<p><strong>ಸಿರವಾರ (ರಾಯಚೂರು): </strong>'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೇ ಹುಚ್ಚು ಹಿಡಿದಿದೆ. ಹುಚ್ಚು ಹಿಡಿದವರಿಗೆ ಎಲ್ಲವೂ ಹುಚ್ಚಾಗಿ ಕಾಣುತ್ತದೆ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರತಿಟೀಕೆ ಮಾಡಿದರು.<br /><br />ಸಿರವಾರ ಪಟ್ಟಣದ ಚುಕ್ಕಿ ಸಭಾಂಗಣದಲ್ಲಿ ಬಿಜೆಪಿಯಿಂದ ಶುಕ್ರವಾರ ಏರ್ಪಡಿಸಿದ್ದ 'ಜನಸ್ವರಾಜ್ ಸಮಾವೇಶ'ದಲ್ಲಿ ಮಾತನಾಡಿದರು.<br />'ಅವರು ರಾಜಕೀಯಕ್ಕೆ ಹೇಗೆ ಬಂದಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರೌಡಿ ಶೀಟರ್ ರಾಮಚಂದ್ರ ಕೊತ್ವಾಲ್ ಜೊತೆ ಸೇರಿ ಡಿ.ಕೆ.ಶಿವಕುಮಾರ್ ರಾಜಕೀಯ ಆರಂಭಿಸಿದ್ದಾರೆ. ಆದರೆ ನಾನು ಬಡವರ ಜೊತೆಯಲ್ಲಿ ಬೆಳೆದು, ಸಿದ್ಧಾಂತದ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ' ಎಂದರು.<br /><br />'ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ಶ್ರೀಕಿ ಬಂಧನ ಮಾಡಿದರೆ ಕಾಂಗ್ರೆಸ್ ವಿನಾಕಾರಣ ಆರೋಪ ಶುರು ಮಾಡಿದ್ದಾರೆ. 2018 ರಲ್ಲಿ ಶ್ರೀಕಿಯನ್ನು ಏಕೆ ಬಂದಸಲಿಲ್ಲ' ಎಂದು ಕೇಳಿದರು.<br /><br />'ಜನಪರ ಕಾಯ್ದೆಗಳು ವಿಧಾನಸಭೆಯಲ್ಲಿ ಪಾಸಾಗುತ್ತವೆ. ಆದರೆ ಪರಿಷತ್ ನಲ್ಲಿ ಬಿಜೆಪಿ ಗೆ ಬಹುಮತವಿಲ್ಲ. ಜನಪರ ಕಾಯ್ದೆಗಳು ಜಾರಿ ಆಗುವುದಕ್ಕೆ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರು ಅವಕಾಶ ಮಾಡಬೇಕು. ಜಾತಿ, ಹಣ ನಗಣ್ಯ. ಬಿಜೆಪಿ ಸಿದ್ಧಾಂತವನ್ನು ನೋಡಿಕೊಂಡು ಮತ ನೀಡಬೇಕು. ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶ ಬದಲಾಗಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರವಾರ (ರಾಯಚೂರು): </strong>'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೇ ಹುಚ್ಚು ಹಿಡಿದಿದೆ. ಹುಚ್ಚು ಹಿಡಿದವರಿಗೆ ಎಲ್ಲವೂ ಹುಚ್ಚಾಗಿ ಕಾಣುತ್ತದೆ' ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರತಿಟೀಕೆ ಮಾಡಿದರು.<br /><br />ಸಿರವಾರ ಪಟ್ಟಣದ ಚುಕ್ಕಿ ಸಭಾಂಗಣದಲ್ಲಿ ಬಿಜೆಪಿಯಿಂದ ಶುಕ್ರವಾರ ಏರ್ಪಡಿಸಿದ್ದ 'ಜನಸ್ವರಾಜ್ ಸಮಾವೇಶ'ದಲ್ಲಿ ಮಾತನಾಡಿದರು.<br />'ಅವರು ರಾಜಕೀಯಕ್ಕೆ ಹೇಗೆ ಬಂದಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ರೌಡಿ ಶೀಟರ್ ರಾಮಚಂದ್ರ ಕೊತ್ವಾಲ್ ಜೊತೆ ಸೇರಿ ಡಿ.ಕೆ.ಶಿವಕುಮಾರ್ ರಾಜಕೀಯ ಆರಂಭಿಸಿದ್ದಾರೆ. ಆದರೆ ನಾನು ಬಡವರ ಜೊತೆಯಲ್ಲಿ ಬೆಳೆದು, ಸಿದ್ಧಾಂತದ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ' ಎಂದರು.<br /><br />'ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪಿಸುತ್ತಿದ್ದಾರೆ. ಶ್ರೀಕಿ ಬಂಧನ ಮಾಡಿದರೆ ಕಾಂಗ್ರೆಸ್ ವಿನಾಕಾರಣ ಆರೋಪ ಶುರು ಮಾಡಿದ್ದಾರೆ. 2018 ರಲ್ಲಿ ಶ್ರೀಕಿಯನ್ನು ಏಕೆ ಬಂದಸಲಿಲ್ಲ' ಎಂದು ಕೇಳಿದರು.<br /><br />'ಜನಪರ ಕಾಯ್ದೆಗಳು ವಿಧಾನಸಭೆಯಲ್ಲಿ ಪಾಸಾಗುತ್ತವೆ. ಆದರೆ ಪರಿಷತ್ ನಲ್ಲಿ ಬಿಜೆಪಿ ಗೆ ಬಹುಮತವಿಲ್ಲ. ಜನಪರ ಕಾಯ್ದೆಗಳು ಜಾರಿ ಆಗುವುದಕ್ಕೆ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರು ಅವಕಾಶ ಮಾಡಬೇಕು. ಜಾತಿ, ಹಣ ನಗಣ್ಯ. ಬಿಜೆಪಿ ಸಿದ್ಧಾಂತವನ್ನು ನೋಡಿಕೊಂಡು ಮತ ನೀಡಬೇಕು. ನರೇಂದ್ರ ಮೋದಿ ಅವರ ನಾಯಕತ್ವದಿಂದ ದೇಶ ಬದಲಾಗಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>