ರೆಡ್ಕ್ರಾಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ಆಶ್ರಮ ಸಹಯೋಗದಲ್ಲಿ ಇಡಪನೂರು, ಪಿಡಗಲದಿನ್ನಿ, ತಲಮಾರಿ, ಮಿರ್ಜಾಪೂರ, ಮೀರಾಪೂರ, ಗುಂಜಳ್ಳಿ, ಜಂಬಲದಿನ್ನಿ, ಗೋನವಾರ ಹಾಗೂ ರಾಯಚೂರು ನಗರದ ವಿವಿಧ ಬಡಾವಣೆಯಲ್ಲಿರುವ ಕುಟುಂಬಗಳಿಗೆ ಕಿಟ್ಗಳನ್ನು ತಲುಪಿಸಲಾಗುತ್ತಿದೆ ಎಂದು ರಾಮಕೃಷ್ಣ ಆಶ್ರಮ ಜಪಾನಂದ ಸ್ವಾಮಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.