<p><strong>ಜಾಲಹಳ್ಳಿ:</strong> ಪಟ್ಟಣದಲ್ಲಿ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಅಂಗವಾಗಿ ನಡೆಯುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳ ಖರೀದಿ ಮತ್ತು ಮಾರಾಟ ಭರ್ಜರಿಯಾಗಿದೆ. ಆದರೆ, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳು ಹಾಗೂ ರೈತರು ಸಂಕ ಷ್ಟ ಎದುರಿಸುತ್ತಿದ್ದಾರೆ.</p>.<p>ಶುಕ್ರವಾರ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಖಲಾದ ಕಾರಣ ಜಾನುವಾರುಗಳಿಗೆ ತೊಂದರೆ ಉಂಟಾಯಿತು.</p>.<p>ತೀವ್ರ ಬರಗಾಲ ಆವರಿಸಿದ್ದರೂ ಎತ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ರೈತರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಕೆಲವು ರೈತರು ಎತ್ತುಗಳನ್ನು ಬದಲಿಸುತ್ತಿರುವುದು ಕಂಡುಬರುತ್ತಿದೆ.</p>.<p>ಜಾತ್ರೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜಾನುವಾರುಗಳು ಕಂಡು ಬರದಿದ್ದರೂ ಒಂದು ಜೊತೆ ಎತ್ತು ಅಂದಾಜು ₹1 ಲಕ್ಷದಿಂದ ₹1.80 ಲಕ್ಷದವರೆಗೆ ಮಾರಾಟವಾಗುತ್ತಿವೆ.</p>.<p>ನಿಜವಾದ ರೈತರಿಗೆ ಎತ್ತುಗಳು ಬೇಕು. ಗ್ರಾಮೀಣ ಪ್ರದೇಶದಲ್ಲಿ ಮನೆ ಮುಂದೆ ಎರಡು ಎತ್ತುಗಳು ಇರಲೇಬೇಕು. ಇಲ್ಲವಾದರೆ ಒಕ್ಕಲುತನದ ಮನೆ ಎಂದು ಗುರುತಿಸುವುದಾದರೂ ಹೇಗೆ ಎಂದು ರೈತರು ಪ್ರಶ್ನಿಸುತ್ತಾರೆ.</p>.<p>ಮುಂಗಾರು ಉತ್ತಮ ರೀತಿಯಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗೆ ಎತ್ತುಗಳು ಬೇಕೇ ಬೇಕು ಎಂದು ನಾರಾಯಣ ತಾಂಡಾದ ರೈತ ಯಮನಪ್ಪ ₹1.20 ಲಕ್ಷ ನೀಡಿ ಎರಡು ಎತ್ತು ಖರೀದಿಸಿದರು.</p>.<p>ತಾಲ್ಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಇದೆ. ಆದ್ದರಿಂದ ನೀರಾವರಿ ಸೌಲಭ್ಯ ಇದೆ. ಕೃಷಿ ಚಟುವಟಿಕೆ ಮಾಡಲು ವರ್ಷಪೂರ್ತಿ ಎತ್ತುಗಳು ಬೇಕು. ಈ ವರ್ಷ ಸಹ ಮಳೆ ಕೈ ಕೊಟ್ಟರೆ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಸಿದ್ದಪ್ಪ ತಿಳಿಸಿದರು.</p>.<p>ಪ್ರತಿ ವರ್ಷ ಜಾತ್ರೆಯಲ್ಲಿ 15 ದಿ ಮಾರಾಟ ನಡೆಯುತ್ತಿತ್ತು. ಅದರೆ, ಈ ವರ್ಷ ಕೇವಲ 5 ದಿನ ನಡೆಯುವ ಸಾಧ್ಯತೆ ಇದೆ.</p>.<p>ಖರೀದಿ ಹಾಗೂ ಮಾರಾಟಕ್ಕೆ ಬಂದಿರುವ ರೈತರಿಗೆ ರಂಗನಾಥ ಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾಲಹಳ್ಳಿ:</strong> ಪಟ್ಟಣದಲ್ಲಿ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಅಂಗವಾಗಿ ನಡೆಯುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳ ಖರೀದಿ ಮತ್ತು ಮಾರಾಟ ಭರ್ಜರಿಯಾಗಿದೆ. ಆದರೆ, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳು ಹಾಗೂ ರೈತರು ಸಂಕ ಷ್ಟ ಎದುರಿಸುತ್ತಿದ್ದಾರೆ.</p>.<p>ಶುಕ್ರವಾರ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಖಲಾದ ಕಾರಣ ಜಾನುವಾರುಗಳಿಗೆ ತೊಂದರೆ ಉಂಟಾಯಿತು.</p>.<p>ತೀವ್ರ ಬರಗಾಲ ಆವರಿಸಿದ್ದರೂ ಎತ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ರೈತರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಕೆಲವು ರೈತರು ಎತ್ತುಗಳನ್ನು ಬದಲಿಸುತ್ತಿರುವುದು ಕಂಡುಬರುತ್ತಿದೆ.</p>.<p>ಜಾತ್ರೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜಾನುವಾರುಗಳು ಕಂಡು ಬರದಿದ್ದರೂ ಒಂದು ಜೊತೆ ಎತ್ತು ಅಂದಾಜು ₹1 ಲಕ್ಷದಿಂದ ₹1.80 ಲಕ್ಷದವರೆಗೆ ಮಾರಾಟವಾಗುತ್ತಿವೆ.</p>.<p>ನಿಜವಾದ ರೈತರಿಗೆ ಎತ್ತುಗಳು ಬೇಕು. ಗ್ರಾಮೀಣ ಪ್ರದೇಶದಲ್ಲಿ ಮನೆ ಮುಂದೆ ಎರಡು ಎತ್ತುಗಳು ಇರಲೇಬೇಕು. ಇಲ್ಲವಾದರೆ ಒಕ್ಕಲುತನದ ಮನೆ ಎಂದು ಗುರುತಿಸುವುದಾದರೂ ಹೇಗೆ ಎಂದು ರೈತರು ಪ್ರಶ್ನಿಸುತ್ತಾರೆ.</p>.<p>ಮುಂಗಾರು ಉತ್ತಮ ರೀತಿಯಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗೆ ಎತ್ತುಗಳು ಬೇಕೇ ಬೇಕು ಎಂದು ನಾರಾಯಣ ತಾಂಡಾದ ರೈತ ಯಮನಪ್ಪ ₹1.20 ಲಕ್ಷ ನೀಡಿ ಎರಡು ಎತ್ತು ಖರೀದಿಸಿದರು.</p>.<p>ತಾಲ್ಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಇದೆ. ಆದ್ದರಿಂದ ನೀರಾವರಿ ಸೌಲಭ್ಯ ಇದೆ. ಕೃಷಿ ಚಟುವಟಿಕೆ ಮಾಡಲು ವರ್ಷಪೂರ್ತಿ ಎತ್ತುಗಳು ಬೇಕು. ಈ ವರ್ಷ ಸಹ ಮಳೆ ಕೈ ಕೊಟ್ಟರೆ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಸಿದ್ದಪ್ಪ ತಿಳಿಸಿದರು.</p>.<p>ಪ್ರತಿ ವರ್ಷ ಜಾತ್ರೆಯಲ್ಲಿ 15 ದಿ ಮಾರಾಟ ನಡೆಯುತ್ತಿತ್ತು. ಅದರೆ, ಈ ವರ್ಷ ಕೇವಲ 5 ದಿನ ನಡೆಯುವ ಸಾಧ್ಯತೆ ಇದೆ.</p>.<p>ಖರೀದಿ ಹಾಗೂ ಮಾರಾಟಕ್ಕೆ ಬಂದಿರುವ ರೈತರಿಗೆ ರಂಗನಾಥ ಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>