ರಾಯಚೂರು: ನಗರದ ಕೃಷ್ಣಸ್ವಾಮಿ ರೈಸ್ ಮಿಲ್, ಜಿ.ಶಂಕರ್ ಇಂಡಸ್ಟ್ರೀಸ್, ಚಂದ್ರಿಕಾ ರೈಸ್ಮಿಲ್ ಹಾಗೂ ನರಸಿಂಹ್ ರೈಸ್ ಮಿಲ್ಗಳ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.
50 ಕೆಜಿ ತೂಕದ 884 ಅಕ್ಕಿಚೀಲಗಳು ಪತ್ತೆಯಾಗಿವೆ. ಒಟ್ಟು ₹6 ಲಕ್ಷ ಮೌಲ್ಯದ ಅಕ್ಕಿ. ಕಡಿಮೆ ಹಣದಲ್ಲಿ ಅಕ್ಕಿ ಪಡೆದು, ಬ್ರ್ಯಾಂಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ದಾಸ್ತಾನು ಮಾಡಲಾಗಿತ್ತು ಎಂದು ತಿಳಿಸಲಾಗಿದೆ.
ರಾಯಚೂರು ಗ್ರಾಮೀಣ ಠಾಣೆ ಹಾಗೂ ಮಾರ್ಕೆಟ್ ಯಾರ್ಡ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.