ಆಯ್ಕೆಯ ದಿನದಿಂದ ಭೂ ಚೇತನ ಯೋಜನೆ, ರೈತ ಕ್ಷೇತ್ರ, ಪಾಠ ಶಾಲೆ, ಮಣ್ಣು ಮಾದರಿ ಪರೀಕ್ಷೆ, ಕ್ರಾಪ್ ಸರ್ವೆ ಕೆಲಸ, ಬೆಳೆ ಕಟಾವು ಸಮೀಕ್ಷೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ. ರೈತರ ಮನೆ ಬಾಗಿಲಿಗೆ ಹೋಗಿ ಅವರಿಗೆ ಬೇಕಾಗುವ ಸೌಲಭ್ಯ ಮತ್ತು ಮಾಹಿತಿ ನೀಡುವ ಕೆಲಸ ಮಾಡಲಾಗಿದೆ. ಆದರೀಗ ಏಕಾಏಕಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತ ಅನುವುಗಾರರನ್ನು ಕೆಲಸದಿಂದ ತೆಗೆದು ಹಾಕಿ, ಅವರ ಜಾಗೆಯಲ್ಲಿ ಡಿಪ್ಲೊಮಾ ಪದವಿದರರನ್ನು ‘ರೈತಮಿತ್ರ‘ ಎಂದು ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಸಂಘದ ಸದಸ್ಯ ಶರಣಬಸವ ಮಲ್ಲಾಪುರ ಆಪಾದಿಸಿದರು.