<p><strong>ಹಟ್ಟಿ ಚಿನ್ನದ ಗಣಿ</strong>: ಸಮೀಪದ ಕೋಠಾ, ಕಡ್ಡೋಣಿ, ಯಲಗಟ್ಟಾ ಮೇದಿನಾಪುರ ಗ್ರಾಮದಲ್ಲಿ ಜಾರಿಗೊಳಿಸಿದ ಹಲವು ಕುಡಿಯುವ ನೀರಿನ ಯೋಜನೆಗಳು ವಿಫಲಗೊಂಡು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ.</p>.<p>ಯಲಗಟ್ಟಾ ಗ್ರಾಮದಲ್ಲಿ 3 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಬೋರ್ವೆಲ್ ಕೊರೆದರೂ ಶುದ್ದನೀರು ಸಿಗುವುದಿಲ್ಲ. ಫ್ಲೋರೈಡ್, ಆರ್ಸೆನಿಕ್ ಅಂಶ ಇರುವ ನೀರು ಕುಡಿಯಬೇಕಾದ ಪರಿಸ್ಧಿತಿ ಇದೆ. ₹15 ಲಕ್ಷ ವೆಚ್ಚದಲ್ಲಿ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿನ ಎನ್ನಾಬ್ರಿಸ್ ಮುಖ್ಯ ನಾಲೆಯಿಂದ ನೀರು ಪೂರೈಕೆಗಾಗಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದೂ ಅರ್ಧಕ್ಕೆ ನಿಂತಿದೆ.</p>.<p>ಪೈಪ್ಲೈನ್ ಅಳವಡಿಕೆಗೆ ₹10 ಲಕ್ಷ ಅನುದಾನ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಪಂಚಾಯಿತಿಯಿಂದ ₹10 ಲಕ್ಷ ಅನುದಾನ ನೀಡಿ ಯಲಗಟ್ಟಾ ಗ್ರಾಮದ ಗುಡ್ಡದಲ್ಲಿ ಫಿಲ್ಟರ್ ಟ್ಯಾಂಕ್ ಅಳವಡಿಸಿ ಶುದ್ಧ ನೀರು ಪೂರೈಕೆಗೆ ಯೋಜನೆ ರೂಪಿಸಿತ್ತು. ನೀರು ಬರುವ ಮುನ್ನವೇ ಯೋಜನೆ ವಿಫಲವಾಯಿತು.</p>.<p>ಮೇದಿನಾಪುರ ಗ್ರಾಮದ ನೀರಿನ ಸಮಸ್ಯೆ ನಿಗೀಸಲು ₹ 28 ಲಕ್ಷ ವೆಚ್ಚದಲ್ಲಿ ಅಮರೇಶ್ವರ ಹತ್ತಿರದಲ್ಲಿ ಬೋರ್ವೆಲ್ ಕೊರೆಸಿ ಅಲ್ಲಿಂದ ಮೇದಿನಾಪುರಕ್ಕೆ ಪೈಪ್ಲೈನ್ ಮೂಲಕ ನೀರು ಒದಗಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಆ ನೀರು ಗ್ರಾಮದವರೆಗೆ ಬರಲೇ ಇಲ್ಲ.</p>.<p>‘2016ರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ನೀರು ಪೂರೈಕೆ ಮಾಡಿಕೊಳ್ಳಲು ಪೈಪ್ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ನೀರು ಪೂರೈಕೆ ಸುಗಮವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.</p>.<p>ಪೈದೊಡ್ಡಿ ಗ್ರಾಮಕ್ಕೆ 2009ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ವಿಶ್ವಸಂಸ್ಧೆ ನೆರವಿನ ಅಡಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆಗಾಗ ಮೋಟರ್ ದುರಸ್ತಿಗೆ ಬರುತ್ತಿದ್ದು, ನೀರಿನ ಸಮಸ್ಯೆಗೆ ಮಾತ್ರ ಹಾಗೆ ಉಳಿದಿದೆ.</p>.<p>ಕೊಳವೆ ಬಾವಿಯ ಆರ್ಸೆನಿಕ್ ಅಂಶ ಇರುವ ನೀರೆ ಇಲ್ಲಿನ ಜನರಿಗೆ ಆಧಾರ. ಶುದ್ದ ಕುಡಿಯುವ ನೀರು ಕಾಣದೆ ಜನ ಪರದಾಡಿದರೂ ಸಮಸ್ಯೆ ಕೇಳುವವರು ಮಾತ್ರ ಇಲ್ಲದಂತಾಗಿದೆ.</p>.<p>ಕಡ್ಡೋಣಿ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನ ಸಂಖ್ಯೆ ಇದೆ. ಈ ಗ್ರಾಮ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಅಂತರ್ಜಲ ಸಮಸ್ಯೆ ಇದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 2000ನೇ ಸಾಲಿನಲ್ಲಿ ₹18 ಲಕ್ಷ ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ಈವರೆಗೆ ಹನಿ ನೀರು ಕಂಡಿಲ್ಲ, ಹಟ್ಟಿ ರಸ್ತೆಯ ಹಳ್ಳದ ಪಕ್ಕದಲ್ಲಿ ಬೋರ್ವೆಲ್ ಇಲ್ಲಿನ ಜನರಿಗೆ ಆಸರೆಯಾಗಿದೆ.</p>.<p><strong>ಸ್ಪಂದಿಸದ ಅಧಿಕಾರಿಗಳು:</strong> ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ದೂರವಾಣಿ ಮೂಲಕ ಜನರು ಕರೆ ಮಾಡಿದರೆ ಎರಡು ದಿನದಿಂದ ಕರೆ ಸ್ವೀಕರಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಫ್ಲೋರೈಡ್ ಆರ್ಸೆಸಿಕ್ ಅಂಶ ಇರುವ ನೀರೆ ಆಧಾರ ಗ್ರಾಮಗಳಿಗೆ ಹಲವು ಯೋಜನೆ ತಂದರೂ ವಿಫಲ ಅರ್ಧಕ್ಕೆ ನಿಂತ ಕೆಲ ಯೋಜನೆಗಳಿಗೆ ಬೇಕಿದೆ ಕಾಯಕಲ್ಪ</p>.<p><strong>ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ಮಾಡಲಾಗುವುದು </strong></p><p><strong>-ಮಾನಪ್ಪ ವಜ್ಜಲ್ ಶಾಸಕ</strong></p>.<p><strong>ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಗಮನಹರಿಸಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು</strong></p><p><strong>-ಶೀಲವಂತ ಹಣಗಿ ಮೇದಿನಾಪುರ ಗ್ರಾಮಸ್ಧ</strong></p>.<p><strong>ಯಲಗಟ್ಟಾ ಗ್ರಾಮದ ಜನರು ನೀರಿಗಾಗಿ ನಿತ್ಯ ಪರದಾಡುತ್ತಿದ್ದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು</strong></p><p><strong>- ಅಣ್ಣರಾಯ ಯಲಗಟ್ಟಾ ಗ್ರಾಮಸ್ಧ</strong></p>.<p> <strong>ಯಲಗಟ್ಟಾ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಹಳ್ಳದಲ್ಲಿ ಬಾವಿ ತೋಡಿ ನೀರು ಪೂರೈಕೆ ಮಾಡಲಾಗುತ್ತಿದೆ </strong></p><p><strong>-ನಜೀರ್ಸಾಬ್ ರೋಡಲಬಂಡ (ತವಗ) ಗ್ರಾ. ಪಂ ಪಿಡಿಒ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ</strong>: ಸಮೀಪದ ಕೋಠಾ, ಕಡ್ಡೋಣಿ, ಯಲಗಟ್ಟಾ ಮೇದಿನಾಪುರ ಗ್ರಾಮದಲ್ಲಿ ಜಾರಿಗೊಳಿಸಿದ ಹಲವು ಕುಡಿಯುವ ನೀರಿನ ಯೋಜನೆಗಳು ವಿಫಲಗೊಂಡು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ.</p>.<p>ಯಲಗಟ್ಟಾ ಗ್ರಾಮದಲ್ಲಿ 3 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ ಬೋರ್ವೆಲ್ ಕೊರೆದರೂ ಶುದ್ದನೀರು ಸಿಗುವುದಿಲ್ಲ. ಫ್ಲೋರೈಡ್, ಆರ್ಸೆನಿಕ್ ಅಂಶ ಇರುವ ನೀರು ಕುಡಿಯಬೇಕಾದ ಪರಿಸ್ಧಿತಿ ಇದೆ. ₹15 ಲಕ್ಷ ವೆಚ್ಚದಲ್ಲಿ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿನ ಎನ್ನಾಬ್ರಿಸ್ ಮುಖ್ಯ ನಾಲೆಯಿಂದ ನೀರು ಪೂರೈಕೆಗಾಗಿ ಕಾಮಗಾರಿ ಕೈಗೊಳ್ಳಲಾಗಿತ್ತು. ಅದೂ ಅರ್ಧಕ್ಕೆ ನಿಂತಿದೆ.</p>.<p>ಪೈಪ್ಲೈನ್ ಅಳವಡಿಕೆಗೆ ₹10 ಲಕ್ಷ ಅನುದಾನ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಜಿಲ್ಲಾ ಪಂಚಾಯಿತಿಯಿಂದ ₹10 ಲಕ್ಷ ಅನುದಾನ ನೀಡಿ ಯಲಗಟ್ಟಾ ಗ್ರಾಮದ ಗುಡ್ಡದಲ್ಲಿ ಫಿಲ್ಟರ್ ಟ್ಯಾಂಕ್ ಅಳವಡಿಸಿ ಶುದ್ಧ ನೀರು ಪೂರೈಕೆಗೆ ಯೋಜನೆ ರೂಪಿಸಿತ್ತು. ನೀರು ಬರುವ ಮುನ್ನವೇ ಯೋಜನೆ ವಿಫಲವಾಯಿತು.</p>.<p>ಮೇದಿನಾಪುರ ಗ್ರಾಮದ ನೀರಿನ ಸಮಸ್ಯೆ ನಿಗೀಸಲು ₹ 28 ಲಕ್ಷ ವೆಚ್ಚದಲ್ಲಿ ಅಮರೇಶ್ವರ ಹತ್ತಿರದಲ್ಲಿ ಬೋರ್ವೆಲ್ ಕೊರೆಸಿ ಅಲ್ಲಿಂದ ಮೇದಿನಾಪುರಕ್ಕೆ ಪೈಪ್ಲೈನ್ ಮೂಲಕ ನೀರು ಒದಗಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಆ ನೀರು ಗ್ರಾಮದವರೆಗೆ ಬರಲೇ ಇಲ್ಲ.</p>.<p>‘2016ರಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ನೀರು ಪೂರೈಕೆ ಮಾಡಿಕೊಳ್ಳಲು ಪೈಪ್ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ನೀರು ಪೂರೈಕೆ ಸುಗಮವಾಗಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.</p>.<p>ಪೈದೊಡ್ಡಿ ಗ್ರಾಮಕ್ಕೆ 2009ರಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ವಿಶ್ವಸಂಸ್ಧೆ ನೆರವಿನ ಅಡಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆಗಾಗ ಮೋಟರ್ ದುರಸ್ತಿಗೆ ಬರುತ್ತಿದ್ದು, ನೀರಿನ ಸಮಸ್ಯೆಗೆ ಮಾತ್ರ ಹಾಗೆ ಉಳಿದಿದೆ.</p>.<p>ಕೊಳವೆ ಬಾವಿಯ ಆರ್ಸೆನಿಕ್ ಅಂಶ ಇರುವ ನೀರೆ ಇಲ್ಲಿನ ಜನರಿಗೆ ಆಧಾರ. ಶುದ್ದ ಕುಡಿಯುವ ನೀರು ಕಾಣದೆ ಜನ ಪರದಾಡಿದರೂ ಸಮಸ್ಯೆ ಕೇಳುವವರು ಮಾತ್ರ ಇಲ್ಲದಂತಾಗಿದೆ.</p>.<p>ಕಡ್ಡೋಣಿ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನ ಸಂಖ್ಯೆ ಇದೆ. ಈ ಗ್ರಾಮ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಅಂತರ್ಜಲ ಸಮಸ್ಯೆ ಇದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 2000ನೇ ಸಾಲಿನಲ್ಲಿ ₹18 ಲಕ್ಷ ವೆಚ್ಚದಲ್ಲಿ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ ಈವರೆಗೆ ಹನಿ ನೀರು ಕಂಡಿಲ್ಲ, ಹಟ್ಟಿ ರಸ್ತೆಯ ಹಳ್ಳದ ಪಕ್ಕದಲ್ಲಿ ಬೋರ್ವೆಲ್ ಇಲ್ಲಿನ ಜನರಿಗೆ ಆಸರೆಯಾಗಿದೆ.</p>.<p><strong>ಸ್ಪಂದಿಸದ ಅಧಿಕಾರಿಗಳು:</strong> ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ದೂರವಾಣಿ ಮೂಲಕ ಜನರು ಕರೆ ಮಾಡಿದರೆ ಎರಡು ದಿನದಿಂದ ಕರೆ ಸ್ವೀಕರಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.</p>.<p>ಫ್ಲೋರೈಡ್ ಆರ್ಸೆಸಿಕ್ ಅಂಶ ಇರುವ ನೀರೆ ಆಧಾರ ಗ್ರಾಮಗಳಿಗೆ ಹಲವು ಯೋಜನೆ ತಂದರೂ ವಿಫಲ ಅರ್ಧಕ್ಕೆ ನಿಂತ ಕೆಲ ಯೋಜನೆಗಳಿಗೆ ಬೇಕಿದೆ ಕಾಯಕಲ್ಪ</p>.<p><strong>ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶ ಮಾಡಲಾಗುವುದು </strong></p><p><strong>-ಮಾನಪ್ಪ ವಜ್ಜಲ್ ಶಾಸಕ</strong></p>.<p><strong>ಕುಡಿಯುವ ನೀರಿನ ಯೋಜನೆಗಳು ವಿಫಲವಾಗಿವೆ. ಜನಪ್ರತಿನಿಧಿಗಳು ಗಮನಹರಿಸಿ ಗ್ರಾಮಕ್ಕೆ ಶುದ್ದ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು</strong></p><p><strong>-ಶೀಲವಂತ ಹಣಗಿ ಮೇದಿನಾಪುರ ಗ್ರಾಮಸ್ಧ</strong></p>.<p><strong>ಯಲಗಟ್ಟಾ ಗ್ರಾಮದ ಜನರು ನೀರಿಗಾಗಿ ನಿತ್ಯ ಪರದಾಡುತ್ತಿದ್ದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು</strong></p><p><strong>- ಅಣ್ಣರಾಯ ಯಲಗಟ್ಟಾ ಗ್ರಾಮಸ್ಧ</strong></p>.<p> <strong>ಯಲಗಟ್ಟಾ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಹಳ್ಳದಲ್ಲಿ ಬಾವಿ ತೋಡಿ ನೀರು ಪೂರೈಕೆ ಮಾಡಲಾಗುತ್ತಿದೆ </strong></p><p><strong>-ನಜೀರ್ಸಾಬ್ ರೋಡಲಬಂಡ (ತವಗ) ಗ್ರಾ. ಪಂ ಪಿಡಿಒ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>