ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸಿಬಿ ದಾಳಿ: ಪುರಸಭೆ ಸಿಬ್ಬಂದಿ ಬಂಧನ

Last Updated 28 ಏಪ್ರಿಲ್ 2021, 6:14 IST
ಅಕ್ಷರ ಗಾತ್ರ

ಮುದಗಲ್: ಪಟ್ಟಣದ ಪುರಸಭೆಯ ವಾಲ್‌ಮ್ಯಾನ್‌ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅವರನ್ನು ಬಂಧಿಸಲಾಗಿದೆ.

ಪುರಸಭೆ ಸಿಬ್ಬಂದಿಗೆ ಮಂಜೂರಾದ ವಸತಿ ಯೋಜನೆಯ ಮನೆ ನಿರ್ಮಾಣದ ಹಣ ಬಿಡುಗಡೆ ಮಾಡಲು ಪೌರ ಕಾರ್ಮಿಕರಾದ ಬಸಮ್ಮ ಎಂಬವರಿಂದ ₹25 ಸಾವಿರ ಲಂಚ ಕೇಳಿದ್ದರು. ಬಸಮ್ಮ ಅವರ ಮಗ ರಮೇಶ ಎಸಿಬಿಗೆ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಎಸಿಬಿ ಎಸ್ಪಿ ಗುರುನಾಥ ಮಟ್ಟೂರು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಿವಕುಮಾರ, ಪಿ.ಎಸ್.ಐ ಪ್ರದೀಪ ತಳ್ಳಿಕೇರಿ, ವೀರಣ್ಣ ಹಳ್ಳಿ, ಕಾನ್‌ಸ್ಟೆಬಲ್‌ ವಿಕ್ರಮ ಸಿಂಹರೆಡ್ಡಿ, ರಾಜಪ್ಪ, ವಿನೋದರಾಮ, ಮುರಳಿ, ಬಸವರಾಜೇಶ್ವರಿ, ನಾಗರಾಜ, ಬಸವರಾಜ ಅವರ ನೇತೃತ್ವದ ತಂಡ ದಾಳಿ ಮಾಡಿ ವೆಂಕಟೇಶ ಅವರನ್ನು ಬಂಧಿಸಿದೆ ಎಂದು ಎಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT