ತಾಲ್ಲೂಕಿನ ಬನ್ನಿಗೋಳ, ಜಾಂತಾಪುರ, ಮುದಗಲ್ಲ, ಕಡದರಹಾಳ, ಹುನಕುಂಟಿ, ಕಸಬಾಲಿಂಗಸುಗೂರು, ಹುಲಿಗುಡ್ಡ, ಕರಡಕಲ್ಲ, ಚಿಕಲೆರದೊಡ್ಡಿ, ಹೊನ್ನಹಳ್ಳಿ, ಯರಡೋಣಿ, ಅಡವಿಭಾವಿ, ಗುಂತಗೋಳ ಸೇರಿದಂತೆ ಇತರೆ ಗ್ರಾಮಗಳ ಜಮೀನು ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಬಹುತೇಕ ರೈತರಿಗೆ ಇಂದಿಗೂ ನೋಟಿಸ್ ಬಂದಿಲ್ಲ. ಬಂದಿರುವ ನೋಟಿಸ್ಗಳಲ್ಲಿ ಮನಸೋ ಇಚ್ಛೆ ದರ ನಿಗದಿಪಡಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.