ಮೊದಲು ಜೀವನ ಕೌಶಲ ಕಲಿಸಲಾಗುತ್ತಿದೆ. ನಂತರ ಓದು ಬರಹ ಕಲಿಸಲಾಗುತ್ತದೆ. </p>.<p>2007ರಲ್ಲಿಯೇ ರಾಷ್ಟ್ರೀಯ ಮುಕ್ತ ಶಾಲೆ ತೆರೆಯಲಾಗಿದೆ. ಮುಖ್ಯವಾಗಿ ಕಲಿಕಾ ಸಾಮರ್ಥ್ಯ ಕಡಿಮೆ ಇದ್ದ ಕಾರಣದಿಂದ ಅರ್ಧದಲ್ಲಿಯೇ ಶಾಲೆ ಬಿಟ್ಟ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಬಡ ಮಕ್ಕಳು. ಪೋಷಕರು ಕೂಲಿ ಕಾರ್ಮಿಕರು. ಇಂಥಾ ಮಕ್ಕಳ ಸ್ವಭಾವದಲ್ಲಿ ಸಮಸ್ಯೆ ಇರುತ್ತದೆ. ಹಾಗೆಯೇ ಬಿಟ್ಟರೆ ಕಳ್ಳತನ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಈ ಮಕ್ಕಳ ಸ್ವಭಾವವನ್ನು ತಿದ್ದುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಹದಿಹರೆಯದ ಮಕ್ಕಳನ್ನು ಸಂಭಾಳಿಸುವುದು ಬಹಳ ಕಷ್ಟ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.</p>.<p>ವಯಸ್ಸಿಗೆ ಅನುಗುಣವಾಗಿ12ರಿಂದ 14 ಮತ್ತು 15 ರಿಂದ 17 ಎರಡು ವಿಭಾಗಗಳಿವೆ. ಎರಡೂ ವಿಭಾಗಕ್ಕೂ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಮಕ್ಕಳನ್ನು ಕರೆತಂದು ಬಿಡುವುದು, ವಾಪಾಸ್ ಕರೆದೊಯ್ಯುವ ಜವಾಬ್ದಾರಿ ಮಾತ್ರ ಪೋಷಕರದು. </p>.<p>‘ಹತ್ತನೇ ತರಗತಿ ಪೂರೈಸುವ ವಯಸ್ಸಿನಲ್ಲಿ ಮೂರು– ನಾಲ್ಕನೇ ತರಗತಿಯ ವಿಷಯಗಳನ್ನು ಕಲಿಸಬೇಕಾಗಿದೆ. ಈ ಮಕ್ಕಳಿಗೆ ಕಲಿತದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಕಲಿತದ್ದು ಮರೆಯುತ್ತಾರೆ. ವೇಗವಾಗಿ ಬರೆಯುವ, ಓದುವ ಸಾಮರ್ಥ್ಯವೂ ಇರುವುದಿಲ್ಲ. ಸ್ವತಂತ್ರವಾಗಿ ಜೀವನ ನಡೆಸುವುದು ಸಾಧ್ಯವಿಲ್ಲದಿದ್ದರೂ ಪೋಷಕರಿಗೆ ಒಂದು ಬಗೆಯ ನಿರಾಳ, ಮಕ್ಕಳು ಏನೋ ಕಲಿಯುತ್ತಿದ್ದಾರೆ ಎಂಬ ಸಮಾಧಾನವಿರುತ್ತದೆ’ ಎಂದು ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಲ್ಫೋನ್ಸಾ ಜೋಸೆಫ್ ಹೇಳುತ್ತಾರೆ.</p>.<p>‘ಇಲ್ಲಿ ಸೇರಿಕೊಳ್ಳುವ ಮಕ್ಕಳಲ್ಲಿ ಅನೇಕರಿಗೆ ಮೂತ್ರ ಬಂದಾಗ ಹೇಳಬೇಕು ಅಥವಾ ಶೌಚಾಲಯಕ್ಕೆ ಹೋಗಬೇಕು ಎಂಬಷ್ಟು ಜ್ಞಾನವೂ ಇರುವುದಿಲ್ಲ. ಸ್ವತಂತ್ರವಾಗಿ ಹೋಗುವ ಸಾಮರ್ಥ್ಯವೂ ಇರುವುದಿಲ್ಲ. ಅವುಗಳನ್ನು ಇಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ನಡತೆಯಲ್ಲಿ ಸಮತೋಲನ ಇರುವುದಿಲ್ಲ. ವಿಪರೀತ ಸಿಟ್ಟು ಬಂದಾಗ ಹೆಚ್ಚಿನ ಮಕ್ಕಳು ತಲೆಗೂದಲು ಕಿತ್ತುಕೊಳ್ಳುತ್ತಾರೆ. ಅಂತಹ ಅಸಹಜ ಅಭ್ಯಾಸಗಳನ್ನೆಲ್ಲ ಬದಲಿಸಬೇಕಾಗುತ್ತದೆ. ಊಟ ಮಾಡುವುದು, ದೈಹಿಕ ಶುಚಿತ್ವ ಮುಂತಾದ ಜೀವನ ಕೌಶಲಗಳನ್ನು ಕಲಿಸಬೇಕಾಗುತ್ತದೆ. ನಂತರ ಕಲಿಕೆಯ ಕಡೆಗೆ ಅವರನ್ನು ತಯಾರು ಮಾಡುತ್ತೇವೆ’ ಎಂದು ವಿವರಿಸುತ್ತಾರೆ ಅಲ್ಫೋನ್ಸಾ ಜೋಸೆಫ್. 2010ರಿಂದ 2018ರ ಅವಧಿಯಲ್ಲಿ ಸುಮಾರು 250 ಕಲಿಕಾ ನ್ಯೂನತೆ ಇರುವ ಮಕ್ಕಳು ಇಲ್ಲಿ ಸೇರ್ಪಡೆಗೊಂಡಿದ್ದಾರೆ.</p>.<p><strong>ಹರೆಯದ ಮಕ್ಕಳನ್ನು ನಿಭಾಯಿಸುವುದು ಕಷ್ಟ</strong><br /> ಮಾನಸಿಕ ಸಮಸ್ಯೆಗಳಿದ್ದರೂ ಆಟಿಸಂ ಮಕ್ಕಳಿಗೆ ದೈಹಿಕ ಬೆಳವಣಿಗೆಗಳು ಸರಿಯಾಗಿಯೇ ಇರುತ್ತವೆ. ಸಾಮಾನ್ಯ ಮಕ್ಕಳಂತೆ ಹದಿಹರೆಯದ ಬಯಕೆಗಳು ಇವರಲ್ಲೂ ಕಂಡು ಬರುತ್ತವೆ. ಆದರೆ, ಯಾವುದನ್ನು ಎಲ್ಲಿ ಅಭಿವ್ಯಕ್ತಪಡಿಸಬೇಕು ಎಂಬ ಜ್ಞಾನ ಇರುವುದಿಲ್ಲ. ಕೆಲವು ಹುಡುಗರು ತರಗತಿಯಲ್ಲಿಯೇ ಹಸ್ತ ಮೈಥುನ ಮಾಡಿಕೊಳ್ಳುತ್ತಿರುತ್ತಾರೆ. ಇವರಿಗೆ ಸಾಮಾಜಿಕ ನಡವಳಿಕೆಗಳನ್ನು ಕಲಿಸಬೇಕಾಗುತ್ತದೆ. ಕೆಲವೊಮ್ಮೆ ಶೌಚಾಲಯಗಳಿಗೆ ಹೋದವರು ಹೊರಗೆ ಬರು</p>.<p>ವುದೇ ಇಲ್ಲ. ಜಗಳ ಮಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಳ್ಳುವುದೂ ಇದೆ. ಒಂದು ಕ್ಷಣವೂ ಅವರನ್ನು ಅವರಷ್ಟಕ್ಕೆ ಬಿಡುವಂತಿಲ್ಲ. ಸೇವಾ ಮನೋಭಾವ, ಅಗಾಧ ಸಹನೆ ಇರುವವರಿಗೆ ಮಾತ್ರ ಈ ಮಕ್ಕಳ ಮನಸ್ಸನ್ನು ಗೆಲ್ಲುವುದು ಸಾಧ್ಯ.</p>.<p><em><strong> ಅಲ್ಫೋನ್ಸಾಜೋಸೆಫ್, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ</strong></em></p>.<p>**</p>.<p>ಅಂಗವಿಕಲ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಜೀವನ ಕೌಶಲಗಳನ್ನು ಕಲಿಸುವ ಸಲುವಾಗಿ ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ.<br /> <em><strong>–ಡಾ. ಎಂ.ಎಸ್. ವೆಂಕಟೇಶ್, ಅಧ್ಯಕ್ಷರು ಬೆಂಗಳೂರು ವಾಕ್ ಮತ್ತು ಶ್ರವಣ ಟ್ರಸ್ಟ್</strong></em></p>.<p><strong>ವಿಳಾಸ: ಡಾ.ಎಸ್.ಆರ್. ಚಂದ್ರಶೇಖರ ವಾಕ್ ಶ್ರವಣ ಸಂಸ್ಥೆ, ಹೆಣ್ಣೂರು ರಸ್ತೆ, ಲಿಂಗರಾಜಪುರ.</strong></p>.<p><strong>ದೂರವಾಣಿ: 080–2547 0037, 2546 8470</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾನಸಿಕ ಅಸ್ವಸ್ಥತೆ, ನರದೌರ್ಬಲ್ಯ ಎರಡೂ ಇರುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕಷ್ಟ. ಇಂತಹ ಮಕ್ಕಳು ಶೌಚ, ದೈಹಿಕ ಸ್ವಚ್ಛತೆ, ಆಹಾರ ಸೇವನೆ ಮುಂತಾದ ನಿತ್ಯದ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುವಷ್ಟು ಸದೃಢರಾದರೆ ಪೋಷಕರ ಹೊರೆ ಎಷ್ಟೋ ಕಡಿಮೆಯಾಗುತ್ತದೆ.</p>.<p>ಬಹುವಿಧ ನ್ಯೂನತೆ (ಆಟಿಸಂ), ನಿಧಾನ ಕಲಿಕೆ ಸಮಸ್ಯೆಗೆ ತಾಳ್ಮೆ, ಸಂಯಮಕ್ಕಿಂತ ದೊಡ್ಡ ಔಷಧಿ ಇಲ್ಲ. ಈ ಮಕ್ಕಳ ನಿರ್ವಹಣೆ ಪೋಷಕರು, ಶಿಕ್ಷಕರ ಪಾಲಿಗೆ ಸವಾಲೇ ಸರಿ. ಆದರೆ, ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೆಲವು ಚಟುವಟಿಕೆಗಳನ್ನು ಮಾಡಿಸುವ ಮೂಲಕ ನರದೌರ್ಬಲ್ಯವನ್ನು ಮೀರಿಯೂ ಅವರಲ್ಲಿ ಶಕ್ತಿ ತುಂಬಲು ಸಾಧ್ಯ. ನಿಧಾನ ಕಲಿಕೆಯ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವುದು ಸಾಧ್ಯ ಎಂಬುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ. </p>.<p>ಬೆಂಗಳೂರಿನ ಲಿಂಗರಾಜಪುರದಲ್ಲಿರುವ ಡಾ. ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ ಮಾತು ಬಾರದ, ಕಿವಿ ಕೇಳಿಸದ ಮಕ್ಕಳಿಗೆ ಚಿಕಿತ್ಸೆ, ವಿಶೇಷ ಶಿಕ್ಷಣ ನೀಡುವುದರಲ್ಲಿ ಹೆಸರುವಾಸಿ. ಆದರೆ, ಇಲ್ಲಿನ ಮನಶಾಸ್ತ್ರ ವಿಭಾಗ ಆಟಿಸಂ ಸಮಸ್ಯೆ ಇರುವ ಮಕ್ಕಳಿಗೆ ವಿಶೇಷ ಶಾಲೆಯನ್ನೂ ನಡೆಸುತ್ತಿದೆ. 5ರಿಂದ 20 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ವಿಶೇಷ ಶಿಕ್ಷಣ ನೀಡಲಾಗುತ್ತಿದೆ. ಮನಶಾಸ್ತ್ರ ಪದವೀಧರರು ಈ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. </p>.<p>2009ರಲ್ಲಿ ‘ಎಎಸ್ಡಿ’ (ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್) ವಿಭಾಗ ತೆರೆಯಲಾಗಿದೆ. ಆಗ 11 ಬಾಲಕರಿದ್ದರು. ಮಕ್ಕಳ ವಯಸ್ಸು ಮತ್ತು ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ 1–2 ಎಂದು ವಿಭಾಗ ಮಾಡಲಾಗಿದೆ. ಅವರಿಗೆ ಮೊದಲು ಜೀವನ ಕೌಶಲ ಕಲಿಸಲಾಗುತ್ತಿದೆ. ನಂತರ ಓದು ಬರಹ ಕಲಿಸಲಾಗುತ್ತದೆ. </p>.<p>2007ರಲ್ಲಿಯೇ ರಾಷ್ಟ್ರೀಯ ಮುಕ್ತ ಶಾಲೆ ತೆರೆಯಲಾಗಿದೆ. ಮುಖ್ಯವಾಗಿ ಕಲಿಕಾ ಸಾಮರ್ಥ್ಯ ಕಡಿಮೆ ಇದ್ದ ಕಾರಣದಿಂದ ಅರ್ಧದಲ್ಲಿಯೇ ಶಾಲೆ ಬಿಟ್ಟ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಬಡ ಮಕ್ಕಳು. ಪೋಷಕರು ಕೂಲಿ ಕಾರ್ಮಿಕರು. ಇಂಥಾ ಮಕ್ಕಳ ಸ್ವಭಾವದಲ್ಲಿ ಸಮಸ್ಯೆ ಇರುತ್ತದೆ. ಹಾಗೆಯೇ ಬಿಟ್ಟರೆ ಕಳ್ಳತನ, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಇರುತ್ತದೆ. ಈ ಮಕ್ಕಳ ಸ್ವಭಾವವನ್ನು ತಿದ್ದುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಹದಿಹರೆಯದ ಮಕ್ಕಳನ್ನು ಸಂಭಾಳಿಸುವುದು ಬಹಳ ಕಷ್ಟ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.</p>.<p>ವಯಸ್ಸಿಗೆ ಅನುಗುಣವಾಗಿ12ರಿಂದ 14 ಮತ್ತು 15 ರಿಂದ 17 ಎರಡು ವಿಭಾಗಗಳಿವೆ. ಎರಡೂ ವಿಭಾಗಕ್ಕೂ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಮಕ್ಕಳನ್ನು ಕರೆತಂದು ಬಿಡುವುದು, ವಾಪಾಸ್ ಕರೆದೊಯ್ಯುವ ಜವಾಬ್ದಾರಿ ಮಾತ್ರ ಪೋಷಕರದು. </p>.<p>‘ಹತ್ತನೇ ತರಗತಿ ಪೂರೈಸುವ ವಯಸ್ಸಿನಲ್ಲಿ ಮೂರು– ನಾಲ್ಕನೇ ತರಗತಿಯ ವಿಷಯಗಳನ್ನು ಕಲಿಸಬೇಕಾಗಿದೆ. ಈ ಮಕ್ಕಳಿಗೆ ಕಲಿತದ್ದನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಕಲಿತದ್ದು ಮರೆಯುತ್ತಾರೆ. ವೇಗವಾಗಿ ಬರೆಯುವ, ಓದುವ ಸಾಮರ್ಥ್ಯವೂ ಇರುವುದಿಲ್ಲ. ಸ್ವತಂತ್ರವಾಗಿ ಜೀವನ ನಡೆಸುವುದು ಸಾಧ್ಯವಿಲ್ಲದಿದ್ದರೂ ಪೋಷಕರಿಗೆ ಒಂದು ಬಗೆಯ ನಿರಾಳ, ಮಕ್ಕಳು ಏನೋ ಕಲಿಯುತ್ತಿದ್ದಾರೆ ಎಂಬ ಸಮಾಧಾನವಿರುತ್ತದೆ’ ಎಂದು ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಲ್ಫೋನ್ಸಾ ಜೋಸೆಫ್ ಹೇಳುತ್ತಾರೆ.</p>.<p>‘ಇಲ್ಲಿ ಸೇರಿಕೊಳ್ಳುವ ಮಕ್ಕಳಲ್ಲಿ ಅನೇಕರಿಗೆ ಮೂತ್ರ ಬಂದಾಗ ಹೇಳಬೇಕು ಅಥವಾ ಶೌಚಾಲಯಕ್ಕೆ ಹೋಗಬೇಕು ಎಂಬಷ್ಟು ಜ್ಞಾನವೂ ಇರುವುದಿಲ್ಲ. ಸ್ವತಂತ್ರವಾಗಿ ಹೋಗುವ ಸಾಮರ್ಥ್ಯವೂ ಇರುವುದಿಲ್ಲ. ಅವುಗಳನ್ನು ಇಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ನಡತೆಯಲ್ಲಿ ಸಮತೋಲನ ಇರುವುದಿಲ್ಲ. ವಿಪರೀತ ಸಿಟ್ಟು ಬಂದಾಗ ಹೆಚ್ಚಿನ ಮಕ್ಕಳು ತಲೆಗೂದಲು ಕಿತ್ತುಕೊಳ್ಳುತ್ತಾರೆ. ಅಂತಹ ಅಸಹಜ ಅಭ್ಯಾಸಗಳನ್ನೆಲ್ಲ ಬದಲಿಸಬೇಕಾಗುತ್ತದೆ. ಊಟ ಮಾಡುವುದು, ದೈಹಿಕ ಶುಚಿತ್ವ ಮುಂತಾದ ಜೀವನ ಕೌಶಲಗಳನ್ನು ಕಲಿಸಬೇಕಾಗುತ್ತದೆ. ನಂತರ ಕಲಿಕೆಯ ಕಡೆಗೆ ಅವರನ್ನು ತಯಾರು ಮಾಡುತ್ತೇವೆ’ ಎಂದು ವಿವರಿಸುತ್ತಾರೆ ಅಲ್ಫೋನ್ಸಾ ಜೋಸೆಫ್. 2010ರಿಂದ 2018ರ ಅವಧಿಯಲ್ಲಿ ಸುಮಾರು 250 ಕಲಿಕಾ ನ್ಯೂನತೆ ಇರುವ ಮಕ್ಕಳು ಇಲ್ಲಿ ಸೇರ್ಪಡೆಗೊಂಡಿದ್ದಾರೆ.</p>.<p><strong>ಹರೆಯದ ಮಕ್ಕಳನ್ನು ನಿಭಾಯಿಸುವುದು ಕಷ್ಟ</strong><br /> ಮಾನಸಿಕ ಸಮಸ್ಯೆಗಳಿದ್ದರೂ ಆಟಿಸಂ ಮಕ್ಕಳಿಗೆ ದೈಹಿಕ ಬೆಳವಣಿಗೆಗಳು ಸರಿಯಾಗಿಯೇ ಇರುತ್ತವೆ. ಸಾಮಾನ್ಯ ಮಕ್ಕಳಂತೆ ಹದಿಹರೆಯದ ಬಯಕೆಗಳು ಇವರಲ್ಲೂ ಕಂಡು ಬರುತ್ತವೆ. ಆದರೆ, ಯಾವುದನ್ನು ಎಲ್ಲಿ ಅಭಿವ್ಯಕ್ತಪಡಿಸಬೇಕು ಎಂಬ ಜ್ಞಾನ ಇರುವುದಿಲ್ಲ. ಕೆಲವು ಹುಡುಗರು ತರಗತಿಯಲ್ಲಿಯೇ ಹಸ್ತ ಮೈಥುನ ಮಾಡಿಕೊಳ್ಳುತ್ತಿರುತ್ತಾರೆ. ಇವರಿಗೆ ಸಾಮಾಜಿಕ ನಡವಳಿಕೆಗಳನ್ನು ಕಲಿಸಬೇಕಾಗುತ್ತದೆ. ಕೆಲವೊಮ್ಮೆ ಶೌಚಾಲಯಗಳಿಗೆ ಹೋದವರು ಹೊರಗೆ ಬರು</p>.<p>ವುದೇ ಇಲ್ಲ. ಜಗಳ ಮಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಳ್ಳುವುದೂ ಇದೆ. ಒಂದು ಕ್ಷಣವೂ ಅವರನ್ನು ಅವರಷ್ಟಕ್ಕೆ ಬಿಡುವಂತಿಲ್ಲ. ಸೇವಾ ಮನೋಭಾವ, ಅಗಾಧ ಸಹನೆ ಇರುವವರಿಗೆ ಮಾತ್ರ ಈ ಮಕ್ಕಳ ಮನಸ್ಸನ್ನು ಗೆಲ್ಲುವುದು ಸಾಧ್ಯ.</p>.<p><em><strong> ಅಲ್ಫೋನ್ಸಾಜೋಸೆಫ್, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ</strong></em></p>.<p>**</p>.<p>ಅಂಗವಿಕಲ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಜೀವನ ಕೌಶಲಗಳನ್ನು ಕಲಿಸುವ ಸಲುವಾಗಿ ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ.<br /> <em><strong>–ಡಾ. ಎಂ.ಎಸ್. ವೆಂಕಟೇಶ್, ಅಧ್ಯಕ್ಷರು ಬೆಂಗಳೂರು ವಾಕ್ ಮತ್ತು ಶ್ರವಣ ಟ್ರಸ್ಟ್</strong></em></p>.<p><strong>ವಿಳಾಸ: ಡಾ.ಎಸ್.ಆರ್. ಚಂದ್ರಶೇಖರ ವಾಕ್ ಶ್ರವಣ ಸಂಸ್ಥೆ, ಹೆಣ್ಣೂರು ರಸ್ತೆ, ಲಿಂಗರಾಜಪುರ.</strong></p>.<p><strong>ದೂರವಾಣಿ: 080–2547 0037, 2546 8470</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>