<p><strong>ರಾಯಚೂರು</strong>: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತೆ ಮಳೆ ಸುರಿದಿದ್ದು, ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಪಕದಲ್ಲಿ ಸರಾಸರಿ 16 ಮಿಲಿಮೀಟರ್ ದಾಖಲಾಗಿದೆ.</p>.<p>ರಾಯಚೂರು ನಗರದ ವಾರ್ಡ್ ಸಂಖ್ಯೆ 30 ಹಾಗೂ 31 ರ ವ್ಯಾಪ್ತಿಯ ಸಿಯಾತಾಲಾಬ್, ಜಲಾಲನಗರ, ಮಹಾದೇವ ನಗರದ ಮನೆಗಳಿಗೆ ನೀರು ನುಗ್ಗಿದೆ. ಜನರೆಲ್ಲ ಜಾಗರಣೆ ಮಾಡಿದ್ದಾರೆ. ಲಿಂಗಸುಗೂರು ತಾಲ್ಲೂಕು ಹಟ್ಟಿ ಸಮೀಪ ಗುಡಗುಂಟಾದಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ.</p>.<p>ಹಟ್ಟಿ ಸಮೀಪದ ಗುಡದನಾಳ, ಯಲಗಟ್ಟಾ, ಮಾಚನೂರು, ಪೈದೊಡ್ಡಿ, ಗೋಲಪಲ್ಲಿ ಸೇರಿ 15 ಕ್ಕೂ ಅಧಿಕ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಸೇತುವೆಗಳು ಜಲಾವೃತವಾಗಿದ್ದು ಸಂಚಾರ ಪೂರ್ಣ ಬಂದ್ ಆಗಿದೆ.</p>.<p>ಅತಿಹೆಚ್ಚು 33 ಮಿಲಿಮೀಟರ್ ಮಳೆ ಲಿಂಗಸುಗೂರು ತಾಲ್ಲೂಕಿನಲ್ಲಿ ಸುರಿದಿದೆ. ರಾಯಚೂರು ತಾಲ್ಲೂಕಿನಲ್ಲಿ 19 ಮಿಲಿಮೀಟರ್, ಸಿಂಧನೂರು ಮತ್ತು ಸಿರವಾರ ತಾಲ್ಲೂಕುಗಳಲ್ಲಿ 10 ಮಿಲಿಮೀಟರ್, ಮಸ್ಕಿಯಲ್ಲಿ 13, ಮಾನ್ವಿಯಲ್ಲಿ 6 ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ 15 ಮಿಲಿಮೀಟರ್ ಮಳೆಯಾಗಿದೆ.</p>.<p>ಜಿಲ್ಲೆಯಲ್ಲಿ ದಟ್ಟವಾದ ಮೋಡಕವಿದ ವಾತಾವರಣ ಮುಂದುವರಿದಿದ್ದು, ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸುತ್ತಮುತ್ತ ಸೋಮವಾರ ಬಿರುಸಾಗಿ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತೆ ಮಳೆ ಸುರಿದಿದ್ದು, ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಪಕದಲ್ಲಿ ಸರಾಸರಿ 16 ಮಿಲಿಮೀಟರ್ ದಾಖಲಾಗಿದೆ.</p>.<p>ರಾಯಚೂರು ನಗರದ ವಾರ್ಡ್ ಸಂಖ್ಯೆ 30 ಹಾಗೂ 31 ರ ವ್ಯಾಪ್ತಿಯ ಸಿಯಾತಾಲಾಬ್, ಜಲಾಲನಗರ, ಮಹಾದೇವ ನಗರದ ಮನೆಗಳಿಗೆ ನೀರು ನುಗ್ಗಿದೆ. ಜನರೆಲ್ಲ ಜಾಗರಣೆ ಮಾಡಿದ್ದಾರೆ. ಲಿಂಗಸುಗೂರು ತಾಲ್ಲೂಕು ಹಟ್ಟಿ ಸಮೀಪ ಗುಡಗುಂಟಾದಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ.</p>.<p>ಹಟ್ಟಿ ಸಮೀಪದ ಗುಡದನಾಳ, ಯಲಗಟ್ಟಾ, ಮಾಚನೂರು, ಪೈದೊಡ್ಡಿ, ಗೋಲಪಲ್ಲಿ ಸೇರಿ 15 ಕ್ಕೂ ಅಧಿಕ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಸೇತುವೆಗಳು ಜಲಾವೃತವಾಗಿದ್ದು ಸಂಚಾರ ಪೂರ್ಣ ಬಂದ್ ಆಗಿದೆ.</p>.<p>ಅತಿಹೆಚ್ಚು 33 ಮಿಲಿಮೀಟರ್ ಮಳೆ ಲಿಂಗಸುಗೂರು ತಾಲ್ಲೂಕಿನಲ್ಲಿ ಸುರಿದಿದೆ. ರಾಯಚೂರು ತಾಲ್ಲೂಕಿನಲ್ಲಿ 19 ಮಿಲಿಮೀಟರ್, ಸಿಂಧನೂರು ಮತ್ತು ಸಿರವಾರ ತಾಲ್ಲೂಕುಗಳಲ್ಲಿ 10 ಮಿಲಿಮೀಟರ್, ಮಸ್ಕಿಯಲ್ಲಿ 13, ಮಾನ್ವಿಯಲ್ಲಿ 6 ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ 15 ಮಿಲಿಮೀಟರ್ ಮಳೆಯಾಗಿದೆ.</p>.<p>ಜಿಲ್ಲೆಯಲ್ಲಿ ದಟ್ಟವಾದ ಮೋಡಕವಿದ ವಾತಾವರಣ ಮುಂದುವರಿದಿದ್ದು, ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸುತ್ತಮುತ್ತ ಸೋಮವಾರ ಬಿರುಸಾಗಿ ಮಳೆ ಸುರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>