<p>ಮುದಗಲ್: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಅವರು ಅಲೆಮಾರಿ ಮಕ್ಕಳು ಹಾಗೂ ಜನಾಂಗದ ಜತೆ ಹೊಸ ವರ್ಷ ಆಚರಣೆ ಮಾಡಿದರು.</p>.<p>ಪಟ್ಟಣದ ಸರ್ವೆ ನಂಬರ್ 9ರಲ್ಲಿ ಇರುವ ಅಲೆಮಾರಿ ಜನಾಂಗದ ಮನೆ ಅಂಗಳಕ್ಕೆ ತೆರಳಿ, ಅವರ ಮಕ್ಕಳ ಜತೆ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. 40 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದರು.</p>.<p>ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಗುಡಿಸಲಿಗೆ ಬಂದು ಹೊಸ ವರ್ಷ ಆಚರಣೆ ಮಾಡುತ್ತಿರುವುದನ್ನು ಕಂಡ ಅಲೆಮಾರಿ ಮಕ್ಕಳು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.</p>.<p>ಪಿಎಸ್ಐ ಪ್ರಕಾಶ ಡಂಬಾಳ ಮಾತನಾಡಿ, ‘ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅಕ್ಷರವಂತರಾಗಿ ಮಾಡಿ’ ಎಂದು ಸಲಹೆ ನೀಡದರು. ನಂತರ ಮಾತೋಶ್ರೀ ಶರಣಮ್ಮನವರ ಗೋ ಶಾಲೆಗೆ ಭೇಟಿ ನೀಡಿದರು. ರೂಪಾ ಪ್ರಕಾಶ ಡಂಬಾಳ, ಕಾನ್ಸ್ಟೆಬಲ್ಗಳಾದ ಅಡಿವಪ್ಪ, ಹನಮಂತಪ್ಪ, ಶಿವನಗೌಡ, ಅಮರೇಶ ಇತರರಿದ್ದರು.</p>.<p class="Briefhead">ಕೂಲಿಕಾರರಿಂದ ಹೊಸ ವರ್ಷಾಚರಣೆ</p>.<p>ಸಿಂಧನೂರು: ತಾಲ್ಲೂಕಿನ ಜಾಲಿಹಾಳ ಗ್ರಾಮದಲ್ಲಿ ಕೂಲಿಕೆಲಸ ಮಾಡುವ ಮಹಿಳೆಯರು ಭಾನುವಾರ ಹೊಸ ವರ್ಷಾಚರಿಸುವ ಮೂಲಕ ಸಂಭ್ರಮಿಸಿದರು.</p>.<p>ಪ್ರತಿನಿತ್ಯ ಭತ್ತದ ಸಸಿನಾಟಿ ಮಾಡಲು ಹೋಗುವ ಗುಂಪಿನ ಮಹಿಳೆಯರು ಬೇವಿನಹಾಳ ಸೀಮೆಯ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮುಂಚೆ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು.</p>.<p class="Briefhead">ಚಿಂದಿ ಆಯುವ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ</p>.<p>ರಾಯಚೂರು: ಹೊಸ ವರ್ಷದ ಅಂಗವಾಗಿ ಶನಿವಾರ ಮಧ್ಯರಾತ್ರಿ ಚಿತ್ರನಟಿ ಪೂಜಾ ರಮೇಶ ಅವರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಸ್ತೆ ಬದಿಯಲ್ಲಿ ನಿರಾಶ್ರಿತರಿಗೆ, ನಿರ್ಗತಿಕರು, ಭಿಕ್ಷುಕರಿಗೆ ಬೆಡ್ ಶೀಟ್ ನೀಡಿದರು. </p>.<p>ಭಾನುವಾರ ಬಂಬೂ ಬಜಾರ್ ಮೇದಾರ್ ಓಣಿ ಹಾಗೂ ಕೊಳಗೇರಿ ಮಹಿಳೆಯರ ಸಮಸ್ಯೆ ಆಲಿಸಿ ಕುಶಲೋಪರಿ ವಿಚಾರಿಸಿದರು. ಚಿಂದಿ ಆಯುವವರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು. ಈ ವೇಳೆ ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ, ವಸಂತಲಕ್ಷ್ಮಿ, ಮೌನೇಶ್ ಗೋನುವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುದಗಲ್: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಅವರು ಅಲೆಮಾರಿ ಮಕ್ಕಳು ಹಾಗೂ ಜನಾಂಗದ ಜತೆ ಹೊಸ ವರ್ಷ ಆಚರಣೆ ಮಾಡಿದರು.</p>.<p>ಪಟ್ಟಣದ ಸರ್ವೆ ನಂಬರ್ 9ರಲ್ಲಿ ಇರುವ ಅಲೆಮಾರಿ ಜನಾಂಗದ ಮನೆ ಅಂಗಳಕ್ಕೆ ತೆರಳಿ, ಅವರ ಮಕ್ಕಳ ಜತೆ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. 40 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದರು.</p>.<p>ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಗುಡಿಸಲಿಗೆ ಬಂದು ಹೊಸ ವರ್ಷ ಆಚರಣೆ ಮಾಡುತ್ತಿರುವುದನ್ನು ಕಂಡ ಅಲೆಮಾರಿ ಮಕ್ಕಳು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.</p>.<p>ಪಿಎಸ್ಐ ಪ್ರಕಾಶ ಡಂಬಾಳ ಮಾತನಾಡಿ, ‘ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅಕ್ಷರವಂತರಾಗಿ ಮಾಡಿ’ ಎಂದು ಸಲಹೆ ನೀಡದರು. ನಂತರ ಮಾತೋಶ್ರೀ ಶರಣಮ್ಮನವರ ಗೋ ಶಾಲೆಗೆ ಭೇಟಿ ನೀಡಿದರು. ರೂಪಾ ಪ್ರಕಾಶ ಡಂಬಾಳ, ಕಾನ್ಸ್ಟೆಬಲ್ಗಳಾದ ಅಡಿವಪ್ಪ, ಹನಮಂತಪ್ಪ, ಶಿವನಗೌಡ, ಅಮರೇಶ ಇತರರಿದ್ದರು.</p>.<p class="Briefhead">ಕೂಲಿಕಾರರಿಂದ ಹೊಸ ವರ್ಷಾಚರಣೆ</p>.<p>ಸಿಂಧನೂರು: ತಾಲ್ಲೂಕಿನ ಜಾಲಿಹಾಳ ಗ್ರಾಮದಲ್ಲಿ ಕೂಲಿಕೆಲಸ ಮಾಡುವ ಮಹಿಳೆಯರು ಭಾನುವಾರ ಹೊಸ ವರ್ಷಾಚರಿಸುವ ಮೂಲಕ ಸಂಭ್ರಮಿಸಿದರು.</p>.<p>ಪ್ರತಿನಿತ್ಯ ಭತ್ತದ ಸಸಿನಾಟಿ ಮಾಡಲು ಹೋಗುವ ಗುಂಪಿನ ಮಹಿಳೆಯರು ಬೇವಿನಹಾಳ ಸೀಮೆಯ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮುಂಚೆ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು.</p>.<p class="Briefhead">ಚಿಂದಿ ಆಯುವ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ</p>.<p>ರಾಯಚೂರು: ಹೊಸ ವರ್ಷದ ಅಂಗವಾಗಿ ಶನಿವಾರ ಮಧ್ಯರಾತ್ರಿ ಚಿತ್ರನಟಿ ಪೂಜಾ ರಮೇಶ ಅವರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಸ್ತೆ ಬದಿಯಲ್ಲಿ ನಿರಾಶ್ರಿತರಿಗೆ, ನಿರ್ಗತಿಕರು, ಭಿಕ್ಷುಕರಿಗೆ ಬೆಡ್ ಶೀಟ್ ನೀಡಿದರು. </p>.<p>ಭಾನುವಾರ ಬಂಬೂ ಬಜಾರ್ ಮೇದಾರ್ ಓಣಿ ಹಾಗೂ ಕೊಳಗೇರಿ ಮಹಿಳೆಯರ ಸಮಸ್ಯೆ ಆಲಿಸಿ ಕುಶಲೋಪರಿ ವಿಚಾರಿಸಿದರು. ಚಿಂದಿ ಆಯುವವರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು. ಈ ವೇಳೆ ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ, ವಸಂತಲಕ್ಷ್ಮಿ, ಮೌನೇಶ್ ಗೋನುವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>