ದೇವದುರ್ಗ: ‘ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಸುಖದೇವ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಜಾಲಹಳ್ಳಿ ಶಾಲೆ ಮಾಲೀಕರಾದ ಶರಣು ಹುಣಸಿಗಿ ಮತ್ತು ಗಾಣಧಾಳ ಶಾಲೆ ಮಾಲೀಕ ಬಸವರಾಜ ಉದ್ದೇಶಪೂರ್ವಕವಾಗಿ ಹಲ್ಲೆಗೆ ಯತ್ನಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ಇವರ ವಿರುದ್ಧ ಕ್ರಮ ಜರುಗಿಸಿ, ಶಾಲೆಗಳ ಪರವಾನಗಿ ರದ್ದು ಮಾಡಬೇಕು’ ಎಂದು ಕರ್ನಾಟಕ ರೈತ ಸಂಘ ತಾಲ್ಲೂಕು ಅಧ್ಯಕ್ಷ ಗಿರಲಿಂಗ ಸ್ವಾಮಿ ಒತ್ತಾಯಿಸಿದರು.