ನಗರದ ಅಮರಪದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಬಟ್ಟೆ ಖರೀದಿಸಿದ ನಗರದ ಪಟೇಲವಾಡಿ, ಪೊಲೀಸ್ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಮಹಿಬೂಬ ಕಾಲೋನಿ ಮತ್ತು ಮಾನ್ವಿ ತಾಲ್ಲೂಕಿನ ಉಮಳಿ ಹೊಸೂರ ಗ್ರಾಮ ಸೇರಿ ಒಟ್ಟು 14 ಜನರಿಗೆ ಹಾಗೂ ತೆಲಂಗಾಣದ ನಂಟು ಹೊಂದಿರುವ ಗಾಂಧಿನಗರದ ಒಬ್ಬರಿಗೆ, ನಗರದ ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅವರ ಟ್ರಾವೆಲ್ ಹಿಸ್ಟರಿಯನ್ನು ಸಂಗ್ರಹಿಸಲಾಗುತ್ತಿದ್ದು, ಸೋಂಕಿತರನ್ನು ರಾಯಚೂರಿನ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮಗಳನ್ನು ಎಲ್ಲಾ ಕಾಲೋನಿ ಹಾಗೂ ವಾರ್ಡ್ಗಳಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ.