ಗುರ್ಜಾಪೂರ, ಕಾಡ್ಲೂರು, ಗುಂಜಳ್ಳಿ, ದೇವಸುಗೂರು, ಕರೆಕಲ್, ಕೊರ್ವಿಹಳ್ಳಿ, ಕೊರ್ತಕುಂದಾ, ಡಿ.ರಾಂಪೂರ, ಆತ್ಕೂರು, ಬೂರ್ದಿಪಾಡ, ಕುರ್ವಕಲಾ, ಕುರವಕುರ್ದಾ ಗ್ರಾಮಗಳ ನೂರಾರು ಎಕರೆ ಭತ್ತದ ಬೆಳೆಗಳು ಕೃಷ್ಣಾನದಿ ಪ್ರವಾಹದಲ್ಲಿ ಮುಳುಗಿವೆ. ನಾಲ್ಕು ಅಡಿಯಷ್ಟು ಬೆಳೆದಿದ್ದ ಭತ್ತವು ಕಟಾವು ಹಂತದಲ್ಲಿತ್ತು. ಇದುವರೆಗೂ ಅತೀಯಾಗಿ ಸುರಿದ ಮಳೆಯಿಂದ ಭತ್ತಕ್ಕೆ ರೋಗಬಾಧೆ ಕಾಣಿಸಿಕೊಂಡಿತ್ತು. ಅದರಲ್ಲಿ ಅಲ್ಪ ಭತ್ತದ ಬೆಳೆಯಾದರೂ ಕೈ ಸೇರುತ್ತದೆ ಎನ್ನುವ ನಿರೀಕ್ಷೆ ರೈತರಲ್ಲಿತ್ತು. ಆದರೆ ಕೃಷ್ಣಾನದಿ ಪ್ರವಾಹ ಅಲ್ಪ ಬೆಳೆಯನ್ನೂ ಆಹುತಿ ಪಡೆದಿದೆ.