<p><strong>ಕಪಗಲ್ (ಮಾನ್ವಿ): </strong>ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಉಸ್ಮಾನ ಸಾಬ್ ಸಾಹುಕಾರ ಇವರ ಜಮೀನಿನಲ್ಲಿ ರೈತರಾದ ಶಿವರಾಯ ಮಹಾದೇವ ಮತ್ತು ವಾಲೇಕರ್ ಮಹಾದೇವ ಅವರು ತಮ್ಮ ಎತ್ತುಗಳಿಂದ 10 ತಾಸಿನಲ್ಲಿ 20 ಎಕರೆ ಹತ್ತಿ ಹೊಲದಲ್ಲಿ ಉಳುಮೆ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ.</p>.<p>ಬುಧವಾರ ನಸುಕಿನ ಜಾವ 3 ಗಂಟೆಗೆ ಎತ್ತುಗಳನ್ನು ಹೆಗಲುಗಟ್ಟಿದ ಈ ರೈತರು ಮಧ್ಯಾಹ್ನ 1ಗಂಟೆವರೆಗೆ ಜಮೀನು ಹದ ಮಾಡಿ 20 ಎಕರೆಯನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ತಾಲ್ಲೂಕಿನ ದದ್ದಲ ಗ್ರಾಮದ ರೈತ ಗುರುಪುತ್ರಪ್ಪ 10 ಗಂಟೆಯಲ್ಲಿ 16 ಎಕರೆ ಹತ್ತಿ ಹೊಲ ಉಳುಮೆ ಮಾಡಿದ್ದು ದಾಖಲೆಯಾಗಿತ್ತು.</p>.<p>ಈಗ ಕಪಗಲ್ ಗ್ರಾಮದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರು 10 ತಾಸಿನ ಅವಧಿಯಲ್ಲಿ 20 ಎಕರೆ ಉಳುಮೆ ಮಾಡಿ ದಾಖಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p>ಜಮೀನು ಉಳುಮೆ ಮಾಡುವ ಸಂದರ್ಭದಲ್ಲಿ ಜಮೀನಿನ ಮಾಲೀಕ ಉಸ್ಮಾನ್ ಸಾಬ್ ಸಾಹುಕಾರ ಮತ್ತು ಗ್ರಾಮಸ್ಥರು ಹಾಜರಿದ್ದರು.</p>.<p><strong>ಸನ್ಮಾನ:</strong> ಎತ್ತಗಳ ಮಾಲೀಕರಾದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರಿಗೆ ಮುಸ್ತಫಾ ಸಾಹುಕಾರ ಅವರು ತಲಾ 5 ತೊಲೆ ಬೆಳ್ಳಿ ಕಡಗ ನೀಡಿದರು. ಗ್ರಾಮದ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಉತ್ತರಬೂಪ ಮಹಾದೇವ ಅವರು ಎತ್ತುಗಳ ಮಾಲೀಕರಿಗೆ ₹ 5 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದರು.</p>.<p>ನಂತರ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷ ನಾಗನಗೌಡ ಬೊಮ್ಮನಾಳ, ಗ್ರಾಮದ ಮುಖಂಡರಾದ ಉಸ್ಮಾನ್ ಸಾಬ್ ಸಾಹುಕಾರ, ಇಸ್ಮಾಯಿಲ್ ಸಾಹುಕಾರ್, ಗೋವಿಂದಪ್ಪ ನಾಯಕ, ಕರಿಯಪ್ಪ ಮುರುಗಟ್ಟು, ಯಲ್ಲಯ್ಯ ನಾಯಕ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಪಗಲ್ (ಮಾನ್ವಿ): </strong>ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಉಸ್ಮಾನ ಸಾಬ್ ಸಾಹುಕಾರ ಇವರ ಜಮೀನಿನಲ್ಲಿ ರೈತರಾದ ಶಿವರಾಯ ಮಹಾದೇವ ಮತ್ತು ವಾಲೇಕರ್ ಮಹಾದೇವ ಅವರು ತಮ್ಮ ಎತ್ತುಗಳಿಂದ 10 ತಾಸಿನಲ್ಲಿ 20 ಎಕರೆ ಹತ್ತಿ ಹೊಲದಲ್ಲಿ ಉಳುಮೆ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ.</p>.<p>ಬುಧವಾರ ನಸುಕಿನ ಜಾವ 3 ಗಂಟೆಗೆ ಎತ್ತುಗಳನ್ನು ಹೆಗಲುಗಟ್ಟಿದ ಈ ರೈತರು ಮಧ್ಯಾಹ್ನ 1ಗಂಟೆವರೆಗೆ ಜಮೀನು ಹದ ಮಾಡಿ 20 ಎಕರೆಯನ್ನು ಪೂರ್ಣಗೊಳಿಸಿದ್ದಾರೆ. ಈ ಹಿಂದೆ ತಾಲ್ಲೂಕಿನ ದದ್ದಲ ಗ್ರಾಮದ ರೈತ ಗುರುಪುತ್ರಪ್ಪ 10 ಗಂಟೆಯಲ್ಲಿ 16 ಎಕರೆ ಹತ್ತಿ ಹೊಲ ಉಳುಮೆ ಮಾಡಿದ್ದು ದಾಖಲೆಯಾಗಿತ್ತು.</p>.<p>ಈಗ ಕಪಗಲ್ ಗ್ರಾಮದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರು 10 ತಾಸಿನ ಅವಧಿಯಲ್ಲಿ 20 ಎಕರೆ ಉಳುಮೆ ಮಾಡಿ ದಾಖಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<p>ಜಮೀನು ಉಳುಮೆ ಮಾಡುವ ಸಂದರ್ಭದಲ್ಲಿ ಜಮೀನಿನ ಮಾಲೀಕ ಉಸ್ಮಾನ್ ಸಾಬ್ ಸಾಹುಕಾರ ಮತ್ತು ಗ್ರಾಮಸ್ಥರು ಹಾಜರಿದ್ದರು.</p>.<p><strong>ಸನ್ಮಾನ:</strong> ಎತ್ತಗಳ ಮಾಲೀಕರಾದ ಶಿವರಾಯ ಮಹಾದೇವ ಮತ್ತು ಮಹಾದೇವ ವಾಲೇಕಾರ್ ಅವರಿಗೆ ಮುಸ್ತಫಾ ಸಾಹುಕಾರ ಅವರು ತಲಾ 5 ತೊಲೆ ಬೆಳ್ಳಿ ಕಡಗ ನೀಡಿದರು. ಗ್ರಾಮದ ಶಾಲೆಯ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಉತ್ತರಬೂಪ ಮಹಾದೇವ ಅವರು ಎತ್ತುಗಳ ಮಾಲೀಕರಿಗೆ ₹ 5 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಿದರು.</p>.<p>ನಂತರ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಗ್ರಾ.ಪಂ ಅಧ್ಯಕ್ಷ ನಾಗನಗೌಡ ಬೊಮ್ಮನಾಳ, ಗ್ರಾಮದ ಮುಖಂಡರಾದ ಉಸ್ಮಾನ್ ಸಾಬ್ ಸಾಹುಕಾರ, ಇಸ್ಮಾಯಿಲ್ ಸಾಹುಕಾರ್, ಗೋವಿಂದಪ್ಪ ನಾಯಕ, ಕರಿಯಪ್ಪ ಮುರುಗಟ್ಟು, ಯಲ್ಲಯ್ಯ ನಾಯಕ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>