<p><strong>ಹಟ್ಟಿ ಚಿನ್ನದ ಗಣಿ:</strong> ಗೌಡೂರು ಗ್ರಾಮದ ಜನರಿಗೆ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ.</p>.<p>ಗೌಡೂರು ಗ್ರಾಮದಲ್ಲಿ ಎಎನ್ಎಂ ಆರೋಗ್ಯ ಕೇಂದ್ರವಿಲ್ಲದ ಕಾರಣ ಜನ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಧಿತಿ ಇದೆ.</p>.<p>ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನ ಕಾಯಿಲೆ ಬಿದ್ದರೆ, ದೂರದ ಊರುಗಳಿಗೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.</p>.<p>ಗೌಡೂರು ಹಾಗೂ ಮಾಚನೂರು ತಾಂಡಾ, ತವಗ, ರೋಡಲಬಂಡ, ಹಡಗಲಿ ತಾಂಡಾ ಸೇರಿದಂತೆ ಸುತ್ತಲಿನ 8 ರಿಂದ 10 ಹಳ್ಳಿಗಳಿಗೆ ಆರೋಗ್ಯ ಕೇಂದ್ರವಿಲ್ಲದಿರುವುದು ವಿಪರ್ಯಾಸದ ಸಂಗತಿ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಸಂಚಾರಿ ಚಿಕಿತ್ಸಾಲಯವೇ ಇವರಿಗೆ ಆಧಾರವಾಗಿದೆ.</p>.<p>ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. ಎಎನ್ಎಂ ಕೇಂದ್ರ ಆರಂಭಿಸಲು ಬೇಕಾದ ಅರ್ಹತೆಗಳೂ ಇವೆ. ಆದರೂ ಆರಂಭವಾಗಿಲ್ಲ. ಗ್ರಾ.ಪಂ ಹಾಗೂ ತಾ.ಪಂ. ಸದಸ್ಯರು ಗಮನಹರಿಸುತ್ತಿಲ್ಲ. ಅಧಿಕಾರಿಗಳೂ ಸಹ ಇತ್ತ ಬರುವುದಿಲ್ಲ ಎಂದು ನಿವಾಸಿಗಳು ದೂರುತ್ತಾರೆ.</p>.<p>ಈ ಹಿಂದೆ ಗೌಡೂರು ಗ್ರಾಮಕ್ಕೆ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ₹35 ಲಕ್ಷ ಬಿಡುಗಡೆ ಮಾಡಲಾಗಿತ್ತು. ಸ್ಧಳದ ಕೊರತೆಯಿಂದ ಅದನ್ನು ಕೈ ಬಿಡಲಾಯಿತು. ಆದರೆ ಈಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಧಳವಕಾಶ ಇದ್ದು, ಆರೋಗ್ಯ ಕೇಂದ್ರ ಸ್ಧಾಪನೆಗೆ ಆರೋಗ್ಯ ಇಲಾಖೆ ಮುಂದಾಗಬೇಕಾಗಿದೆ. ಈ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಗೌಡೂರು ಗ್ರಾಮದ ಜನರಿಗೆ ಆರೋಗ್ಯ ಸೇವೆಗಳು ಮರೀಚಿಕೆಯಾಗಿವೆ.</p>.<p>ಗೌಡೂರು ಗ್ರಾಮದಲ್ಲಿ ಎಎನ್ಎಂ ಆರೋಗ್ಯ ಕೇಂದ್ರವಿಲ್ಲದ ಕಾರಣ ಜನ ದೂರದ ಊರುಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಧಿತಿ ಇದೆ.</p>.<p>ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನ ಕಾಯಿಲೆ ಬಿದ್ದರೆ, ದೂರದ ಊರುಗಳಿಗೆ ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ.</p>.<p>ಗೌಡೂರು ಹಾಗೂ ಮಾಚನೂರು ತಾಂಡಾ, ತವಗ, ರೋಡಲಬಂಡ, ಹಡಗಲಿ ತಾಂಡಾ ಸೇರಿದಂತೆ ಸುತ್ತಲಿನ 8 ರಿಂದ 10 ಹಳ್ಳಿಗಳಿಗೆ ಆರೋಗ್ಯ ಕೇಂದ್ರವಿಲ್ಲದಿರುವುದು ವಿಪರ್ಯಾಸದ ಸಂಗತಿ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ ಸಂಚಾರಿ ಚಿಕಿತ್ಸಾಲಯವೇ ಇವರಿಗೆ ಆಧಾರವಾಗಿದೆ.</p>.<p>ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದೆ. ಎಎನ್ಎಂ ಕೇಂದ್ರ ಆರಂಭಿಸಲು ಬೇಕಾದ ಅರ್ಹತೆಗಳೂ ಇವೆ. ಆದರೂ ಆರಂಭವಾಗಿಲ್ಲ. ಗ್ರಾ.ಪಂ ಹಾಗೂ ತಾ.ಪಂ. ಸದಸ್ಯರು ಗಮನಹರಿಸುತ್ತಿಲ್ಲ. ಅಧಿಕಾರಿಗಳೂ ಸಹ ಇತ್ತ ಬರುವುದಿಲ್ಲ ಎಂದು ನಿವಾಸಿಗಳು ದೂರುತ್ತಾರೆ.</p>.<p>ಈ ಹಿಂದೆ ಗೌಡೂರು ಗ್ರಾಮಕ್ಕೆ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ₹35 ಲಕ್ಷ ಬಿಡುಗಡೆ ಮಾಡಲಾಗಿತ್ತು. ಸ್ಧಳದ ಕೊರತೆಯಿಂದ ಅದನ್ನು ಕೈ ಬಿಡಲಾಯಿತು. ಆದರೆ ಈಗ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಧಳವಕಾಶ ಇದ್ದು, ಆರೋಗ್ಯ ಕೇಂದ್ರ ಸ್ಧಾಪನೆಗೆ ಆರೋಗ್ಯ ಇಲಾಖೆ ಮುಂದಾಗಬೇಕಾಗಿದೆ. ಈ ಮೂಲಕ ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>