ಧ್ವಜಾರೋಹಣದ ನಂತರ ಕೆಎಸ್ಆರ್ಪಿ ಡಿಎಆರ್ ನಾಗರಿಕ ಪೊಲೀಸ್ ಮಹಿಳಾ ಪೊಲೀಸ್ ಗೃಹ ರಕ್ಷಕ ದಳ ಅರಣ್ಯ ಇಲಾಖೆ ಎನ್ಸಿಸಿ ಕೆಡೆಟ್ ಸ್ಕೌಟ್ಸ್ ಮತ್ತು ಗೈಡ್ಸ್ ಭಾರತ ಸೇವಾ ದಳ ರವೀಂದ್ರನಾಥ ಟ್ಯಾಗೋರ್ ಪ್ರೌಢ ಶಾಲೆ ಸೇಂಟ್ ಮೇರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಪಥಸಂಚಲನ ನಡೆಸಿದರು.
ಬಳಲಿದ ವಿದ್ಯಾರ್ಥಿಗಳು
ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಳಲಿ ಕುಸಿದು ಕೆಳಗೆ ಬಿದ್ದರು. ಆಂಬುಲೆನ್ಸ್ನಲ್ಲಿದ್ದ ವೈದ್ಯಕೀಯ ತಂಡ ತಕ್ಷಣ ಬಾಲಕಿಗೆ ಚಿಕಿತ್ಸೆ ನೀಡಿತು. ಬಾಲಕನಿಗೂ ಉಪಾಚಾರ ಮಾಡಿತು. ಮಕ್ಕಳು ಧ್ವಜಾರೋಹಣ ಕಾರ್ಯಕ್ರಮಕ್ಕೆ ಬೆಳಿಗ್ಗೆ ಬೇಗ ಬಂದ ಕಾರಣ ತಲೆ ಸುತ್ತು ಬಂದಿತ್ತು. ಪಥ ಸಂಚಲನಕ್ಕೆ ಬಂದಿದ್ದ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಬೇಕಿತ್ತು. ಆದರೆ ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮಕ್ಕಳು ಬಳಲುವಂತಾಯಿತು ಎಂದು ಶಿಕ್ಷಕರು ಅಧಿಕಾರಿಗಳು ಗಮನಕ್ಕೆ ತಂದರು.