<p><strong>ಹಿರೇಹಣಿಗಿ (ಕವಿತಾಳ): </strong>ನಾರಾಯಣಪುರ ಬಲದಂಡೆ ಕಾಲುವೆಯ 9 (ಎ) ವಡವಟ್ಟಿ ಶಾಖಾ ಕಾಲುವೆಯಿಂದ 6.290 ಕಿ.ಮೀ ವರೆಗೆ ಕಾಮಗಾರಿಯನ್ನು ಆರಂಭಿಸುವಂತೆ ರೈತರು ಆಗ್ರಹಿಸಿದರು.</p>.<p>ಸಿರವಾರ ತಾಲ್ಲೂಕಿನ ಹಿರೇಹಣಿಗಿ ಗ್ರಾಮದಲ್ಲಿ ಈಚೆಗೆ ಸಭೆ ನಡೆಸಿದ ರೈತರು ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.</p>.<p>ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಅಮರೇಶ ಚಾಗಭಾವಿ ಮಾತನಾಡಿ ‘ಕಾಮಗಾರಿಯನ್ನು ಗುತ್ತಿಗೆ ಪಡೆದ ಇಬ್ಬರು ಗುತ್ತಿಗೆದಾರರಿಗೆ 2017 ಅ.8 ರ ಒಳಗಾಗಿ ಟೆಂಡರ್ ಒಪ್ಪಂದ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರೂ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ವಿಳಂಬವಾಗಿ ಕವಿತಾಳ, ಕಲಂಗೇರಾ, ಚಿಕ್ಕಬಾದರದಿನ್ನಿ, ಹಿರೇಹಣಿಗಿ, ಪಾತಾಪುರ, ಮಲ್ಲಟ, ಯು.ಗುಡಡದಿನ್ನಿ ಸೇರಿದಂತೆ 8 ಹಳ್ಳಿಗಳ ವ್ಯಾಪ್ತಿಯ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.</p>.<p>‘ಈ ಕೂಡಲೇ ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳದಿದ್ದರೆ ಜ.10 ರಿಂದ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.</p>.<p>ರೈತ ಮುಖಂರಾದ ತಿಮ್ಮನಗೌಡ, ಶಂಕರಗೌಡ ಗುಡದಿನ್ನಿ, ಲಿಂಗಣ್ಣ ನಾಸಲ್, ಅಮರಯ್ಯಸ್ವಾಮಿ, ದುರುಗಪ್ಪ ಮತ್ತು ವಿವಧ ಹಳ್ಳಿಗಳ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಹಣಿಗಿ (ಕವಿತಾಳ): </strong>ನಾರಾಯಣಪುರ ಬಲದಂಡೆ ಕಾಲುವೆಯ 9 (ಎ) ವಡವಟ್ಟಿ ಶಾಖಾ ಕಾಲುವೆಯಿಂದ 6.290 ಕಿ.ಮೀ ವರೆಗೆ ಕಾಮಗಾರಿಯನ್ನು ಆರಂಭಿಸುವಂತೆ ರೈತರು ಆಗ್ರಹಿಸಿದರು.</p>.<p>ಸಿರವಾರ ತಾಲ್ಲೂಕಿನ ಹಿರೇಹಣಿಗಿ ಗ್ರಾಮದಲ್ಲಿ ಈಚೆಗೆ ಸಭೆ ನಡೆಸಿದ ರೈತರು ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.</p>.<p>ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಅಮರೇಶ ಚಾಗಭಾವಿ ಮಾತನಾಡಿ ‘ಕಾಮಗಾರಿಯನ್ನು ಗುತ್ತಿಗೆ ಪಡೆದ ಇಬ್ಬರು ಗುತ್ತಿಗೆದಾರರಿಗೆ 2017 ಅ.8 ರ ಒಳಗಾಗಿ ಟೆಂಡರ್ ಒಪ್ಪಂದ ಮಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದರೂ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಕಾಮಗಾರಿ ವಿಳಂಬವಾಗಿ ಕವಿತಾಳ, ಕಲಂಗೇರಾ, ಚಿಕ್ಕಬಾದರದಿನ್ನಿ, ಹಿರೇಹಣಿಗಿ, ಪಾತಾಪುರ, ಮಲ್ಲಟ, ಯು.ಗುಡಡದಿನ್ನಿ ಸೇರಿದಂತೆ 8 ಹಳ್ಳಿಗಳ ವ್ಯಾಪ್ತಿಯ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ’ ಎಂದು ಆರೋಪಿಸಿದರು.</p>.<p>‘ಈ ಕೂಡಲೇ ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳದಿದ್ದರೆ ಜ.10 ರಿಂದ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.</p>.<p>ರೈತ ಮುಖಂರಾದ ತಿಮ್ಮನಗೌಡ, ಶಂಕರಗೌಡ ಗುಡದಿನ್ನಿ, ಲಿಂಗಣ್ಣ ನಾಸಲ್, ಅಮರಯ್ಯಸ್ವಾಮಿ, ದುರುಗಪ್ಪ ಮತ್ತು ವಿವಧ ಹಳ್ಳಿಗಳ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>