ಹನುಮ ದೇವರನ್ನು ಪ್ರಾಣ ದೇವರು ಎಂತಲೂ ಕರೆಯಲಾಗುತ್ತದೆ. ದೇಹಕ್ಕೆ ಪ್ರಾಣ ಎಷ್ಟು ಮುಖ್ಯವೋ, ಅದರಂತೆ ನೆಮ್ಮದಿಯಿಂದ ಜೀವನ ನಡೆಸಲು ಹನುಮನ ಸ್ಮರಣೆಯೂ ಮುಖ್ಯವಾಗಿದೆ. ನಿತ್ಯ ಹನುಮ ದೇವರನ್ನು ಸ್ಮರಿಸಿ ಪೂಜೆ ಮಾಡಿದರೆ, ಎಲ್ಲ ಕೆಲಸಗಳು ಸರಳವಾಗಿ ನಡೆಯುತ್ತವೆ. ದೇಶದೆಲ್ಲೆಡೆ ಕೊರೊನಾ ತೊಲಗಲಿ, ಶಾಂತಿ, ನೆಮ್ಮದಿ, ಸೌಹಾರ್ದತೆ ನೆಲೆಸಲಿ ಎಂದು ಅರ್ಚಕರು ಪ್ರಾರ್ಥಿಸಿದರು.