ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ರಾಯಚೂರು: ಅನ್ಯ ಭಾಷೆಯ ಸಂಪರ್ಕ ಸೇತುವೆಯಾಗಲಿದೆ ಕಸಾಪ : ಮಹೇಶ ಜೋಶಿ

Published : 23 ಆಗಸ್ಟ್ 2025, 4:47 IST
Last Updated : 23 ಆಗಸ್ಟ್ 2025, 4:47 IST
ಫಾಲೋ ಮಾಡಿ
Comments
ನೆರೆಯ ಜಿಲ್ಲೆಯಲ್ಲೇ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದರೂ ಕಸಾಪದಿಂದ ಯಾವುದೇ ಪತ್ರ ಅಥವಾ ಮಾಹಿತಿ ಬಂದಿಲ್ಲ
ರಂಗಣ್ಣ ಪಾಟೀಲ ಅಳ್ಳುಂಡಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ
ಮಂತ್ರಾಲಯದಲ್ಲಿ ಸಮ್ಮೇಳನ ಆಯೋಜಸಿದರೂ ರಾಯಚೂರು ಜಿಲ್ಲೆಯ ಕನ್ನಡ ಸಂಘಟನೆಗಳಿಗೆ ಆಹ್ವಾನ ನೀಡದೇ ಸರ್ವಾಧಿಕಾರ ಪ್ರವೃತ್ತಿ ಅನುಸರಿಸಲಾಗಿದೆ
ಫಲಗುಲ ನಾಗರಾಜ ಸಾಹಿತಿ
ಆಹ್ವಾನ ನೀಡದ ಕಸಾಪ:
ಅಸಮಾಧಾನ ಕನ್ನಡ ಸಾಹಿತ್ಯ ಪರಿಷತ್ತಿನ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ಗೋವಾ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಶ್ರಯದಲ್ಲಿ ಅಂತರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಎಂದು ಪೋಸ್ಟರ್‌ ಮೇಲೆ ಬರೆಯಲಾಗಿತ್ತು. ಆಂಧ್ರಪ್ರದೇಶ ತೆಲಂಗಾಣ ಹಾಗೂ ಮಂತ್ರಾಲಯದಿಂದ ಕೇವಲ 45 ಕಿ.ಮೀ ಅಂತರದಲ್ಲಿರುವ ಕನ್ನಡ ಸಂಘಟನೆಗಳಿಗೆ ಯಾವುದೇ ರೀತಿಯ ಆಹ್ವಾನ ನೀಡಿರಲಿಲ್ಲ. ಕಸಾಪ ಜಿಲ್ಲಾ ಘಟಕಕ್ಕೂ ಆಹ್ವಾನ ಪತ್ರಿಕೆಯನ್ನು ಕೊಟ್ಟಿರಲಿಲ್ಲ. ಹೀಗಾಗಿ ಗಡಿನಾಡು ಕನ್ನಡಿಗರು ಸಮ್ಮೇಳನದಿಂದ ಅಂತರ ಕಾಯ್ದುಕೊಂಡಿದ್ದರು. ಗಡಿನಾಡ ಮಾಧ್ಯಮಗಳು ಹಾಗೂ ಪತ್ರಿಕೆಗಳಿಗೂ ಆಹ್ವಾನ ಪತ್ರಿಕೆ ಕೊಟ್ಟಿರಲಿಲ್ಲ. ನಾಲ್ಕು ರಾಜ್ಯಗಳ ಸಮ್ಮೇಳನ ಇದಾಗಿದ್ದರೂ ಕಾರ್ಯಕ್ರಮದಲ್ಲಿ ಈ ರಾಜ್ಯಗಳ ಕನ್ನಡಿಗರ ಕೊರತೆ ಎದ್ದು ಕಾಣಿಸಿತು. ಕಸಾಪ ಕೇಂದ್ರ ಸಮಿತಿ ಹಾಗೂ ಮಹೇಶ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.
ಸಹಕಾರ ಸಂಘಗಳ ನಿಬಂಧಕರಿಗೆ ದೂರು
ಅನಂತಪುರ ಜಿಲ್ಲೆಯ ಅನಂತಪುರ ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ಕುಣೆ ಬಾಲರಾಜು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧ ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರಿಗೆ ದೂರು ಕೊಟ್ಟಿದ್ದಾರೆ. ಕರ್ನಾಟಕ ಗಡಿಭಾಗದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಅಧ್ಯಕ್ಷರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಬೇಕು. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸ್ವಂತ ಪ್ರಚಾರ ಲಾಭಕ್ಕಾಗಿ ಸಮ್ಮೇಳನ ಆಯೋಜಿಸಿದ್ದಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT