‘ಏತ ನೀರಾವರಿ ಯೋಜನೆಗಾಗಿ ರಾಯಚೂರು ಜಿಲ್ಲೆಯ ಜೆ.ಮಲ್ಲಾಪುರು, ದದ್ದಲ್, ಸುಂಕೇಶ್ವರ ಗ್ರಾಮದಲ್ಲಿ 2008, 2009 ಹಾಗೂ 2012ರಲ್ಲಿ ನೂರಾರು ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ, ಸಂತ್ರಸ್ತ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಸಣ್ಣ ನೀರಾವರಿ ಇಲಾಖೆ ಹಾಗೂ ರಾಯಚೂರು ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪ್ರತಿ ಎಕರೆಗೆ ₹ 2.98 ಲಕ್ಷ ಪರಿಹಾರ ಕೊಡಬೇಕಿತ್ತು’ ಎಂದು ರೈತರ ಪರವಾಗಿ ಬಂದಿದ್ದ ವಕೀಲ ಬಸಪ್ಪ ಹೇಳಿದರು.