<p><strong>ಸಿಂಧನೂರು</strong>: ‘ಪ್ರಸ್ತುತ ಭಾರತವನ್ನಾಳುವ ವರ್ಗ ಜನ ಸಮುದಾಯದ ಮೇಲೆ ಹೇರುತ್ತಿರುವ ಕಾನೂನು ಕಟ್ಟಳೆಗಳನ್ನು ಸೂಕ್ಷ್ಮತೆಯಿಂದ ಎದುರಿಸುತ್ತ, ಆ ತಲ್ಲಣಗಳಿಗೆ ಅಲ್ಲಾಗಿರಿರಾಜರ ಕಾವ್ಯವು ಬದುಕುವ ಹಲವು ದಾರಿಗಳನ್ನು ತೋರಿಸುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೆಂಕಟಗಿರಿ ದಳವಾಯಿ ಅವರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಬಂಡಾರ ಪ್ರಕಾಶನ ಮಸ್ಕಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕವಿ ಅಲ್ಲಾಗಿರಿರಾಜರ ‘ಗಿರಿರಾಜನ ಪದ್ಯಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಕವಿಯು ಕೇವಲ ಆರಾಧನಾ ಸ್ವರೂಪದ, ಆದರ್ಶಗಳ ಪ್ರತಿಪಾದನೆಯಲ್ಲಿರದೆ, ವರ್ತಮಾನದ ತಲ್ಲಣಗಳು, ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕಾವ್ಯವಿದ್ದರೆ ಸಾರ್ವಕಾಲಿಕವಾಗಿರುತ್ತದೆ. ಅಂತಹ ಶಕ್ತಿ ಗಿರಿರಾಜರ ಪದ್ಯಗಳಲ್ಲಿ ಕಾಣಬಹುದು’ ಎಂದರು.</p>.<p>‘ಧರ್ಮದ ನಶೆ ಏರಿಸುವ ಕಾಣದ ಕೈಗಳ ಬಗ್ಗೆ ಇಂದಿನ ಯುವಕರು ಜಾಗರೂಕತೆಯಿಂದಿರಬೇಕು ಮತ್ತು ದೇಶಪ್ರೇಮವೆಂದು ತಪ್ಪುದಾರಿಗೊಯ್ಯುವ ಬೇಟೆಗಾರರ ಬಗ್ಗೆ ಎಚ್ಚರವಿರಬೇಕು’ ಎಂದು ಕಿವಿಮಾತು ಹೇಳಿದರು.</p>.<p>ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಸವರಾಜ ಕೋಡಗುಂಟಿ ಮಾತನಾಡಿ,‘ಕವಿಯ ಕಾರ್ಯವು ಕೇವಲ ಮನರಂಜನೆಯಲ್ಲ. ಅದು ಗುರುತರ ಜವಾಬ್ದಾರಿಯನ್ನು ಹೊಂದಿದ ಕೆಲಸ. ಬಹುತ್ವದ ನಾಡಿನಲ್ಲಿ ಧರ್ಮ, ಜಾತಿ, ಲಿಂಗ ತಾರತಮ್ಯಗಳು ಇಂದಿಗೂ ವ್ಯಾಪಿಸುತ್ತ, ಕೌರ್ಯವನ್ನು ಮೆರೆಯುತ್ತಿವೆ. ಅವುಗಳನ್ನು ವಿರೋಧಿಸುತ್ತಲೇ ಪ್ರೀತಿ-ಭಕ್ತಿ, ಧರ್ಮ-ಸಮಾಜ, ಮದಿರೆ-ಮುಕ್ತಿ ಇವುಗಳನ್ನು ಜನಮನದ ಹತ್ತಿರದಲ್ಲಿ ನಿಂತು ಹಾಡುವ ಕವಿ ಅಲ್ಲಾಗಿರಿರಾಜ್ ಕನಕಗಿರಿ’ ಎಂದು ಹೇಳಿದರು.</p>.<p>‘ಗಿರಿರಾಜರ ಪದ್ಯಗಳು’ ಕೃತಿಯನ್ನು ಪರಿಚಯ ಮಾಡುತ್ತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ,‘ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಅಲ್ಲಾಗಿರಿರಾಜ್ ಒಬ್ಬರು. ಕನ್ನಡಕ್ಕೆ ಗಜಲಿನ ಘಮಲನ್ನು, ಸುಗಂಧವನ್ನು ಹಬ್ಬಿಸಿದ್ದಾರೆ’ ಎಂದು ವಿವರಿಸಿದರು.</p>.<p>ನಂತರ ಕೃತಿಕಾರ ಅಲ್ಲಾಗಿರಿರಾಜ ಮಾತನಾಡಿ ‘ನನ್ನ ಕುಟುಂಬವು ಬಡತನದ ಬೇಗೆಯಲ್ಲೇ ಬಂದಿದೆ.</p>.<p>ತಂದೆ ಕಟ್ಟಿಗೆ ಸೀಳುತ್ತಲೇ ತನ್ನ ಆಕ್ರೋಶವನ್ನು ಹೊರಹಾಕಿದ, ತಾಯಿ ಸಂಪತ್ತಿನ ಮನೆಯಲ್ಲಿ ಕಾರ ಕುಟ್ಟುತ್ತ ನಮಗಿಷ್ಟು ಬಡಿಸಿ ತಿಂದು ಬೆಳೆಸಿದ ಅವರ ನೋವು ನಲಿವುಗಳೇ ನನ್ನ ಕಾವ್ಯದ ಸತ್ವ’ ಎಂದರು.</p>.<p>ಕಾಲೇಜಿನ ಪ್ರಾಧ್ಯಾಪಕ ಬಸವರಾಜ ತಡಕಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕೆ.ಖಾದರ್ಬಾಷ, ಸಂಗನಗೌಡ, ಹನಮನಗೌಡ, ಡಾ.ಸೈಯ್ಯದ್ ಮುಜೀಬ್ ಅಹ್ಮದ್, ಸಾಹಿತಿ ಹೆಚ್.ಜಿ.ಹಂಪಣ್ಣ ಹಾಗೂ ಬಂಡಾರ ಪ್ರಕಾಶನದ ಪರಶುರಾಮ ಕೋಡಗುಂಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು</strong>: ‘ಪ್ರಸ್ತುತ ಭಾರತವನ್ನಾಳುವ ವರ್ಗ ಜನ ಸಮುದಾಯದ ಮೇಲೆ ಹೇರುತ್ತಿರುವ ಕಾನೂನು ಕಟ್ಟಳೆಗಳನ್ನು ಸೂಕ್ಷ್ಮತೆಯಿಂದ ಎದುರಿಸುತ್ತ, ಆ ತಲ್ಲಣಗಳಿಗೆ ಅಲ್ಲಾಗಿರಿರಾಜರ ಕಾವ್ಯವು ಬದುಕುವ ಹಲವು ದಾರಿಗಳನ್ನು ತೋರಿಸುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೆಂಕಟಗಿರಿ ದಳವಾಯಿ ಅವರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಬಂಡಾರ ಪ್ರಕಾಶನ ಮಸ್ಕಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕವಿ ಅಲ್ಲಾಗಿರಿರಾಜರ ‘ಗಿರಿರಾಜನ ಪದ್ಯಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.</p>.<p>‘ಕವಿಯು ಕೇವಲ ಆರಾಧನಾ ಸ್ವರೂಪದ, ಆದರ್ಶಗಳ ಪ್ರತಿಪಾದನೆಯಲ್ಲಿರದೆ, ವರ್ತಮಾನದ ತಲ್ಲಣಗಳು, ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕಾವ್ಯವಿದ್ದರೆ ಸಾರ್ವಕಾಲಿಕವಾಗಿರುತ್ತದೆ. ಅಂತಹ ಶಕ್ತಿ ಗಿರಿರಾಜರ ಪದ್ಯಗಳಲ್ಲಿ ಕಾಣಬಹುದು’ ಎಂದರು.</p>.<p>‘ಧರ್ಮದ ನಶೆ ಏರಿಸುವ ಕಾಣದ ಕೈಗಳ ಬಗ್ಗೆ ಇಂದಿನ ಯುವಕರು ಜಾಗರೂಕತೆಯಿಂದಿರಬೇಕು ಮತ್ತು ದೇಶಪ್ರೇಮವೆಂದು ತಪ್ಪುದಾರಿಗೊಯ್ಯುವ ಬೇಟೆಗಾರರ ಬಗ್ಗೆ ಎಚ್ಚರವಿರಬೇಕು’ ಎಂದು ಕಿವಿಮಾತು ಹೇಳಿದರು.</p>.<p>ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಸವರಾಜ ಕೋಡಗುಂಟಿ ಮಾತನಾಡಿ,‘ಕವಿಯ ಕಾರ್ಯವು ಕೇವಲ ಮನರಂಜನೆಯಲ್ಲ. ಅದು ಗುರುತರ ಜವಾಬ್ದಾರಿಯನ್ನು ಹೊಂದಿದ ಕೆಲಸ. ಬಹುತ್ವದ ನಾಡಿನಲ್ಲಿ ಧರ್ಮ, ಜಾತಿ, ಲಿಂಗ ತಾರತಮ್ಯಗಳು ಇಂದಿಗೂ ವ್ಯಾಪಿಸುತ್ತ, ಕೌರ್ಯವನ್ನು ಮೆರೆಯುತ್ತಿವೆ. ಅವುಗಳನ್ನು ವಿರೋಧಿಸುತ್ತಲೇ ಪ್ರೀತಿ-ಭಕ್ತಿ, ಧರ್ಮ-ಸಮಾಜ, ಮದಿರೆ-ಮುಕ್ತಿ ಇವುಗಳನ್ನು ಜನಮನದ ಹತ್ತಿರದಲ್ಲಿ ನಿಂತು ಹಾಡುವ ಕವಿ ಅಲ್ಲಾಗಿರಿರಾಜ್ ಕನಕಗಿರಿ’ ಎಂದು ಹೇಳಿದರು.</p>.<p>‘ಗಿರಿರಾಜರ ಪದ್ಯಗಳು’ ಕೃತಿಯನ್ನು ಪರಿಚಯ ಮಾಡುತ್ತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ,‘ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಅಲ್ಲಾಗಿರಿರಾಜ್ ಒಬ್ಬರು. ಕನ್ನಡಕ್ಕೆ ಗಜಲಿನ ಘಮಲನ್ನು, ಸುಗಂಧವನ್ನು ಹಬ್ಬಿಸಿದ್ದಾರೆ’ ಎಂದು ವಿವರಿಸಿದರು.</p>.<p>ನಂತರ ಕೃತಿಕಾರ ಅಲ್ಲಾಗಿರಿರಾಜ ಮಾತನಾಡಿ ‘ನನ್ನ ಕುಟುಂಬವು ಬಡತನದ ಬೇಗೆಯಲ್ಲೇ ಬಂದಿದೆ.</p>.<p>ತಂದೆ ಕಟ್ಟಿಗೆ ಸೀಳುತ್ತಲೇ ತನ್ನ ಆಕ್ರೋಶವನ್ನು ಹೊರಹಾಕಿದ, ತಾಯಿ ಸಂಪತ್ತಿನ ಮನೆಯಲ್ಲಿ ಕಾರ ಕುಟ್ಟುತ್ತ ನಮಗಿಷ್ಟು ಬಡಿಸಿ ತಿಂದು ಬೆಳೆಸಿದ ಅವರ ನೋವು ನಲಿವುಗಳೇ ನನ್ನ ಕಾವ್ಯದ ಸತ್ವ’ ಎಂದರು.</p>.<p>ಕಾಲೇಜಿನ ಪ್ರಾಧ್ಯಾಪಕ ಬಸವರಾಜ ತಡಕಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕೆ.ಖಾದರ್ಬಾಷ, ಸಂಗನಗೌಡ, ಹನಮನಗೌಡ, ಡಾ.ಸೈಯ್ಯದ್ ಮುಜೀಬ್ ಅಹ್ಮದ್, ಸಾಹಿತಿ ಹೆಚ್.ಜಿ.ಹಂಪಣ್ಣ ಹಾಗೂ ಬಂಡಾರ ಪ್ರಕಾಶನದ ಪರಶುರಾಮ ಕೋಡಗುಂಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>