<p><strong>ರಾಯಚೂರು:</strong> ತಾಲ್ಲೂಕಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾವರದಲ್ಲಿ <br>ನಡೆಯುತ್ತಿರುವ ಸ್ಯಾಂಡ್ ಬ್ಲಾಸ್ಟಿಂಗ್ ಹಾಗೂ ಎಪಾಕ್ಸ್ ಪೇಂಟಿಂಗ್ ಕಾಮಗಾರಿಯಿಂದ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಪದಾಧಿಕಾರಿಗಳು ಆರ್ಟಿಪಿಎಸ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.</p>.<p>‘ಎಸ್ಪ್ರಿನ್ಸ್ ಹೈಟೆಕ್ ಪ್ರೈವೆಟ್ ಲಿಮಿಟೆಡ್, ಮುಂಬೈ, ಕಂಪನಿಗೆ ₹130 ಕೋಟಿ ಒಂದೇ ಕಾಮಗಾರಿಯನ್ನು ನಾಲ್ಕು ಕಾಮಗಾರಿಗಳಾಗಿ ಗುತ್ತಿಗೆ ನೀಡಿರುವುದು ಹಾಗೂ ಅಂದಾಜು ವೆಚ್ಚ ಪಟ್ಟಿಯಂತೆ ಕಾಮಗಾರಿ ಮಾಡದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದು, ಇದರಿಂದ ಕೆಪಿಸಿಎಲ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟವಾಗಿದೆ’ ಎಂದು ಆರೋಪಿಸಿದರು.</p>.<p>‘ತಕ್ಷಣ ಕಾಮಗಾರಿ ತಡೆಹಿಡಿದು ಯಾವುದೇ ಬಿಲ್ ಪಾವತಿ ಮಾಡಬಾರದು. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜತೆಗೆ ಸಂಸ್ಥೆಗೆ ಆದ ಆರ್ಥಿಕ ನಷ್ಟ ಅಧಿಕಾರಿಗಳಿಂದ ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದರು.</p>.<p>ಈ ಸಂದರ್ಭದಲ್ಲಿ ಶಿವಕುಮಾರ ಯಾದವ, ಸುರೇಶ ಮಡಿವಾಳ, ರಾಜ ಸಾಬ್, ಪ್ರಕಾಶ, ಯಲ್ಲನಗೌಡ, ಕರುಣಾಕರ ರೆಡ್ಡಿ, ನರಸಪ್ಪ, ಕಿರಣ ಮುರಾರಿ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ತಾಲ್ಲೂಕಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾವರದಲ್ಲಿ <br>ನಡೆಯುತ್ತಿರುವ ಸ್ಯಾಂಡ್ ಬ್ಲಾಸ್ಟಿಂಗ್ ಹಾಗೂ ಎಪಾಕ್ಸ್ ಪೇಂಟಿಂಗ್ ಕಾಮಗಾರಿಯಿಂದ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ಜಯ ಕರ್ನಾಟಕ ಪದಾಧಿಕಾರಿಗಳು ಆರ್ಟಿಪಿಎಸ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.</p>.<p>‘ಎಸ್ಪ್ರಿನ್ಸ್ ಹೈಟೆಕ್ ಪ್ರೈವೆಟ್ ಲಿಮಿಟೆಡ್, ಮುಂಬೈ, ಕಂಪನಿಗೆ ₹130 ಕೋಟಿ ಒಂದೇ ಕಾಮಗಾರಿಯನ್ನು ನಾಲ್ಕು ಕಾಮಗಾರಿಗಳಾಗಿ ಗುತ್ತಿಗೆ ನೀಡಿರುವುದು ಹಾಗೂ ಅಂದಾಜು ವೆಚ್ಚ ಪಟ್ಟಿಯಂತೆ ಕಾಮಗಾರಿ ಮಾಡದೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದು, ಇದರಿಂದ ಕೆಪಿಸಿಎಲ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟವಾಗಿದೆ’ ಎಂದು ಆರೋಪಿಸಿದರು.</p>.<p>‘ತಕ್ಷಣ ಕಾಮಗಾರಿ ತಡೆಹಿಡಿದು ಯಾವುದೇ ಬಿಲ್ ಪಾವತಿ ಮಾಡಬಾರದು. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜತೆಗೆ ಸಂಸ್ಥೆಗೆ ಆದ ಆರ್ಥಿಕ ನಷ್ಟ ಅಧಿಕಾರಿಗಳಿಂದ ಮರಳಿ ಪಡೆಯಬೇಕು’ ಎಂದು ಆಗ್ರಹಿಸಿದರು.</p>.<p>ಈ ಸಂದರ್ಭದಲ್ಲಿ ಶಿವಕುಮಾರ ಯಾದವ, ಸುರೇಶ ಮಡಿವಾಳ, ರಾಜ ಸಾಬ್, ಪ್ರಕಾಶ, ಯಲ್ಲನಗೌಡ, ಕರುಣಾಕರ ರೆಡ್ಡಿ, ನರಸಪ್ಪ, ಕಿರಣ ಮುರಾರಿ ಪ್ರತಿಭಟನೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>