<blockquote>ಜಾಗೃತಿ ಓಟಕ್ಕೆ ನ್ಯಾಯಾಧೀಶರಿಂದ ಚಾಲನೆ | ಟೀಶರ್ಟ್ ಧರಿಸಿ ಯುವಕರು ಓಟದಲ್ಲಿ ಭಾಗಿ | ಉತ್ಸಾಹ ತೋರಿದ ಕಾಲೇಜು ವಿದ್ಯಾರ್ಥಿಗಳು</blockquote>.<p><strong>ರಾಯಚೂರು:</strong> ‘ಸೈಬರ್ ಅಪರಾಧ ಮಾಡುವ ಉದ್ದೇಶದಿಂದಲೇ ಕೆಲವರು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಗಾಡೆ ಕಳವಳ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿಗೆ ಆಯೋಜಿಸಿದ್ದ ಮ್ಯಾರಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಸೈಬರ್ ಅಪರಾಧಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿವೆ. ಈ ಅಪರಾಧಗಳಲ್ಲಿ ಒಳಗಾಗುತ್ತಿರುವವರೂ, ಅಪರಾಧ ಮಾಡುವವರೂ ಇಬ್ಬರೂ ಶಿಕ್ಷಣ ಪಡೆದವರೇ ಆಗಿದ್ದಾರೆ. ಹತ್ತು ರೂಪಾಯಿ ಕಳ್ಳತನ ಮಾಡುವವರಿಂದ ಇಂದು ಬ್ಯಾಂಕ್ ಖಾತೆಯಲ್ಲಿನ ಲಕ್ಷಾಂತರ ಹಣ ಖಾಲಿ ಮಾಡುವ ಕಳ್ಳರ ಕಾಲ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.<br><br> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಮಾತನಾಡಿ, ‘ಈ ತಿಂಗಳು ದೇಶದಾದ್ಯಂತ ಸೈಬರ್ ವಿರೋಧಿ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದೆ. ತಂತ್ರಜ್ಞಾನ ಸೌಲಭ್ಯಗಳು ಗ್ರಾಮೀಣ ಭಾಗಗಳಿಗೂ ತಲುಪಿರುವ ಕಾರಣ ಸೈಬರ್ ಅಪರಾಧಗಳು ಎಲ್ಲೆಡೆ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರು ಈ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಬಳಕೆಯ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಗುರುರಾಜ ಬಿರಾದಾರ ಮಾತನಾಡಿ, ಸೈಬರ್ ಅಪರಾಧ ವಿರುದ್ಧ ಸಾಮಾಜಿಕ ಜಾಗೃತಿ ಅಗತ್ಯವಿದೆ. ಸಮಾಜ ಬದಲಾಗಬೇಕಾದರೆ ಯುವಕರು ಮೊದಲು ಇಂತಹ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಹರೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಸುವ್ಯವಸ್ಥೆ ವಿಭಾಗ) ಕುಮಾರಸ್ವಾಮಿ, ಡಿವೈಎಸ್ ಪಿ ಶಾಂತವೀರ, ಪ್ರಮಾಣನಂದ ಘೋಡಕೆ, ದತ್ತಾತ್ರೇಯ ಕರ್ನಾಡ, ಸೈಬರ್ ಅಪರಾಧ ವಿಭಾಗದ ಡಿವೈಎಸ್ಪಿ ಶಿವಕುಮಾರ ಹೊಗಿಬಂಡಿ ಉಪಸ್ಥಿತರಿದ್ದರು.</p>.<p><strong>ಮ್ಯಾರಥಾನ್: ಗೋವಿಂದ, ಭಾಗ್ಯಲಕ್ಷ್ಮೀ ಪ್ರಥಮ</strong></p>.<p>ರಾಯಚೂರು: ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ರಾಯಚೂರು ಜಿಲ್ಲಾ ಪೊಲೀಸರ ವತಿಯಿಂದ ಸೈಬರ್ ಸುರಕ್ಷತೆಗಾಗಿ ಮ್ಯಾರಥಾನ ನಡೆಯಿತು.</p>.<p>ಮ್ಯಾರಥಾನ್ನಲ್ಲಿ ಗೋವಿಂದ ಪ್ರಥಮ ಸ್ಥಾನ, ತಿಮ್ಮಪ್ಪ ದ್ವಿತೀಯ ಸ್ಥಾನ ಹಾಗೂ ನರೇಶ ತೃತೀಯ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಭಾಗ್ಯಲಕ್ಷ್ಮೀ ಪ್ರಥಮ, ಮನುಷಾ ಪಾಟೀಲ ದ್ವಿತೀಯ ಮತ್ತು ಪ್ರೇರಣಾ ತೃತೀಯ ಸ್ಥಾನ ಪಡೆದರು.</p>.<p>ಜಿಲ್ಲಾ ಪೊಲೀಸ್ ಮುಖ್ಯಾಲಯದ ಆವರಣದಿಂದ ಆರಂಭವಾದ ಓಟ ಗಂಜ್ ಸರ್ಕಲ್, ಚಂದ್ರಬಂಡ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ರಂಗ ಮಂದಿರ ಆವರಣಕ್ಕೆ ಬಂದು ಸಮಾರೋಪಗೊಂಡಿತು. ಪೊಲೀಸ್ ಅಧಿಕಾರಿಗಳು, ಪೊಲೀಸರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<p><strong>ಕ್ರಿಕೆಟ್: ಪೊಲೀಸ್ ಅಧಿಕಾರಿಗಳ ತಂಡಕ್ಕೆ ಜಯ</strong></p>.<p>ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಪತ್ರಕರ್ತರ ತಂಡದ ಮಧ್ಯೆ ನಡೆದ 10 ಓವರ್ಗಳ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ವಿರೋಚಿತ ಗೆಲುವು ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಜಾಗೃತಿ ಓಟಕ್ಕೆ ನ್ಯಾಯಾಧೀಶರಿಂದ ಚಾಲನೆ | ಟೀಶರ್ಟ್ ಧರಿಸಿ ಯುವಕರು ಓಟದಲ್ಲಿ ಭಾಗಿ | ಉತ್ಸಾಹ ತೋರಿದ ಕಾಲೇಜು ವಿದ್ಯಾರ್ಥಿಗಳು</blockquote>.<p><strong>ರಾಯಚೂರು:</strong> ‘ಸೈಬರ್ ಅಪರಾಧ ಮಾಡುವ ಉದ್ದೇಶದಿಂದಲೇ ಕೆಲವರು ಕಂಪ್ಯೂಟರ್ ಶಿಕ್ಷಣ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಾರುತಿ ಬಗಾಡೆ ಕಳವಳ ವ್ಯಕ್ತಪಡಿಸಿದರು.</p>.<p>ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೈಬರ್ ಅಪರಾಧ ತಡೆ ಜಾಗೃತಿಗೆ ಆಯೋಜಿಸಿದ್ದ ಮ್ಯಾರಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಸೈಬರ್ ಅಪರಾಧಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿವೆ. ಈ ಅಪರಾಧಗಳಲ್ಲಿ ಒಳಗಾಗುತ್ತಿರುವವರೂ, ಅಪರಾಧ ಮಾಡುವವರೂ ಇಬ್ಬರೂ ಶಿಕ್ಷಣ ಪಡೆದವರೇ ಆಗಿದ್ದಾರೆ. ಹತ್ತು ರೂಪಾಯಿ ಕಳ್ಳತನ ಮಾಡುವವರಿಂದ ಇಂದು ಬ್ಯಾಂಕ್ ಖಾತೆಯಲ್ಲಿನ ಲಕ್ಷಾಂತರ ಹಣ ಖಾಲಿ ಮಾಡುವ ಕಳ್ಳರ ಕಾಲ ಬಂದಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.<br><br> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಮಾತನಾಡಿ, ‘ಈ ತಿಂಗಳು ದೇಶದಾದ್ಯಂತ ಸೈಬರ್ ವಿರೋಧಿ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದೆ. ತಂತ್ರಜ್ಞಾನ ಸೌಲಭ್ಯಗಳು ಗ್ರಾಮೀಣ ಭಾಗಗಳಿಗೂ ತಲುಪಿರುವ ಕಾರಣ ಸೈಬರ್ ಅಪರಾಧಗಳು ಎಲ್ಲೆಡೆ ಹೆಚ್ಚುತ್ತಿವೆ. ವಿಶೇಷವಾಗಿ ಯುವಕರು ಈ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಮೊಬೈಲ್ ಬಳಕೆಯ ಮೊದಲು ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಗುರುರಾಜ ಬಿರಾದಾರ ಮಾತನಾಡಿ, ಸೈಬರ್ ಅಪರಾಧ ವಿರುದ್ಧ ಸಾಮಾಜಿಕ ಜಾಗೃತಿ ಅಗತ್ಯವಿದೆ. ಸಮಾಜ ಬದಲಾಗಬೇಕಾದರೆ ಯುವಕರು ಮೊದಲು ಇಂತಹ ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.</p>.<p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ ವಿಭಾಗ) ಹರೀಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಸುವ್ಯವಸ್ಥೆ ವಿಭಾಗ) ಕುಮಾರಸ್ವಾಮಿ, ಡಿವೈಎಸ್ ಪಿ ಶಾಂತವೀರ, ಪ್ರಮಾಣನಂದ ಘೋಡಕೆ, ದತ್ತಾತ್ರೇಯ ಕರ್ನಾಡ, ಸೈಬರ್ ಅಪರಾಧ ವಿಭಾಗದ ಡಿವೈಎಸ್ಪಿ ಶಿವಕುಮಾರ ಹೊಗಿಬಂಡಿ ಉಪಸ್ಥಿತರಿದ್ದರು.</p>.<p><strong>ಮ್ಯಾರಥಾನ್: ಗೋವಿಂದ, ಭಾಗ್ಯಲಕ್ಷ್ಮೀ ಪ್ರಥಮ</strong></p>.<p>ರಾಯಚೂರು: ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ರಾಯಚೂರು ಜಿಲ್ಲಾ ಪೊಲೀಸರ ವತಿಯಿಂದ ಸೈಬರ್ ಸುರಕ್ಷತೆಗಾಗಿ ಮ್ಯಾರಥಾನ ನಡೆಯಿತು.</p>.<p>ಮ್ಯಾರಥಾನ್ನಲ್ಲಿ ಗೋವಿಂದ ಪ್ರಥಮ ಸ್ಥಾನ, ತಿಮ್ಮಪ್ಪ ದ್ವಿತೀಯ ಸ್ಥಾನ ಹಾಗೂ ನರೇಶ ತೃತೀಯ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ಭಾಗ್ಯಲಕ್ಷ್ಮೀ ಪ್ರಥಮ, ಮನುಷಾ ಪಾಟೀಲ ದ್ವಿತೀಯ ಮತ್ತು ಪ್ರೇರಣಾ ತೃತೀಯ ಸ್ಥಾನ ಪಡೆದರು.</p>.<p>ಜಿಲ್ಲಾ ಪೊಲೀಸ್ ಮುಖ್ಯಾಲಯದ ಆವರಣದಿಂದ ಆರಂಭವಾದ ಓಟ ಗಂಜ್ ಸರ್ಕಲ್, ಚಂದ್ರಬಂಡ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ರಂಗ ಮಂದಿರ ಆವರಣಕ್ಕೆ ಬಂದು ಸಮಾರೋಪಗೊಂಡಿತು. ಪೊಲೀಸ್ ಅಧಿಕಾರಿಗಳು, ಪೊಲೀಸರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.</p>.<p><strong>ಕ್ರಿಕೆಟ್: ಪೊಲೀಸ್ ಅಧಿಕಾರಿಗಳ ತಂಡಕ್ಕೆ ಜಯ</strong></p>.<p>ಸೈಬರ್ ಅಪರಾಧ ತಡೆ ಮಾಸಾಚರಣೆ–2025 ಪ್ರಯುಕ್ತ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಪತ್ರಕರ್ತರ ತಂಡದ ಮಧ್ಯೆ ನಡೆದ 10 ಓವರ್ಗಳ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ವಿರೋಚಿತ ಗೆಲುವು ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>