ರಾಯಚೂರು: ಜಿಲ್ಲೆಯಲ್ಲಿ ಮೇವು ಸಾಗಿಸುವ ಟ್ರ್ಯಾಕ್ಟರ್ನಲ್ಲಿ ಬೆಂಕಿ ಅವಘಡ ಘಟನೆಗಳು ಮರುಕಳಿಸುತ್ತಿವೆ.
ಶಕ್ತಿನಗರ ಬಳಿಯ ಯರಗುಂಟ ಗ್ರಾಮದಲ್ಲಿ ಟ್ರ್ಯಾಕ್ಟರ್ನಲ್ಲಿ ಕೊಂಡೊಯ್ಯುತ್ತಿದ್ದ ಮೇವಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೇವು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಸೋಮವಾರ ನಡೆದಿದೆ.
ಮೇವು ಯರಗುಂಟ ಗ್ರಾಮದ ತಿಮ್ಮಾರೆಡ್ಡಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ₹ 50 ಸಾವಿರ ನಷ್ಟ ಉಂಟಾಗಿದೆ.
ಮೇವಿಗೆ ವಿದ್ಯುತ್ ತಂತಿ ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಟ್ರ್ಯಾಕ್ಟರ್ ಚಾಲಕ ಎಂಜಿನ್ ಬೇರ್ಪಡಿಸಿದ ಸಾಹಸದ ವಿಡಿಯೋ ವೈರಲ್ ಆಗಿದೆ.
ಯಾವುದೇ ಜೀವಕ್ಕೆ ಹಾನಿಯಾಗಿಲ್ಲ. ಸ್ಥಳಕ್ಕೆ ಧಾವಿಸಿದ ರಾಯಚೂರು ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.