ಗಣೇಶ ಮಂಡಳಿಗಳು ಪ್ರತಿದಿನವೂ ಸ್ಯಾನಿಟೈಜ್ ಮಾಡಬೇಕು. 20 ಕ್ಕೂ ಹೆಚ್ಚು ಜನರು ಒಂದೇ ಕಡೆಯಲ್ಲಿ ಇರುವಂತಿಲ್ಲ. ಪ್ರತಿವರ್ಷದಂತೆ ಖಾಸಭಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಅವಕಾಶ ಮಾಡಲಾಗಿದೆ. ಆದರೆ, ಗಣೇಶನ ಮೆರವಣಿಗೆ ಮಾಡವಂತಿಲ್ಲ. ಐದು ದಿನಗಳವರೆಗೆ ಮಾತ್ರ ಗಣೇಶ ಪ್ರತಿಷ್ಠಾಪಿಸಬೇಕು. ಕೊನೆಯ ದಿನದಂದು ನಗರಸಭೆಯಿಂದ ಸಂಚರಿಸುವ ವಾಹನಕ್ಕೆ ಗಣೇಶನನ್ನು ಹಸ್ತಾಂತರಿಸಬೇಕು. ಸಂಪ್ರದಾಯ ಪ್ರಕಾರವೇ ಖಾಸಭಾವಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಮಾಡುವುದಕ್ಕೆ ನಗರಸಭೆಯಿಂದಲೇ ಪೂಜೆ ಸಲ್ಲಿಸುವ ವ್ಯವಸ್ಥೆ ಮಾಡಲಾಗುತ್ತದೆ.