<p><strong>ಲಿಂಗಸುಗೂರು:</strong> ಡಾ.ರವಿಕುಮಾರ ಹೇರೂರು ನರಕಲದಿನ್ನಿ ಸ್ಮರಣಾರ್ಥ ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನ.13ರಂದು ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಆನಂದ ಹೇರೂರು ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಆಯುರ್ವೇದ ವೈದ್ಯರಾಗಿದ್ದ ಡಾ.ರವಿಕುಮಾರ ಹೇರೂರು ಸ್ಮರಣಾರ್ಥ ಡಾ.ನಿರ್ಮಲಾ ಕನ್ನಾಳ, ಡಾ.ಅಕ್ಷಯಕುಮಾರ ಹೇರೂರು ಅವರ ನೇತ್ರತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರ ನಡೆಯಲಿದೆ’ ಎಂದರು.</p>.<p>‘ಹಲ್ಲುನೋವು, ಮುಖದ ಕರಿ ಬಂಗು, ಅಸ್ತಮಾ, ಮೂಲವ್ಯಾಧಿ, ಮೊಣಕಾಲು ನೋವು, ಅಲರ್ಜಿ, ಗ್ಯಾಸ್ಟ್ರಿಕ್ ಹಾಗೂ ಕಣ್ಣಿನ ತೊಂದರೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಿ ಔಷಧ ನೀಡಲಾಗುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನರು ಶಿಬಿರವನ್ನು ಸುದಪಯೋಗಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.</p>.<p>ಸಮಾರಂಭದಲ್ಲಿ ಸಿದ್ಧರಾಮಾನಂದಪುರಿ ಸ್ವಾಮೀಜಿ, ಚಿದಾನಂದಯ್ಯ ಗುರುವಿನ, ಮಾದಯ್ಯ ಗುರುವಿನ, ಮಾಜಿ ಸಂಸದ ವಿರೂಪಾಕ್ಷಪ್ಪ, ಅರವಿಂದ ಆಯುರ್ವೇದ ಸೇವಾಶ್ರಮದ ಅಧ್ಯಕ್ಷ ದ್ಯಾಮಣ್ಣ ಹೇರೂರು, ಕುಮಾರಸ್ವಾಮಿ ಕಸಬಾಲಿಂಗಸುಗೂರು, ರಾಜಾ ಚನ್ನಪ್ಪ ನಾಯಕ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.</p>.<p>ವೈದ್ಯರಾದ ರಾಘವೇಂದ್ರ ಸುಗಂಧಿ ಹಾಗೂ ಗಣೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ಡಾ.ರವಿಕುಮಾರ ಹೇರೂರು ನರಕಲದಿನ್ನಿ ಸ್ಮರಣಾರ್ಥ ಪಟ್ಟಣದ ಬಸವಸಾಗರ ಕ್ರಾಸ್ ಬಳಿ ನ.13ರಂದು ಬೆಳಿಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ಅಧ್ಯಕ್ಷ ಆನಂದ ಹೇರೂರು ತಿಳಿಸಿದರು.</p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಆಯುರ್ವೇದ ವೈದ್ಯರಾಗಿದ್ದ ಡಾ.ರವಿಕುಮಾರ ಹೇರೂರು ಸ್ಮರಣಾರ್ಥ ಡಾ.ನಿರ್ಮಲಾ ಕನ್ನಾಳ, ಡಾ.ಅಕ್ಷಯಕುಮಾರ ಹೇರೂರು ಅವರ ನೇತ್ರತ್ವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರ ನಡೆಯಲಿದೆ’ ಎಂದರು.</p>.<p>‘ಹಲ್ಲುನೋವು, ಮುಖದ ಕರಿ ಬಂಗು, ಅಸ್ತಮಾ, ಮೂಲವ್ಯಾಧಿ, ಮೊಣಕಾಲು ನೋವು, ಅಲರ್ಜಿ, ಗ್ಯಾಸ್ಟ್ರಿಕ್ ಹಾಗೂ ಕಣ್ಣಿನ ತೊಂದರೆಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ ಮಾಡಿ ಔಷಧ ನೀಡಲಾಗುತ್ತದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಜನರು ಶಿಬಿರವನ್ನು ಸುದಪಯೋಗಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.</p>.<p>ಸಮಾರಂಭದಲ್ಲಿ ಸಿದ್ಧರಾಮಾನಂದಪುರಿ ಸ್ವಾಮೀಜಿ, ಚಿದಾನಂದಯ್ಯ ಗುರುವಿನ, ಮಾದಯ್ಯ ಗುರುವಿನ, ಮಾಜಿ ಸಂಸದ ವಿರೂಪಾಕ್ಷಪ್ಪ, ಅರವಿಂದ ಆಯುರ್ವೇದ ಸೇವಾಶ್ರಮದ ಅಧ್ಯಕ್ಷ ದ್ಯಾಮಣ್ಣ ಹೇರೂರು, ಕುಮಾರಸ್ವಾಮಿ ಕಸಬಾಲಿಂಗಸುಗೂರು, ರಾಜಾ ಚನ್ನಪ್ಪ ನಾಯಕ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.</p>.<p>ವೈದ್ಯರಾದ ರಾಘವೇಂದ್ರ ಸುಗಂಧಿ ಹಾಗೂ ಗಣೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>